6
  • Latest
Uttara Kannada Hill collapses in several places.. People's lives are in chaos Torrential rain on the coast!

ಉತ್ತರ ಕನ್ನಡ | ಅಲ್ಲಲ್ಲಿ ಗುಡ್ಡ ಕುಸಿತ.. ಜನ ಜೀವನ ಅಸ್ತವ್ಯಸ್ಥ: ಕರಾವಳಿ ತೀರದಲ್ಲಿ ಮಾಯದಂತ ಮಳೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಉತ್ತರ ಕನ್ನಡ | ಅಲ್ಲಲ್ಲಿ ಗುಡ್ಡ ಕುಸಿತ.. ಜನ ಜೀವನ ಅಸ್ತವ್ಯಸ್ಥ: ಕರಾವಳಿ ತೀರದಲ್ಲಿ ಮಾಯದಂತ ಮಳೆ!

ಕಾರವಾರ-ಭಟ್ಕಳ-ಅಂಕೋಲಾ-ಹೊನ್ನಾವರ ಸ್ಥಿತಿ ಅತಂತ್ರ

AchyutKumar by AchyutKumar
June 13, 2025
in ಸ್ಥಳೀಯ
Uttara Kannada Hill collapses in several places.. People's lives are in chaos Torrential rain on the coast!
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಧಾರಾಕಾರ ಮಳೆ ಮುಂದುವರೆದಿದೆ. ಅದರಲ್ಲಿಯೂ ಕರಾವಳಿ ಭಾಗದಲ್ಲಿ ಕೊಂಚವೂ ಬಿಡುವು ನೀಡದೇ ಮಳೆ ಸುರಿಯುತ್ತಿದೆ. ಪರಿಣಾಮ ಅಲ್ಲಲ್ಲಿ ಗುಡ್ಡ ಕುಸಿತ, ಮನೆಗಳಿಗೆ ನೀರು ನುಗ್ಗುವುದು, ರಸ್ತೆ ಮುಳುಗಡೆ ಸಾಮಾನ್ಯವಾಗಿದೆ. ನಿರಂತರವಾದ ಗಾಳಿ-ಮಳೆ-ಚಳಿಗೆ ಜನ ತತ್ತರಿಸಿದ್ದಾರೆ.

ಕಾರವಾರ ಪ್ರವೇಶಿಸುವ ಸುರಂಗ ಮಾರ್ಗದ ಬಳಿ ಮಣ್ಣು ಸಡಿಲಗೊಂಡಿದೆ. ಪರಿಣಾಮ ಗುಡ್ಡದ ಮಣ್ಣು ಹೆದ್ದಾರಿಗೆ ಬಿದ್ದಿದೆ. ಬಿಣಗಾ ಮತ್ತು ಅರಗಾ ಬಳಿ ಗುಡ್ಡ ತಡರಾತ್ರಿ ಕುಸಿತವಾಗಿದ್ದು, ಗುಡ್ಡದ ಕಲ್ಲು ರಸ್ತೆ ಮೇಲೆ ಬಂದು ಬಿದ್ದಿದೆ. ಹೀಗಾಗಿ ಒಂದು ಮಾರ್ಗ ಸಂಪೂರ್ಣವಾಗಿ ಬಂದ್ ಆಗಿದ್ದು, ಮಣ್ಣು ತೆರವು ಕಾರ್ಯಾಚರಣೆ ನಡೆಯುತ್ತಿದೆ. ಇಲ್ಲಿ ಒಟ್ಟು ನಾಲ್ಕು ಕಡೆ ಗುಡ್ಡ ಕುಸಿತವಾಗಿದ್ದರಿಂದ ವಾಹನ ಸವಾರರು ಆತಂಕದಲ್ಲಿಯೇ ಸಂಚಾರ ನಡೆಸುತ್ತಿದ್ದಾರೆ.

ADVERTISEMENT
ADVERTISEMENT

ಭಟ್ಕಳ ಬಂದರಿನ ತಲಗೋಡ ಗೊಂಡರ ಕೇರಿಯಲ್ಲಿ ಯಾವುದೇ ಕ್ಷಣದಲ್ಲಿ ಗುಡ್ಡ ಕುಸಿಯುವ ಸಾಧ್ಯತೆಯಿದೆ. ಈ ಭಾಗದಲ್ಲಿಯೂ ವಾಡಿಕೆಗಿಂತ ಹೆಚ್ಚಿನ ಮಳೆ ಸುರಿದಿದೆ. ಇಲ್ಲಿನ ರಸ್ತೆ ಪಕ್ಕ ನಿರ್ಮಿಸಿದ ಕಾಂಕ್ರೆಟ್ ಗೋಡೆ ಕುಸಿದಿದೆ. ಬೆಟ್ಟದ ಅರ್ದಭಾಗ ಕುಸಿತ ಕಂಡಿದ್ದು, ಇನ್ನಷ್ಟು ಕುಸಿಯುವ ಸಾಧ್ಯತೆ ಹೆಚ್ಚಿದೆ. ಬೆಟ್ಟದ ಮೇಲಿನ ಕಲ್ಬಂಡೆಗಳು ಅಪಾಯ ಸೃಷ್ಠಿಸಿದೆ. ಈ ಸ್ಥಳದಲ್ಲಿ ಬೆಟ್ಟ ಕಡಿದು ನಿರ್ಮಿಸಿದ ಶಾಲೆಯೂ ಅಪಾಯದ ಸ್ಥಿತಿಯಲ್ಲಿದೆ. ಬೆಟ್ಟದ ಕಲ್ಬಂಡೆಗಳು ಶಾಲೆ ದಿಕ್ಕಿನಲ್ಲಿ ಬರುವ ಲಕ್ಷಣವಿದ್ದು, ಜನ ಆತಂಕದಲ್ಲಿದ್ದಾರೆ.

Advertisement. Scroll to continue reading.
Advertisement. Scroll to continue reading.

ಅoಕೋಲಾದ ಹೊನ್ನೆಬೈಲ್ ಬಳಿ ಸುರಿದ ಮಳೆಗೆ ಅಲ್ಲಿನ ಹಳ್ಳ ಉಕ್ಕಿ ಹರಿದಿದ್ದು, ಪಿಚ್ಚಿಂಗ್ ಕೊಚ್ಚಿ ಹೋಗಿದೆ. ನೀರಿನ ವೇಗಕ್ಕೆ ಕಪೌಂಡ್ ಸಹ ಕುಸಿದಿದೆ. ತೋಟಗಳಿಗೂ ನೀರು ನುಗ್ಗಿ ಹಾನಿಯಾಗಿದೆ. ಇಲ್ಲಿ ಶಾಶ್ವತ ತಡೆಗೋಡೆ ನಿರ್ಮಿಸದೇ ಇದ್ದರೆ ಇನ್ನಷ್ಟು ಅಪಾಯ ಖಚಿತ ಎಂದು ಜನ ಹೇಳಿದ್ದಾರೆ. ಹೊನ್ನಾವರದ ಬಳಕೂರು ಮಠದಕೇರಿಯಲ್ಲಿನ ಮನೆ ಮೇಲೆ ಮರ ಬಿದ್ದಿದೆ. ಧರ್ಮಿ ನಾಯ್ಕ ಅವರ ಮನೆ ಚಾವಣಿ ಹಾರಿ ಹೋಗಿದೆ. ಸಾಲೆಹಿತ್ತಲದ ನಾಗರಾಜ ನಾಯ್ಕ ಅವರ ಮನೆಯ ಮೇಲೆಯೂ ಮರ ಬಿದ್ದಿದೆ. ಶರಾವತಿ, ಗುಂಡಬಾಳ ಹಾಗೂ ಬಡಗಣಿ ನದಿ ಅಪಾಯದ ಮಟ್ಟ ಮೀರಿ ಹರಿಯುತ್ತಿದೆ.

ಭಟ್ಕಳದ ರಂಗಿನಕಟ್ಟೆ ಪ್ರದೇಶದ ಹೆದ್ದಾರಿ ಕೆರೆಯ ರೀತಿ ಕಾಣುತ್ತಿದೆ. ತಗ್ಗು ಪ್ರದೇಶಗಳು ಜಲಾವೃತಗೊಂಡಿದ್ದು, ಜನ ಮಳೆಗೆ ಹೆದರಿದ್ದಾರೆ. ಸಂಶುದ್ಧೀನ್ ಸರ್ಕಲ್ ಬಳಿ ನೀರು ತುಂಬಿದ್ದರಿoದ ಜನ ಸಮಸ್ಯೆ ಅನುಭವಿಸಿದರು. ನೀರು ತುಂಬಿದ ರಸ್ತೆಗಳು ಕಾಣದೇ ವಾಹನ ಸವಾರರು ಪರದಾಡಿದರು.

ShareSendTweetShare
ADVERTISEMENT
Previous Post

ಮೆದುಳು ಪರೀಕ್ಷೆ: ನರರೋಗ ತಜ್ಞ ಪಾಸು!

Next Post

ಪ ಪಂ ಅಧಿಕಾರಿಗಳ ಪೆನ್ ಡ್ರೈವ್ ರಹಸ್ಯ: ಸಿಬ್ಬಂದಿ ಸತ್ಯ ಹೇಳಲಿಲ್ಲ.. ಸದಸ್ಯರು ಪಟ್ಟು ಬಿಡಲಿಲ್ಲ!

Next Post
The secret of the pen drive of the PTA officers The staff did not tell the truth.. the members did not give up!

ಪ ಪಂ ಅಧಿಕಾರಿಗಳ ಪೆನ್ ಡ್ರೈವ್ ರಹಸ್ಯ: ಸಿಬ್ಬಂದಿ ಸತ್ಯ ಹೇಳಲಿಲ್ಲ.. ಸದಸ್ಯರು ಪಟ್ಟು ಬಿಡಲಿಲ್ಲ!

Drugs from Kumta to Sirsi Those who went to grab a helmet found marijuana!

ಕುಮಟಾದಿಂದ ಶಿರಸಿಗೆ ಬಂದ ಮಾದಕ: ಹೆಲ್ಮೆಟ್ ಹಿಡಿಯಲು ಹೋದವರಿಗೆ ಗಾಂಜಾ ಸಿಕ್ಕಿತು!

Rs 1000 incentive A ray of hope for caregivers of the disabled

ಸಾವಿರ ರೂ ಪ್ರೋತ್ಸಾಹಧನ: ಅಂಗವಿಕಲರ ಆರೈಕೆದಾರರಿಗೆ ಆಶಾಕಿರಣ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.