6
  • Latest
Unexpected disaster Karwar submerged in rain!

ನಿರೀಕ್ಷೆಗೂ ಮೀರಿದ ಅವಾಂತರ: ಮಳೆಯಲ್ಲಿ ಮುಳುಗಿದ ಕಾರವಾರ!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ನಿರೀಕ್ಷೆಗೂ ಮೀರಿದ ಅವಾಂತರ: ಮಳೆಯಲ್ಲಿ ಮುಳುಗಿದ ಕಾರವಾರ!

AchyutKumar by AchyutKumar
June 12, 2025
in ಸ್ಥಳೀಯ
Unexpected disaster Karwar submerged in rain!

ಕಾರವಾರದಲ್ಲಿ ಮಳೆ ನೀರಿನಿಂದ ಮುಳುಗಿದ ಕಾರು

advt advt advt
ADVERTISEMENT

ಕರಾವಳಿ ಭಾಗದಲ್ಲಿ ಮಳೆಯಾಗುತ್ತದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿತ್ತು. ಆದರೆ, ಈ ಪ್ರಮಾಣದಲ್ಲಿ ಮಳೆ ಸುರಿಯುತ್ತದೆ ಎಂದು ಯಾರು ಊಹಿಸಿರಲಿಲ್ಲ. ಗುರುವಾರ ಸುರಿದ ಮಳೆಗೆ ಜಿಲ್ಲಾಕೇಂದ್ರದಲ್ಲಿನ ವಿವಿಧ ಸರ್ಕಾರಿ ಕಚೇರಿಗಳಿಗೂ ನೀರು ನುಗ್ಗಿದ್ದು, ಅನೇಕರ ಮನೆಯ ಪೀಠೋಪಕರಣಗಳು ಹಾಳಾದವು. ಸಾರ್ವಜನಿಕ ಓಡಾಟದ ರಸ್ತೆಗಳು ನೀರಿನಲ್ಲಿ ಮುಳುಗಿದ್ದವು!

ಕಾರವಾರ ಸೇರಿ ಕರಾವಳಿ ಪ್ರದೇಶದಲ್ಲಿ ಜೂನ್ 12ರಂದು ಗರಿಷ್ಠ 65ಮಿಮೀ ಮಳೆಯಾಗುವ ಸಾಧ್ಯತೆಯಿರುವ ಬಗ್ಗೆ ಹವಾಮಾನ ಇಲಾಖೆ ಎಚ್ಚರಿಸಿತ್ತು. ಆದರೆ, ಕರಾವಳಿ ಭಾಗದಲ್ಲಿ ಗರಿಷ್ಠ 268ಮಿಮೀ ಪ್ರಮಾಣದಲ್ಲಿ ಮಳೆ ಸುರಿಯಿತು. ಈ ಬಗ್ಗೆ ಮುನ್ನಚ್ಚರಿಕೆ ಸ್ವೀಕರಿಸಿದ್ದ ಜಿಲ್ಲಾಡಳಿತ ಮಧ್ಯರಾತ್ರಿ ತುರ್ತು ಆದೇಶ ಹೊರಡಿಸಿ ಕರಾವಳಿ ಭಾಗದ ಶಾಲೆಗಳಿಗೆ ರಜೆ ಘೋಷಿಸಿತ್ತು. ಪರಿಣಾಮ ಮಕ್ಕಳು ಶಾಲೆಗೆ ಬಂದು ಪರಿತಪಿಸುವುದು ತಪ್ಪಿತು. ಅದಾಗಿಯೂ, ಮನೆಯಿಂದ ಹೊರಗೆ ಬಂದ ಜನರು ಮಳೆಯಿಂದ ಸಂಕಷ್ಟ ಅನುಭವಿಸಿದರು.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಕಾರವಾರದ ವೈಲವಾಡದಲ್ಲಿ ಗರಿಷ್ಠ ಪ್ರಮಾಣದ ಮಳೆ ಸುರಿದಿದೆ. ಅಲ್ಲಿ ನಿರಂತರವಾಗಿ 267ಮಿಮೀ ಮಳೆಯಾಗಿದೆ. ಅದರೊಂದಿಗೆ ಕರಾವಳಿಯ ಎಲ್ಲಾ ತಾಲೂಕುಗಳಲ್ಲಿಯೂ ಮಳೆಯಾಗುತ್ತಿದ್ದು, ಜನ ಜೀವನ ಅಸ್ತವ್ಯಸ್ಥಗೊಂಡಿದೆ. ರಸ್ತೆಯಲ್ಲಿ ಸಂಚರಿಸುತ್ತಿದ್ದ ನೂರಾರು ವಾಹನಗಳು ಮಳೆ ನೀರಿನಲ್ಲಿ ಸಿಲುಕಿ ಗ್ಯಾರೇಜಿಗೆ ಬಂದಿವೆ. ಮನೆಯೊಳಗೆ ನೀರು ನುಗ್ಗಿದ್ದರಿಂದ ಜನರು ಕಂಗಾಲಾಗಿದ್ದಾರೆ. ಜಿಲ್ಲಾಸ್ಪತ್ರೆಯ ಆವರಣದೊಳಗೂ ಮಳೆ ನೀರು ನುಗ್ಗಿದ್ದು, ರೋಗಿಗಳು ಹಿಂಸೆ ಅನುಭವಿಸುತ್ತಿದ್ದಾರೆ. ನೀರು ಹೊರ ಹಾಕಲು ಸಿಬ್ಬಂದಿ ಸಾಹಸ ನಡೆಸಿದ್ದಾರೆ.

ಕಾರವಾರದ ಸಾಯಿಕಟ್ಟಾ ರಸ್ತೆ ಸಂಚಾರಕ್ಕೆ ಯೋಗ್ಯವಾಗಿಲ್ಲ. ಹಬ್ಬುವಾಡ ರಸ್ತೆಯಲ್ಲಿ ಹೋಗಲು ಸಾಧ್ಯವಿಲ್ಲ. ಬಿಣಗಾ ಹೆದ್ದಾರಿ ಸೇರಿ ಅನೇಕ ಕಡೆ ಬೈಕು-ಕಾರುಗಳು ನೀರಿನಲ್ಲಿ ಸಿಕ್ಕಿ ಬಿದ್ದಿವೆ. ಅಲ್ಲಲ್ಲಿ ಮನೆಗಳ ಮೇಲೆ ಮರ ಬಿದ್ದಿದೆ. ಅಪಾರ್ಟಮೆಂಟ್ ಪಾರ್ಕಿಂಗ್ ಪ್ರದೇಶಗಳು ಜಲಾವೃತಗೊಂಡಿದೆ. ಅಪಾರ್ಟಮೆಂಟಿನಲ್ಲಿರಿಸಿದ್ದ ಕಾರುಗಳು ನೀರಿನಲ್ಲಿ ಮುಳುಗಿದ್ದು, ಅದನ್ನು ಹೊರತೆಗೆಯುವ ಸಾಹಸ ಮುಂದುವರೆದಿದೆ. ನಾಲಾಗಳು ಅಪಾಯದ ಮಟ್ಟ ಮೀರಿ ಹರಿಯುತ್ತಿದೆ. ರಸ್ತೆ ಪಕ್ಕದ ಅಂಗಡಿಗಳಿಗೂ ನೀರು ನುಗ್ಗಿದೆ. ಕಾರವಾರದ ಕೋಳಿ ಅಂಗಡಿಗೆ ನೀರು ನುಗ್ಗಿ ಕೋಳಿಗಳೆಲ್ಲವೂ ಸಾವನಪ್ಪಿದೆ. ನೀರು ಸರಾಗವಾಗಿ ಹರಿದು ಹೋಗಲು ಜಾಗವಿಲ್ಲ. ಪಂಪ್ ಮೂಲಕ ನೀರು ಹೊರಗೆ ಸಾಗಿಸುವ ಕೆಲಸ ನಡೆಯುತ್ತಿದೆ. ತಗ್ಗು ಪ್ರದೇಶದಲ್ಲಿನ ಜನ ಗಾಳಿ-ಮಳೆ-ಚಳಿಗೆ ನಲುಗಿದ್ದಾರೆ.

ShareSendTweetShare
ADVERTISEMENT
Previous Post

ಮಾಧ್ಯಮ ಶಕ್ತಿ.. ವರದಿಯ ಫಲಶೃತಿ: ಆರು ವರ್ಷದ ಸಮಸ್ಯೆಗೆ ಮೂರೇ ದಿನದಲ್ಲಿ ಪರಿಹಾರ!

Next Post

ಭಟ್ಕಳ: ಸಾಲ ಕೊಡಿಸಲು ಬಂದವ ಸುಳ್ಳು ಹೇಳಿದ.. ನಕಲಿ ನೋಟು ಕೊಟ್ಟು ಯಾಮಾರಿಸಿದ!

Next Post
Bhatkal The person who came to give a loan lied.. gave him fake notes and cheated him!

ಭಟ್ಕಳ: ಸಾಲ ಕೊಡಿಸಲು ಬಂದವ ಸುಳ್ಳು ಹೇಳಿದ.. ನಕಲಿ ನೋಟು ಕೊಟ್ಟು ಯಾಮಾರಿಸಿದ!

ಸ್ಟಿಂಗ್ ಆಪರೇಶನ್ | ಸಂತೋಷ ಹೇಳಿದ ಸರಸ-ಸಲ್ಲಾಪದ ವಿಷಯ: ಆ ಹೆಸರಿನವ ನಾನೊಬ್ಬನೇ ಅಲ್ಲ ಎಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ!

ಸ್ಟಿಂಗ್ ಆಪರೇಶನ್ | ಸಂತೋಷ ಹೇಳಿದ ಸರಸ-ಸಲ್ಲಾಪದ ವಿಷಯ: ಆ ಹೆಸರಿನವ ನಾನೊಬ್ಬನೇ ಅಲ್ಲ ಎಂದ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ!

This truth is strange A barn burned to ashes due to torrential rain!

ಈ ಸತ್ಯ ವಿಚಿತ್ರ: ಧಾರಾಕಾರ ಮಳೆಗೆ ಕೊಟ್ಟಿಗೆ ಭಸ್ಮ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.