6
  • Latest
Uttara Kannada It's difficult even if it rains here.. It's a loss even if it doesn't rain!

ದುಡ್ಡಿದ್ದವರು ಮಾಡಿದ ತಪ್ಪಿಗೆ ಅಮಾಯಕರಿಗೆ ಶಿಕ್ಷೆ: ಗುಡ್ಡದ ಅಂಚಿನ ಊರಿಗೆ ಗುಳೆ ಹೋಗುವ ಭೀತಿ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ದುಡ್ಡಿದ್ದವರು ಮಾಡಿದ ತಪ್ಪಿಗೆ ಅಮಾಯಕರಿಗೆ ಶಿಕ್ಷೆ: ಗುಡ್ಡದ ಅಂಚಿನ ಊರಿಗೆ ಗುಳೆ ಹೋಗುವ ಭೀತಿ!

AchyutKumar by AchyutKumar
in ರಾಜ್ಯ
Uttara Kannada It's difficult even if it rains here.. It's a loss even if it doesn't rain!

ಉತ್ತರ ಕನ್ನಡ ಜಿಲ್ಲೆಯಲ್ಲಿ ಅವಧಿ ಪೂರ್ವ ಮಳೆಗಾಲ ಶುರುವಾಗಿದ್ದು, ಗುಡ್ಡದ ಅಂಚಿನಲ್ಲಿರುವ ಊರುಗಳಲ್ಲಿ ಆತಂಕ ಹೆಚ್ಚಾಗಿದೆ. ಭೂ ಕುಸಿತದ ಮುನ್ನಚ್ಚರಿಕಾ ಕ್ರಮವಾಗಿ ಅಪಾಯದ ಸ್ಥಿತಿಯಲ್ಲಿರುವ ಊರಿನ ಜನರಿಗೆ ಜಿಲ್ಲಾಡಳಿತ ಊರು ತೊರೆಯುವಂತೆ ನೋಟಿಸ್ ನೀಡಿದೆ.

ADVERTISEMENT

ಉತ್ತರ ಕನ್ನಡ ಜಿಲ್ಲೆಯ ಅನೇಕ ಕಡೆ ಅವೈಜ್ಞಾನಿಕ ರೀತಿ ಗುಡ್ಡ ಕೊರೆಯಲಾಗಿದೆ. ಹೀಗಾಗಿ ಹಲವು ಊರುಗಳಲ್ಲಿ ಗುಡ್ಡ ಕುಸಿತದ ಆತಂಕ ಎದುರಾಗಿದೆ. ಜಿಲ್ಲೆಯಲ್ಲಿ ಈಗಾಗಲೇ 439 ಕಡೆ ಗುಡ್ಡ ಕುಸಿಯುವ ಸಾಧ್ಯತೆ ಬಗ್ಗೆ ತಜ್ಞರು ಎಚ್ಚರಿಕೆ ನೀಡಿದ್ದಾರೆ. ಅದರಲ್ಲಿ ಹಲವು ವಸತಿ ಪ್ರದೇಶಗಳು ಇದ್ದು, ಆ ವಸತಿ ಪ್ರದೇಶದ ಜನರನ್ನು ಇದೀಗ ಒಕ್ಕಲೆಬ್ಬಿಸಲಾಗುತ್ತಿದೆ. ದುಡ್ಡಿದ್ದವರು ಮಾಡಿದ ತಪ್ಪಿಗೆ ಅಮಾಯಕರು ಹಿಂಸೆ ಅನುಭವಿಸುತ್ತಿದ್ದಾರೆ.

ಜಿಲ್ಲೆಯ ಅನೇಕ ಕಡೆ ವ್ಯಾಪಕ ಪ್ರಮಾಣದಲ್ಲಿ ಬೆಟ್ಟ-ಗುಡ್ಡಗಳನ್ನು ಕೊರೆಯಲಾಗಿದೆ. ವಿವಿಧ ಸರ್ಕಾರಿ ಯೋಜನೆ, ಖಾಸಗಿ ರೆಸಾರ್ಟು, ರಸ್ತೆ-ತೋಟ ವಿಸ್ತರಣೆ ನೆಪದಲ್ಲಿ ಭಾರೀ ಪ್ರಮಾಣದ ಮಣ್ಣು ಅಗೆಯಲಾಗಿದೆ. ಪರಿಣಾಮ ಗುಡ್ಡದ ಮೇಲಿನ ಕಲ್ಬಂಡೆಗಳು ನೆಲಕ್ಕೆ ಅಪ್ಪಳಿಸುತ್ತಿದ್ದು, ಮರ-ಗಿಡಗಳ ಬುಡ ಸಡಿಲವಾಗಿದೆ. ಮಳೆ ನೀರು ಸರಾಗವಾಗಿ ಹೋಗಲು ದಾರಿಯೇ ಇಲ್ಲದ ಕಾರಣ ಗುಡ್ಡ ಕುಸಿತವಾಗುತ್ತಿದೆ. ಜಿಲ್ಲೆಯಲ್ಲಿ ಹಾದು ಹೋದ ರಾಷ್ಟಿಯ ಹೆದ್ದಾರಿಗಳ ಪೈಕಿ 19 ಕಡೆ ಗುಡ್ಡ ಕುಸಿತದ ಅಪಾಯದ ಸನ್ನಿವೇಶಗಳಿದೆ. ಮಳೆಗಾಲದ ಕಾರಣ ಹೆದ್ದಾರಿ ಅಂಚಿನಲ್ಲಿ ಅಂಗಡಿ ಹಾಕಿಕೊಂಡವರ ಬದುಕು ಅತಂತ್ರವಾಗಿದೆ.

Advertisement. Scroll to continue reading.

ಸದ್ಯ ಇನ್ನೂ ಜೋರು ಮಳೆಗಾಲ ಶುರುವಾಗಿಲ್ಲ. ಅದಾಗಿಯೂ ಗುಡ್ಡದ ತಪ್ಪಲಿನಲ್ಲಿರುವವರಲ್ಲಿನ ಆತಂಕ ಜೋರಾಗಿದೆ. ಇದಕ್ಕೆ ಪೂರಕವಾಗಿ ಮಳೆ ಶುರುವಾಗುವ ಮುನ್ನವೇ ಮನೆ ತೊರೆಯುವಂತೆ ಜಿಲ್ಲಾಡಳಿತ ನೋಟಿಸ್ ನೀಡುತ್ತಿದೆ. ಕಾರವಾರದಲ್ಲಿ 35, ಅಂಕೋಲಾದಲ್ಲಿ 39 ಜನವಸತಿ ಪ್ರದೇಶದ ಜನರಿಗೆಈಗಾಗಲೇ ನೋಟಿಸ್ ನೀಡಲಾಗಿದೆ. ಕುಮಟಾದಲ್ಲಿನ 12 ಊರುಗಳಲ್ಲಿನ 29 ಮನೆಗಳಿಗೆ ನೋಟಿಸ್ ನೀಡಲು ಉದ್ದೇಶಿಸಲಾಗಿದೆ. ಮನೆ ಖಾಲಿ ಮಾಡಿ ಕಾಳಜಿ ಕೇಂದ್ರದಲ್ಲಿ ಆಶ್ರಯಪಡೆಯುವಂತೆ ನೋಟಿಸ್ ಮೂಲಕ ಸೂಚಿಸಲಾಗುತ್ತಿದೆ.

Advertisement. Scroll to continue reading.

ಕಳೆದ ವರ್ಷ ಶಿರೂರು ಗುಡ್ಡ ಕುಸಿತವಾದ ಪರಿಣಾಮ ಜನ ಹೆದರಿದ್ದಾರೆ. ಇದರೊಂದಿಗೆ ಜಿಲ್ಲೆಯ ಅನೇಕ ಕಡೆ ಕಲ್ಪಂಡೆಗಳು ನೆಲಕ್ಕೆ ಅಪ್ಪಳಿಸುತ್ತಿದೆ. ಈ ನಡುವೆ ಮನೆ ಬಿಡುವಂತೆ ನೋಟಿಸ್ ಬಂದಿರುವುದರಿAದ ಜನ ಇನ್ನಷ್ಟು ಕಂಗಾಲಾಗಿದ್ದಾರೆ. ಶಾಲೆಗಳ ಪಕ್ಕದಲ್ಲಿಯೇ ಗುಡ್ಡ ಕುಸಿತ, ಶಾಲೆ ಒಳಗೆ ಮಳೆ ನೀರು ಬರುವುದರಿಂದ ಕಾಳಜಿ ಕೇಂದ್ರವನ್ನಾಗಿ ಪರಿವರ್ತಿಸಿದ ಶಾಲೆಗಳು ಎಷ್ಟು ಸುರಕ್ಷಿತ? ಎಂದು ಸಹ ಜನ ಪ್ರಶ್ನಿಸುತ್ತಿದ್ದಾರೆ.

Previous Post

ಪುಣ್ಯಕೋಟಿ ಗೋಶಾಲೆಗೆ ಹೊಸ ಅತಿಥಿ: ಕಸಾಯಿಖಾನೆಗೆ ಹೋಗುತ್ತಿದ್ದ ಹಸುಗಳಿಗೆ ಮರುಜೀವ!

Next Post

ಗಾಂಜಾ-ಮಟ್ಕಾ ಇತ್ಯಾದಿ!

Next Post
ಕಾಲಿಗೆ ಸುತ್ತಿದ ಬಲೆ: ಪಾತಿದೋಣಿಯಲ್ಲಿದ್ದ ಮೀನುಗಾರ ಸಾವು!

ಗಾಂಜಾ-ಮಟ್ಕಾ ಇತ್ಯಾದಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ