6
  • Latest
High school girls beware The dark face of the Congress leader The name of the activist is mentioned!

ಹೈಸ್ಕೂಲು ಹುಡುಗಿಯರೇ ಹುಷಾರು | ಕಾಂಗ್ರೆಸ್ ನಾಯಕನ ಕರಾಳ ಮುಖ: ಕಾರ್ಯಕರ್ತನ ಹೆಸರು ಪ್ರಸ್ತಾಪ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಹೈಸ್ಕೂಲು ಹುಡುಗಿಯರೇ ಹುಷಾರು | ಕಾಂಗ್ರೆಸ್ ನಾಯಕನ ಕರಾಳ ಮುಖ: ಕಾರ್ಯಕರ್ತನ ಹೆಸರು ಪ್ರಸ್ತಾಪ!

AchyutKumar by AchyutKumar
in ರಾಜಕೀಯ
High school girls beware The dark face of the Congress leader The name of the activist is mentioned!

ಉತ್ತರ ಕನ್ನಡ ಜಿಲ್ಲೆಯ ಕಾಂಗ್ರೆಸ್ ಮುಖಂಡರೊಬ್ಬರು ತಮ್ಮ ಕಾರ್ಯಕರ್ತರೊಬ್ಬರ ಜೊತೆ ಸೇರಿ ಹೈಸ್ಕೂಲ್ ಹುಡುಗಿಯರನ್ನು ಕಾಮದ ಆಟಕ್ಕೆ ಬಳಸುತ್ತಿರುವ ವಿಷಯ ಬಹಿರಂಗವಾಗಿದೆ. ತನ್ನ ಹುಡುಗಿಯನ್ನು ಉಳಿಸಿಕೊಳ್ಳಲು ರಕ್ಷಣಾ ಕಾರ್ಯಾಚರಣೆ ನಡೆಸಿದ ಪ್ರೇಮಿಯೊಬ್ಬ ಎಲ್ಲಾ ವಿಷಯದ ಬಗ್ಗೆ ದಾಖಲೆಗಳೊಂದಿಗೆ ವಿಡಿಯೋ ಮಾಡಿ ಆತ್ಮಹತ್ಯೆಗೆ ಶರಣಾಗಿದ್ದು, ಸಂಚಲನ ಮೂಡಿಸಿದೆ.

ADVERTISEMENT

ಸಿದ್ದಾಪುರದ ಸಂತೋಷ ಎಂಬಾತರು ಕಾಮಕೇಳಿ ದೃಶ್ಯಾವಳಿಗಳ `ಸ್ಟಿಂಗ್ ಆಪರೇಶನ್’ ನಡೆಸಿದ್ದಾರೆ. ಇದೇ ಕಾರಣದಿಂದ ಅವರ ಮೇಲೆ ದಾಳಿ ನಡೆದಿದ್ದು, ದಾಳಿಯ ವಿವರ ದಾಖಲಿಸಿ ಅವರು ಆತ್ಮಹತ್ಯೆಗೆ ಶರಣಾಗಿದ್ದಾರೆ. ಈ ಪ್ರಕರಣದಲ್ಲಿ ವಕೀಲರೊಬ್ಬರ ಹೆಸರು ತಳಕುಹಾಕಿಕೊಂಡಿದೆ. `ಸಿದ್ದಾಪುರದಲ್ಲಿ ಒಂದು ತಂಡ ಹೈಸ್ಕೂಲು ಹುಡುಗಿಯರನ್ನು ಪ್ರೀತಿ-ಪ್ರೇಮ ಹೆಸರಿನಲ್ಲಿ ಪರಿಚಯಿಸಿಕೊಂಡು ಅವರನ್ನು ಬಳಸಿಕೊಳ್ಳುತ್ತಿದೆ ಎಂಬ ಮಾಹಿತಿ ಬಂದಿತು. ಅವರು ಯಾರು ಎಂದು ತಿಳಿದುಕೊಳ್ಳಲು ತಾನು ನಕಲಿ ಐಡಿ ಸೃಷ್ಠಿಸಿ ಹುಡುಕಾಟ ನಡೆಸಿದೆ’ ಎನ್ನುತ್ತ ಸಂತೋಷ್ ವಿವಿಧ ದಾಖಲೆಗಳ ಜೊತೆ ಧ್ವನಿ ಮುದ್ರಣದ ವಿಡಿಯೋ ಹರಿಬಿಟ್ಟಿದ್ದಾರೆ.

ಸಾವಿಗೂ ಮುನ್ನ ಹೈಸ್ಕೂಲು ಹುಡುಗಿಯರ ಜೊತೆ ನಡೆಸಿದ ಅಶ್ಲೀಲ ಸಂಭಾಷಣೆ, ಬಾಲಕಿಯರ ಬೆತ್ತಲೆ ಫೋಟೋ, ಅಪ್ರಾಪ್ತರ ಜೊತೆ ಪುರುಷನೊಬ್ಬ ಸರಸ-ಸಲ್ಲಾಪದಲ್ಲಿ ತೊಡಗಿದ ಚಿತ್ರಣದ ದಾಖಲೆಗಳೊಂದಿಗೆ ಸಂತೋಷ್ ವಿಡಿಯೋ ಮಾಡಿದ್ದಾರೆ. ಅಶ್ಲೀಲ ಸಂದೇಶ ರವಾನೆ, ದೇಹದ ಅಂಗಾoಗಗಳು ಕಾಣುವ ಚಿತ್ರಗಳ ವಿನಿಮಯ ನಡೆದದನ್ನು ಜನರ ಮುಂದಿರಿಸಿದ್ದಾರೆ. `ಈ ಸ್ಟಿಂಗ್ ಆಪರೇಶನ್ ನಡೆಸಲು ಹುಡುಗಿ ಹೆಸರಿನಲ್ಲಿ ತಾನು ಒಂದು ನಕಲಿ ಐಡಿ ಮಾಡಿದೆ. ಅದರ ಮೂಲಕವೇ ದುಷ್ಟ ತಂಡದವರನ್ನು ನಂಬಿಸಿ ದಾಖಲೆ ಸಂಗ್ರಹಿಸಿದೆ. ಇನ್ನೂ ಅನೇಕ ಹುಡುಗಿಯರ ಅಶ್ಲೀಲ ವಿಡಿಯೋಗಳಿದ್ದು, ನಾನು ಹುಡುಗಿ ಅಲ್ಲ ಎಂದು ಗೊತ್ತಾದಾಗ ಕೆಲವರು ನನ್ನನ್ನು ಹಿಂಬಾಲಿಸಿ ಹಲ್ಲೆ ಮಾಡಿದ್ದಾರೆ. ನನ್ನ ಟಾಬ್ ಸಹ ಕದ್ದಿದ್ದಾರೆ’ ಎಂದು ಸಂತೋಷ್ ಸಾವಿಗೂ ಮುನ್ನ ಬಿಡುಗಡೆ ಮಾಡಿದ ವಿಡಿಯೋದಲ್ಲಿ ಹೇಳಿದ್ದಾರೆ.

Advertisement. Scroll to continue reading.

`ಹುಡುಗಿಯರಿಂದ ಅಶ್ಲೀಲ ಫೋಟೋ ತರಿಸಿಕೊಂಡು ಅದನ್ನು ಈ ತಂಡದವರು ಬೇರೆ ಬೇರೆ ಕಡೆ ಹಂಚುತ್ತಾರೆ. ನಾನು ಒಬ್ಬ ಹುಡುಗಿಗಾಗಿ ಈ ಆಪರೇಶನ್ ನಡೆಸಿದ್ದು, ಆ ಹುಡುಗಿ ಸಹ ಇದೀಗ ಆ ತಂಡದವರ ಬೆಂಬಲಕ್ಕೆ ಇದ್ದಾರೆ. ಪ್ರೀತಿಸುವುದಾಗಿ ನಂಬಿಸಿ ಹುಡುಗಿಯರನ್ನು ಕಾಮದ ಆಸೆಗೆ ಬಳಸಿಕೊಳ್ಳಲಾಗುತ್ತಿದೆ’ ಎಂದು ಅವರು ವಿಡಿಯೋದಲ್ಲಿ ವಿವರಿಸಿದ್ದಾರೆ. `ಹುಡುಗಿಯ ಜೀವನ ಹಾಳಾಗಬಾರದು ಎಂದು ಈ ಕೆಲಸ ಶುರು ಮಾಡಿದ್ದೆ. ಆದರೆ, ಆ ನಂತರ ನನ್ನ ಗುರಿ ಬದಲಾಗಿದ್ದು, ಆ ಕಾಮುಕರಿಂದ ಹಣ ಪಡೆದಿದ್ದೇನೆ. ನಕಲಿ ಐಡಿ ಮಾಡಿದ್ದು ಹಾಗೂ ಹಣ ಪಡೆದಿದ್ದು ನನ್ನ ತಪ್ಪು ಎಂದು ಅರಿವಾಗಿದೆ’ ಎಂದು ಸಂತೋಷ್ ಪಶ್ಚಾತಾಪದ ಮಾತುಗಳನ್ನು ಆಡಿದ್ದಾರೆ. `ನನಗೆ ಯಾರ ಬೆಂಬಲವೂ ಸಿಕ್ಕಿಲ್ಲ. ವಿಡಿಯೋ ಯಾರಿಗೆ ಕೊಡಬೇಕು ಎಂದು ಗೊತ್ತಾಗಲಿಲ್ಲ’ ಎಂದು ಅಳಲು ತೋಡಿಕೊಂಡಿದ್ದಾರೆ. ಕೊನೆಗೆ `ತನಗೆ ಬದುಕುವ ಆಸೆ ಇಲ್ಲ’ ಎಂದ ಅವರು ನ್ಯಾಯವಾದಿ ಹಾಗೂ ಕಾಂಗ್ರೆಸ್ ಮುಖಂಡರೊಬ್ಬರೊಬ್ಬರು ಈ ತಂಡದಲ್ಲಿದ್ದಾರೆ ಎಂದು ವಿಡಿಯೋದಲ್ಲಿ ಹೇಳಿದ್ದಾರೆ.

Advertisement. Scroll to continue reading.

ಬಿಜೆಪಿಯಿಂದ ಹೋರಾಟ:
`ಸಿದ್ದಾಪುರ ಪೊಲೀಸರ ಮೇಲೆ ನಮಗೆ ವಿಶ್ವಾಸವಿಲ್ಲ. ಈ ಘಟನಾವಳಿಗಳ ಕುರಿತು ಪ್ರತ್ಯೇಕ ಪ್ರಕರಣ ದಾಖಲಿಸಬೇಕು’ ಎಂದು ಬಿಜೆಪಿ ಆಗ್ರಹಿಸಿದೆ. ಸಂತೋಷ್ ಆತ್ಮಹತ್ಯೆ ವಿಷಯವಾಗಿ ಹೊರಗಿನ ತನಿಖಾ ಅಧಿಕಾರಿಗಳನ್ನು ನೇಮಿಸಬೇಕು. ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ಹಾಗೂ ವಕೀಲ ಎಂ ಎನ್ ವಿರುದ್ಧ ಪ್ರಕರಣ ದಾಖಲಿಸಬೇಕು’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯ ಕೆ ಜಿ ನಾಯ್ಕ್ ಹಣಜಿಬೈಲ್ ಆಗ್ರಹಿಸಿದ್ದಾರೆ. `ಕಾಂಗ್ರೆಸ್ ಮುಖಂಡರ ಒತ್ತಡದಿಂದ ವ್ಯವಸ್ಥಿತ ಜಾಲ ಕೆಲಸ ಮಾಡುತ್ತಿದೆ. ಸಣ್ಣ ವಯಸ್ಸಿನಲ್ಲಿಯೇ ಬಾಲಕಿಯರ ಮೇಲೆ ದೌರ್ಜನ್ಯ ನಡೆಯುತ್ತಿದೆ. ಇದನ್ನು ತಡೆಯಬೇಕು’ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎನ್ ಎಸ್ ಹೆಗಡೆ ಒತ್ತಾಯಿಸಿದ್ದಾರೆ. ಕಾನೂನು ಕ್ರಮ ಆಗದೇ ಇದ್ದರೆ ಪೊಲೀಸ್ ಠಾಣೆ ಮುಂದೆ ಪ್ರತಿಭಟಿಸುವುದಾಗಿ ಎಚ್ಚರಿಸಿದ್ದಾರೆ.

ಗಮನಿಸಿ: ಆತ್ಮಹತ್ಯೆಗೂ ಮುನ್ನ ಸಂತೋಷ್ ಮಾಡಿದ ವಿಡಿಯೋದಲ್ಲಿ ಅಶ್ಲೀಲ ಸಂದೇಶ, ಚಿತ್ರಗಳಿರುವ ಕಾರಣ ನಾವು ಅದನ್ನು ಪ್ರಸಾರ ಮಾಡುತ್ತಿಲ್ಲ

Previous Post

ದಿವ್ಯ ದೇಗುಲ | ತಾಯಿ ಭುವನೇಶ್ವರಿ: ಯಲ್ಲಾಪುರದಲ್ಲಿ ನೆಲೆ ನಿಲ್ಲುವ ಕನ್ನಡ ದೇವಿ!

Next Post

ಸಾರ್ವಜನಿಕ ಪ್ರದೇಶದಲ್ಲಿ ಹೊಡೆದಾಟ: ನಾಲ್ವರ ವಿರುದ್ಧ ಪೊಲೀಸ್ ಪ್ರಕರಣ

Next Post
Movie song at Devi Utsav: Stabbed with a knife because the song stopped!

ಸಾರ್ವಜನಿಕ ಪ್ರದೇಶದಲ್ಲಿ ಹೊಡೆದಾಟ: ನಾಲ್ವರ ವಿರುದ್ಧ ಪೊಲೀಸ್ ಪ್ರಕರಣ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ