6
  • Latest
Saint Milagres Three names for the society that gave the loan!

ಸೆಂಟ್ ಮಿಲಾಗ್ರಿಸ್: ಸಾಲ ನೀಡಿದ ಸೊಸೈಟಿಗೆ ಮೂರು ನಾಮ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸೆಂಟ್ ಮಿಲಾಗ್ರಿಸ್: ಸಾಲ ನೀಡಿದ ಸೊಸೈಟಿಗೆ ಮೂರು ನಾಮ!

AchyutKumar by AchyutKumar
in ಸ್ಥಳೀಯ
Saint Milagres Three names for the society that gave the loan!

ಭೂಮಿಯ ದಾಖಲೆಪಡೆದು ಸಾಲ ನೀಡಿದ ಶಿರಸಿಯ ಸೆಂಟ್ ಮಿಲಾಗ್ರಿಸ್ ಸೌಹಾರ್ದ ಕೋ ಆಪರೇಟಿವ್ ಸೊಸೈಟಿಗೆ ಸಾಲ ಪಡೆದವರು ವಂಚಿಸಿದ್ದಾರೆ. 2022ರಲ್ಲಿಯೇ ವಂಚನೆ ನಡೆದಿದ್ದು, ಈ ಬಗ್ಗೆ ಇದೀಗ ಅರಿತ ಶಿರಸಿ ಸೊಸೈಟಿ ಶಾಖೆಯ ಲೋಕೇಶ ನಾಯ್ಕ ಹೊಸ ಮಾರುಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ನೀಡಿದ್ದಾರೆ.

ADVERTISEMENT

ಮರಾಠಿಕೊಪ್ಪ ರಸ್ತೆಯ ನಿತ್ಯಾನಂದ ಮಠದ ಬಳಿಯ ವ್ಯಾಪಾರಿ ಕಮಲಾಕರ ಭಂಡಾರಿ ಅವರು ಲಂಡಕನಳ್ಳಿ ಗ್ರಾಮದ ತಮ್ಮ ಭೂಮಿಯನ್ನು ಅಡವಿಟ್ಟು ಸಾಲ ಪಡೆದಿದ್ದರು. 2014ರಲ್ಲಿ ಅವರು 5 ಲಕ್ಷ ರೂ ಸಾಲಪಡೆದ ಬಗ್ಗೆ ಉಪನೋಂದಣಾಧಿಕಾರಿ ಕಚೇರಿಯಲ್ಲಿಯೂ ಸಿಂಪಲ್ ಮೋರ್ಟಗೇಜ್ ಡೀಡ್ ಮೂಲಕ ದಾಖಲೆ ಮಾಡಿಸಿದ್ದರು. ಆದರೆ, ಸಾಲ ಹಾಗೂ ಬಡ್ಡಿಯನ್ನು ಕಮಲಾಕರ ಭಂಡಾರಿ ಅವರು ಸರಿಯಾಗಿ ಪಾವತಿ ಮಾಡಿರಲಿಲ್ಲ. ಹೀಗಾಗಿ ಸೆಂಟ್ ಮಿಲಾಗ್ರಿಸ್ ಸೊಸೈಟಿಯವರು ಆಸ್ತಿ ಹರಾಜು ಹಾಕುವ ಬಗ್ಗೆ ನೋಟಿಸ್ ಮಾಡಿದ್ದರು.

ಆಗ ಕಮಲಾಕರ ಭಂಡಾರಿ ಅವರು ಮಾರಿಕಾಂಬಾ ನಗರದ ವ್ಯಾಪಾರಿ ಉದಯ ನಾಯ್ಕ, ಮಾರಿಕಾಂಬಾ ನಗರದ ಮತ್ತೊಬ್ಬ ವ್ಯಾಪಾರಿ ಕಾರ್ತಿಕ್ ನಾಯ್ಕ ಅವರ ಜೊತೆ ಸೇರಿ ತಂತ್ರವೊoದನ್ನು ರೂಪಿಸಿದರು. ದೊಡ್ನಳ್ಳಿ ಗ್ರಾಮ ಪಂಚಾಯತಗೆ ತೆರಳಿ ಆ ಭೂಮಿಗೆ ಇ-ಸ್ವತ್ತು ಆಧಾರದಲ್ಲಿ ಪ್ರತ್ಯೇಕ ಸ್ವತ್ತು ಸಂಖ್ಯೆ ಪಡೆದರು. ಅದೇ ಆಧಾರದಲ್ಲಿ ಕೆಲ ನಕಲಿ ದಾಖಲೆಗಳನ್ನು ಸೃಷ್ಠಿಸಿದರು. 2022ರ ಜುಲೈ 6ರಂದು ಕಮಲಾಕರ ಭಂಡಾರಿ ಅವರು ಉದಯ ನಾಯ್ಕ ಹಾಗೂ ಕಾರ್ತಿಕ ನಾಯ್ಕ ಅವರಿಗೆ ಆ ಭೂಮಿ ಮಾರಾಟ ಮಾಡಿದರು. `ಇದೇ ನಿಜವಾದ ದಾಖಲೆ’ ಎಂದು ಗ್ರಾಮ ಪಂಚಾಯತ ಹಾಗೂ ನೋಂದಣಾಧಿಕಾರಿ ಕಚೇರಿಗೂ ಸಲ್ಲಿಸಿದರು.

Advertisement. Scroll to continue reading.

ಈ ಎಲ್ಲಾ ವಿಷಯದ ಬಗ್ಗೆ ಅರಿತ ಸೆಂಟ್ ಮಿಲಾಗ್ರಿಸ್ ಶಾಖಾ ವ್ಯವಸ್ಥಾಪಕ ಲೋಕೇಶ ನಾಯ್ಕ ಇದೀಗ ಪೊಲೀಸ್ ದೂರು ನೀಡಿದ್ದಾರೆ. ಆ ಮೂವರ ವಿರುದ್ಧವೂ ಕಾನೂನು ಕ್ರಮಕ್ಕೆ ಒತ್ತಾಯಿಸಿದ್ದಾರೆ.

Advertisement. Scroll to continue reading.
Previous Post

ಹೈಸ್ಕೂಲ್ ಹುಡುಗಿಯರ ಸ್ಟಿಂಗ್ ಆಪರೇಶನ್: ಅವರು ಅಮಾಯಕರೇ ಆದರೆ ಇಷ್ಟು ಹಣ ಹೇಗೆ ಬಂತು?!!

Next Post

ರಸ್ತೆ ಅಪಘಾತ: ಕಾರವಾರದ ಯುವಕ ಮೃತ್ಯು

Next Post
Road accident Youth from Karwar dies

ರಸ್ತೆ ಅಪಘಾತ: ಕಾರವಾರದ ಯುವಕ ಮೃತ್ಯು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ