6
  • Latest
A yoga teacher by name: What he did was intoxicating!

ವಾಸನೆಯಿಂದ ಸಿಕ್ಕಿಬಿದ್ದ ವ್ಯಸನಿಗಳು: ದಾರಿ ತಪ್ಪಿದ ಮಕ್ಕಳಿಗೆ ಪೊಲೀಸ್ ಪಾಠ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ವಾಸನೆಯಿಂದ ಸಿಕ್ಕಿಬಿದ್ದ ವ್ಯಸನಿಗಳು: ದಾರಿ ತಪ್ಪಿದ ಮಕ್ಕಳಿಗೆ ಪೊಲೀಸ್ ಪಾಠ!

AchyutKumar by AchyutKumar
June 2, 2025
in ಸ್ಥಳೀಯ
A yoga teacher by name: What he did was intoxicating!
advt advt advt
ADVERTISEMENT

ಕಾನ್ಸರ್ ಸೇರಿ ಹಲವು ರೋಗಗಳಿಗೆ ಕಾರಣವಾಗಬಹುದಾದ ಗಾಂಜಾ ವ್ಯಸನಿಗಳ ಬಾಯಿಂದ ಗಬ್ಬು ವಾಸನೆ ಬರುತ್ತಿದ್ದು, ಆ ವಾಸನೆ ಆಧಾರದಲ್ಲಿಯೇ ಪೊಲೀಸರು ಇದೀಗ ವ್ಯಸನಿಗಳನ್ನು ಗುರುತಿಸುತ್ತಿದ್ದಾರೆ. ಒಂದೇ ದಿನ ಭಟ್ಕಳ ಪೊಲೀಸರು ಐದು ಗಾಂಜಾ ವ್ಯಸನಿಗಳ ವಿರುದ್ಧ ಕಾನೂನು ಕ್ರಮ ಜರುಗಿಸಿದ್ದಾರೆ. ಸಿಕ್ಕಿಬಿದ್ದ ಎಲ್ಲರೂ 24 ವರ್ಷ ಒಳಗಿನವರು!

ಭಟ್ಕಳದ ಹೆಬಳೆ ಬಳಿಯ ಹೆರ್ತಾರ್ ಗ್ರಾಮದ ಕಿರಣ ಗೋಪಾಲ ಮೊಗೇರ್ (21) ವರು ಬೋಟಿನಲ್ಲಿ ಕೆಲಸ ಮಾಡಿಕೊಂಡಿದ್ದರು. ಮೇ 31ರಂದು ಅವರು ಜಾಲಿ ದೇವಿನಗರ ಬಳಿಯ ಪ್ರಥಮ ದರ್ಜೆ ಕಾಲೇಜು ಬಳಿ ಗಾಂಜಾ ಸೇವಿಸಿ ಅಲೆದಾಡುತ್ತಿದ್ದರು. ಅವರ ಬಾಯಿಂದ ಬಂದ ಕೆಟ್ಟ ವಾಸನೆ ಆಧರಿಸಿ ಪಿಎಸ್‌ಐ ಶಾಂತಿನಾತ ಪಾಸಾನೆ ಅವರು ವಿಚಾರಣೆಗೆ ಒಳಪಡಿಸಿದರು. ಕಿರಣ ಮೊಗೇರ್ ಅವರು ಗಾಂಜಾ ಸೇವಿಸಿರುವುದನ್ನು ಒಪ್ಪಿಕೊಂಡಿದ್ದು, ಅದಾಗಿಯೂ ಪೊಲೀಸರು ಅವರ ಅರೋಗ್ಯ ತಪಾಸಣೆ ನಡೆಸಿದರು. ಆಗ ಗಾಂಜಾ ಸೇವನೆ ದೃಢವಾದ ಕಾರಣ ಪ್ರಕರಣ ದಾಖಲಿಸಿದರು.

Advertisement. Scroll to continue reading.
ADVERTISEMENT
ADVERTISEMENT

ಭಟ್ಕಳ ಹೆಬಳೆಯ ಹೆರ್ತಾರ್ ದೇವುಮನೆಯ ಚೇತನ ಮೊಗೇರ್ (23) ಸಹ ಮೀನುಗಾರಿಕೆ ಬಿಟ್ಟು ಗಾಂಜಾ ವ್ಯಸನದಲ್ಲಿ ತೊಡಗಿದ್ದರು. ದೇವಿನಗರ ಕರಿಕಲ್ ರಸ್ತೆಯಲ್ಲಿ ಅಲೆದಾಡುತ್ತಿದ್ದ ಅವರನ್ನು ಪಿಎಸ್‌ಐ ನವೀನ ನಾಯ್ಕ ವಿಚಾರಿಸಿದರು. ಚೇತನ್ ಮೊಗೇರ್ ಅವರ ಬಾಯಿ ಸಹ ಕೆಟ್ಟ ವಾಸನೆ ಬರುತ್ತಿದ್ದು, ಅವರು ಅಲ್ಲಿಯೇ ಗಾಂಜಾ ಸೇವಿಸಿದನ್ನು ಒಪ್ಪಿಕೊಂಡರು. ವೈದ್ಯಕೀಯ ಪರೀಕ್ಷೆಯಲ್ಲಿ ಸಹ ಗಾಂಜಾ ಸೇವಿಸಿರುವುದು ದೃಢವಾಗಿದ್ದರಿಂದ ಪೊಲೀಸರು ಪ್ರಕರಣ ದಾಖಲಿಸಿದರು.

ಅದೇ ದೇವುಮನೆಯ ಕಾರ್ತಿಕ ಮೊಗೇರ್ (24) ಸಹ ಅದೇ ದಿನ ಗಾಂಜಾ ಸೇವಿಸಿ ಪಿಎಸ್‌ಐ ಸೋಮರಾಜ ರಾಥೋಡ್ ಅವರ ಬಳಿ ಸಿಕ್ಕಿ ಬಿದ್ದರು. ದೇವಿನಗರದ ಪ್ರಥಮ ದರ್ಜೆ ಕಾಲೇಜಿನ ಬಳಿ ಗಾಂಜಾ ಸೇವಿಸಿದ್ದ ಕಾರ್ತಿಕ್ ಮೊಗೇರ್ ಅವರ ಬಳಿ ಗಬ್ಬು ವಾಸನೆ ಬರುತ್ತಿದ್ದು, ಪೊಲೀಸರು ಅವರ ಮೇಲೆ ದಾಳಿ ನಡೆಸಿದರು. ವೈದ್ಯರು ಸಹ ಕಾರ್ತಿಕ್ ಮೊಗೇರ್ ಗಾಂಜಾ ವ್ಯಸನಿ ಎಂದು ಪ್ರಮಾಣ ಪತ್ರ ನೀಡಿದರು. ಈ ಹಿನ್ನಲೆ ಕಾರ್ತಿಕ್ ಮೊಗೇರ್ ವಿರುದ್ಧವೂ ಪೊಲೀಸರು ಕಾನೂನು ಕ್ರಮ ಜರುಗಿಸಿದರು.

Advertisement. Scroll to continue reading.

ಭಟ್ಕಳ ಹೆಬಳೆ ಬಳಿಯ ಬೈದರಮನೆಯ ಪುನೀತ ಮೊಗೇರ್ (22) ಅವರು ಮೀನುಗಾರಿಕೆ ನಂಬಿ ಬದುಕಿದ್ದರು. ಮೀನುಗಾರಿಕೆ ಇಲ್ಲದ ಕಾರಣ ವ್ಯಸನದ ಹಾದಿ ಹಿಡಿದಿದ್ದರು. ಪ್ರಥಮ ದರ್ಜೆ ಕಾಲೇಜಿನ ಬಳಿ ಅಲೆದಾಡುತ್ತಿದ್ದ ಅವರ ಬಾಯಿ ವಾಸನೆ ನೋಡಿದ ಪೊಲೀಸರಿಗೆ ಮಾದಕ ವ್ಯಸನದ ಅನುಮಾನ ಮೂಡಿತು. ಈ ಹಿನ್ನಲೆ ಪುನೀತ ಮೊಗೇರ್ ಅವರನ್ನು ತಪಾಸಣೆಗೆ ಒಳಪಡಿಸಿದರು. ವೈದ್ಯರು ಪುನೀತ ಮೊಗೇರ್ ಸಹ ಗಾಂಜಾ ವ್ಯಸನದಿಂದ ಹೊರತಾಗಿಲ್ಲ ಎಂದು ಖಚಿತಪಡಿಸಿದರು. ಈ ಹಿನ್ನಲೆ ಪಿಎಸ್‌ಐ ನವೀನ ನಾಯ್ಕ ಅವರು ಪುನೀತ ಮೊಗೇರ್ ವಿರುದ್ಧವೂ ಪ್ರಕರಣ ದಾಖಲಿಸಿದ್ದಾರೆ.

ಹೆಬಳೆಯ ಹರ್ತಾರಿನ ಕಿರಣ ಲಂಬೋದರ ಮೊಗೇರ್ ಎಂಬಾತರು ಗಾಂಜಾ ಸೇವಿಸಿರುವುದನ್ನು ಅವರ ಬಾಯಿ ವಾಸನೆ ಮೂಲಕ ಪಿಎಸ್‌ಐ ತಿಮ್ಮಪ್ಪ ಎಸ್ ಅವರು ಕಂಡು ಹಿಡಿದಿದ್ದು, ಅವರ ವಿರುದ್ಧವೂ ಪ್ರಕರಣ ದಾಖಲಿಸಿ ಕಾನೂನು ಕ್ರಮ ಜರುಗಿಸಿದ್ದಾರೆ.

ShareSendTweetShare
ADVERTISEMENT
Previous Post

ದುರ್ಗಾಂಬಾ ಬಸ್ಸು: ಸರ್ಕಾರಿ ವಶದಲ್ಲಿ ಡಕೋಟಾ ಎಕ್ಸಪ್ರೆಸ್ಸು..!

Next Post

ಕೊರೊನಾ ಕಂಟಕ: ಸೋಂಕಿತ ಚಾಲಕ ಆಸ್ಪತ್ರೆಯಿಂದ ಪರಾರಿ!

Next Post
Corona crisis Infected driver escapes from hospital!

ಕೊರೊನಾ ಕಂಟಕ: ಸೋಂಕಿತ ಚಾಲಕ ಆಸ್ಪತ್ರೆಯಿಂದ ಪರಾರಿ!

The lure of double the money It was Mahmuda who gave Manjunatha three names!

ದುಪ್ಪಟ್ಟು ಹಣದ ಆಮೀಷ: ಮಂಜುನಾಥನಿಗೆ ಮೂರುನಾಮ ಹಾಕಿದವ ಮಹ್ಮದ!

ಸಿಲೆಂಡರ್ ಸ್ಪೋಟ: ಸ್ಥಿತಿ ಚಿಂತಾಜನಕ!

ಸಿಲೆಂಡರ್ ಸ್ಪೋಟ: ಸ್ಥಿತಿ ಚಿಂತಾಜನಕ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.