6
  • Latest
The secret of the pen drive of the PTA officers The staff did not tell the truth.. the members did not give up!

ಪ ಪಂ ಅಧಿಕಾರಿಗಳ ಪೆನ್ ಡ್ರೈವ್ ರಹಸ್ಯ: ಸಿಬ್ಬಂದಿ ಸತ್ಯ ಹೇಳಲಿಲ್ಲ.. ಸದಸ್ಯರು ಪಟ್ಟು ಬಿಡಲಿಲ್ಲ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಪ ಪಂ ಅಧಿಕಾರಿಗಳ ಪೆನ್ ಡ್ರೈವ್ ರಹಸ್ಯ: ಸಿಬ್ಬಂದಿ ಸತ್ಯ ಹೇಳಲಿಲ್ಲ.. ಸದಸ್ಯರು ಪಟ್ಟು ಬಿಡಲಿಲ್ಲ!

ಮೀನು ಮಾರುವ ವಿಷಯದಲ್ಲಿ ಸೋಮು-ಸತೀಶನ ನಡುವೆ ಜಟಾಪಟಿ

AchyutKumar by AchyutKumar
in ಸ್ಥಳೀಯ
The secret of the pen drive of the PTA officers The staff did not tell the truth.. the members did not give up!

ಯಲ್ಲಾಪುರ ಗ್ರಾಮದೇವಿ ಜಾತ್ರೆ ಅವಧಿಯಲ್ಲಿ ಪಟ್ಟಣ ಪಂಚಾಯತದಲ್ಲಿ ನಡೆದ ಅವ್ಯವಹಾರದ ಬಗ್ಗೆ ಶುಕ್ರವಾರ ನಡೆದ ಸಭೆಯಲ್ಲಿಯೂ ಚರ್ಚೆ ನಡೆದಿದದ್ದು, ಅನೇಕರ ನಡುವೆ ವಾಗ್ವಾದ-ಜಟಾಪಟಿ, ರಾಜಕೀಯ ಕಚ್ಚಾಟಕ್ಕೆ ಈ ಸಭೆಯೂ ಸೀಮಿತಗೊಂಡಿತು. ಪಟ್ಟಣದ ಮೀನು ಮಾರುಕಟ್ಟೆ ವಿಷಯವಾಗಿ ಸದಸ್ಯ ಸತೀಶ ನಾಯ್ಕ ಹಾಗೂ ಸೋಮು ನಾಯ್ಕ ನಡುವೆ ಮಾತಿನ ಯುದ್ಧ ನಡೆಯಿತು. ಸದಸ್ಯರ ವಾಗ್ದಾಳಿ ನೋಡಿ ಪ ಪಂ ಅಧ್ಯಕ್ಷೆ ಹಾಗೂ ಅಧಿಕಾರಿ-ಸಿಬ್ಬಂದಿ ಮೌನಕ್ಕೆ ಶರಣಾದರು!

ADVERTISEMENT

ಈ ಹಿಂದೆ ನಡೆದ ಏಳು ಸಭೆಯಲ್ಲಿ ಪ ಪಂ ಸದಸ್ಯರು ಜಾತ್ರೆ ಲೆಕ್ಕ ಕೇಳಿದ್ದರು. ಆದರೆ, ಅದನ್ನು ಸರಿಯಾಗಿ ಒದಗಿಸುವಲ್ಲಿ ಪ ಪಂ ಸಿಬ್ಬಂದಿ ಎಡವಿದ್ದರು. ಹೀಗಾಗಿ 8ನೇ ಸಭೆಯಲ್ಲಿ ಸಹ ಸದಸ್ಯರು ಲೆಕ್ಕವನ್ನೇ ಕೇಳಿದರು. ಕಳೆದ ಸಭೆಯಲ್ಲಿ ಜಾತ್ರೆ ವೇಳೆ ಹರಾಜು ಮಾಡಲಾದ ಪ್ಲಾಟ್‌ಗಳ ವಿಡಿಯೋ ಬಗ್ಗೆ ಚರ್ಚೆ ನಡೆದಿದ್ದು, ಪೆನ್‌ಡ್ರೆöÊವ್ ಕಾಣೆಯಾದ ಬಗ್ಗೆ ಪ್ರಸ್ತಾಪ ನಡೆದಿತ್ತು. ಈ ಸಭೆಯಲ್ಲಿ ಸಹ ಆ ಪೆನ್‌ಡ್ರೆöÊವ್ ಹುಡುಕಾಟ ನಡೆಯಿತು. ಕೊನೆಗೆ ವಿಡಿಯೋ ಚಿತ್ರಿಕರಣ ಮಾಡಿದವರನ್ನು ವಿಚಾರಿಸುವ ಬಗ್ಗೆ ಸಭೆ ನಿರ್ಣಯಿಸಿತು. ಜಾತ್ರೆಯ ವೇಳೆ ಅಂಗಡಿಗಳ ಹರಾಜು ಪ್ರಕ್ರಿಯೆಯ ವಿಡಿಯೊ ಚಿತ್ರೀಕರಣ, ಫೊಟೊಗಳಿರುವ ಪೆನ್ ಡ್ರೈವ್ ಕಳೆದಿರುವ ಬಗ್ಗೆ ಸದಸ್ಯರು ಪ್ರಶ್ನಿಸಿದರು. ಆದರೆ, ಇದಕ್ಕೆ ಸೂಕ್ತ ಉತ್ತರ ಮಾತ್ರ ಸಿಗಲಿಲ್ಲ. ಅಷ್ಟಕ್ಕೂ ಆ ಪೆನ್‌ಡ್ರೆöÊವ್ ರಹಸ್ಯ ಬಿಚ್ಚಿಡಲು ಅಧಿಕಾರಿ-ಸಿಬ್ಬಂದಿ ಹಿಂದೇಟು ಹಾಕುತ್ತಿರುವುದು ಸಭೆಯ ಮುಖ್ಯ ವಿಷಯವಾಗಿತ್ತು.

ಪಟ್ಟಣದಲ್ಲಿರುವ ಮೀನು ಮಾರುಕಟ್ಟೆಯ ಅಂಗಡಿಗಳಿಗೆ 12 ವರ್ಷಗಳಿಗೊಮ್ಮೆ ಟೆಂಡರ್ ಕರೆಯುವ ಬಗ್ಗೆ ಸಭೆಯಲ್ಲಿ ಪ್ರಸ್ತಾಪವಾಗಿದ್ದು, ಮೊದಲಿದ್ದ ನಿಯಮ ಬದಲಿಸಲು ಸತೀಶ ನಾಯ್ಕ ಸಹಮತ ನೀಡಿದರು. ಆದರೆ, ಈ ನಿರ್ಣಯಕ್ಕೆ ಸದಸ್ಯ ಸೋಮೇಶ್ವರ ನಾಯ್ಕ ವಿರೋಧ ವ್ಯಕ್ತಪಡಿಸಿದರು. `ಈಗಾಗಲೇ 12 ಸದಸ್ಯರ ಸಹಿ ಹಾಕಿ ಬಹುಮತದ ಠರಾವು ಮಾಡಿಕೊಟ್ಟಿದ್ದೇವೆ. ಈಗ ಅದರ ಬಗ್ಗೆ ಮತ್ತೆ ಚರ್ಚೆಯ ಅಗತ್ಯವಿಲ್ಲ’ ಎಂದು ಸದಸ್ಯರಾದ ರಾಧಾಕೃಷ್ಣ ನಾಯ್ಕ ಹಾಗೂ ಸತೀಶ ನಾಯ್ಕ ಹೇಳಿದರು. `ಹಳೆಯ ಠರಾವು ಬೇಡ, ಸಭೆಯಲ್ಲಿ ಚರ್ಚಿಸದೇ ತಮಗೆ ಬೇಕಾದ ಸದಸ್ಯರನ್ನು ಸೇರಿಸಿ, ಅವರ ಸಹಿ ಪಡೆದು ನಿರ್ಣಯಿಸಲಾಗಿದೆ. ಅದನ್ನು ಒಪ್ಪಲು ಸಾಧ್ಯವಿಲ್ಲ’ ಎಂದು ಸೋಮೇಶ್ವರ ನಾಯ್ಕ ಅಸಮಾಧಾನವ್ಯಕ್ತಪಡಿಸಿದರು. ಇದೇ ವಿಷಯವಾಗಿ ಸತೀಶ ನಾಯ್ಕ ಹಾಗೂ ಸೋಮೇಶ್ವರ ನಾಯ್ಕ ನಡುವೆ ಜಟಾಪಟಿ ನಡೆಯಿತು. `ಮೀನು ಮಾರುಕಟ್ಟೆ ಟೆಂಡರ್ ನಿರ್ಣಯ ವಿಚಾರದಲ್ಲಿ ಭ್ರಷ್ಟಾಚಾರ ನಡೆದಿದೆ’ ಎಂದು ಸೋಮೇಶ್ವರ ನಾಯ್ಕ ಆರೋಪಿಸಿದರು.

Advertisement. Scroll to continue reading.

`ಹಿಂದಿನ ಸಭೆಯಲ್ಲಿ ನಾನು ಪ್ರಸ್ತಾಪಿಸಿದ ವಿಚಾರಗಳು ಠರಾವಿನಲ್ಲಿ ಸೇರಿಸಿಲ್ಲ. ನಾನು ಮಾತನಾಡದೇ ಇರುವ ವಿಚಾರಗಳೂ ಠರಾವಿನಲ್ಲಿ ಬಂದಿವೆ’ ಎಂದು ಪ ಪಂ ಸದಸ್ಯ ರಾಜು ನಾಯ್ಕ ಆಕ್ರೋಶವ್ಯಕ್ತಪಡಿಸಿದರು. ಇನ್ನಿತರ ಸದಸ್ಯರು ಇದಕ್ಕೆ ಧ್ವನಿಯಾದರು. ಪ ಪಂ ಅಧ್ಯಕ್ಷೆ ನರ್ಮದಾ ನಾಯ್ಕ, ಉಪಾಧ್ಯಕ್ಷ ಅಮಿತ್ ಅಂಗಡಿ, ಸ್ಥಾಯಿ ಸಮಿತಿಯ ಅಧ್ಯಕ್ಷ ಅಬ್ದುಲ್ ಅಲಿ, ಮುಖ್ಯಾಧಿಕಾರಿ ಕುಮಾರ ನಾಯ್ಕ ಹಾಗೂ ಸದಸ್ಯರ ಪೈಕಿ ಒಂದಿಬ್ಬರನ್ನುಹೊರತುಪಡಿಸಿ ಉಳಿದವರೆಲ್ಲರೂ ಬಹುತೇಕ ಮೌನವಾಗಿದ್ದರು.

Advertisement. Scroll to continue reading.
Previous Post

ಉತ್ತರ ಕನ್ನಡ | ಅಲ್ಲಲ್ಲಿ ಗುಡ್ಡ ಕುಸಿತ.. ಜನ ಜೀವನ ಅಸ್ತವ್ಯಸ್ಥ: ಕರಾವಳಿ ತೀರದಲ್ಲಿ ಮಾಯದಂತ ಮಳೆ!

Next Post

ಕುಮಟಾದಿಂದ ಶಿರಸಿಗೆ ಬಂದ ಮಾದಕ: ಹೆಲ್ಮೆಟ್ ಹಿಡಿಯಲು ಹೋದವರಿಗೆ ಗಾಂಜಾ ಸಿಕ್ಕಿತು!

Next Post
Drugs from Kumta to Sirsi Those who went to grab a helmet found marijuana!

ಕುಮಟಾದಿಂದ ಶಿರಸಿಗೆ ಬಂದ ಮಾದಕ: ಹೆಲ್ಮೆಟ್ ಹಿಡಿಯಲು ಹೋದವರಿಗೆ ಗಾಂಜಾ ಸಿಕ್ಕಿತು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ