6
  • Latest
Sting operation in the high school girl case They are innocent but how much money did they get!!

ಹೈಸ್ಕೂಲ್ ಹುಡುಗಿಯರ ಸ್ಟಿಂಗ್ ಆಪರೇಶನ್: ಅವರು ಅಮಾಯಕರೇ ಆದರೆ ಇಷ್ಟು ಹಣ ಹೇಗೆ ಬಂತು?!!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಶ್ರೀಶಂಕರ ಕ್ಯಾನ್ಸರ್ ಆಸ್ಪತ್ರೆಗೆ LIC ಗೋಲ್ಡನ್ ಜ್ಯೂಬಿಲಿ ಫೌಂಡೇಶನ್‌ನಿಂದ 4.31 ಕೋಟಿ ಮೌಲ್ಯದ ಯಂತ್ರಗಳ ದೇಣಿಗೆ!

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಸಾಮಾಜಿಕ ಜವಾಬ್ದಾರಿ ಸಹಭಾಗಿತ್ವದ ಮೂಲಕ ಸಿ ಆರ್‌ ಪಿ ಎಫ್ ಆವರಣದಲ್ಲಿ ನೂತನ ಕೆರೆ ನಿರ್ಮಾಣ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ಮೈಸೂರು: ಮೆಡಾಲ್ ಕ್ಲುಮ್ಯಾಕ್ಸ್ ಡಯಾಗ್ನೋಸ್ಟಿಕ್ಸ್‌ ಉದ್ಘಾಟನೆ

ADVERTISEMENT
  • Home
Monday, March 30, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಹೈಸ್ಕೂಲ್ ಹುಡುಗಿಯರ ಸ್ಟಿಂಗ್ ಆಪರೇಶನ್: ಅವರು ಅಮಾಯಕರೇ ಆದರೆ ಇಷ್ಟು ಹಣ ಹೇಗೆ ಬಂತು?!!

AchyutKumar by AchyutKumar
in ರಾಜ್ಯ
Sting operation in the high school girl case They are innocent but how much money did they get!!
advt advt advt
ADVERTISEMENT

ಸಿದ್ದಾಪುರದಲ್ಲಿ ಆತ್ಮಹತ್ಯೆಗೆ ಶರಣಾದ ಸಂತೋಷ ನಾಯ್ಕ ಮಾಡಿದ ಮರಣಪೂರ್ವ ವಿಡಿಯೋದಲ್ಲಿ `ಕೋಲಸಿರ್ಸಿ ಕ್ರಾಸಿನ ಹುಡಗಿಯೊಬ್ಬಳ ಓಪನ್ ಫೋಟೋ’ ವಿಷಯದ ಮಾತುಕಥೆಯಿದೆ. ಇದಕ್ಕೆ ಪೂರಕವಾಗಿ ಸಾವನಪ್ಪಿದ ಸಂತೋಷ ನಾಯ್ಕಗೆ ಆರೋಪಿತರು 3.5 ಲಕ್ಷ ರೂ ಹಣ ನೀಡಿದ ಬಗ್ಗೆಯೂ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೇಳಿದ್ದಾರೆ. ಆ ಆರೋಪಿತರಿಗೆ ಅಷ್ಟು ಪ್ರಮಾಣದ ಹಣವಾದರೂ ಎಲ್ಲಿಂದ ಬಂದಿತು? ಎಂಬುದು ಇದೀಗ ಹುಟ್ಟಿಕೊಂಡಿರುವ ಹೊಸ ಪ್ರಶ್ನೆ!

ಹುಡುಗಿಯರ ಹೆಸರಿನಲ್ಲಿ ನಕಲಿ ಸಾಮಾಜಿಕ ಖಾತೆರಚಿಸಿ ಸಿದ್ದಾಪುರದಲ್ಲಿ `ಸ್ಟಿಂಗ್ ಆಪರೇಶನ್’ ನಡೆಸಿದ ಸೊರಬದ ಸಂತೋಷ ನಾಯ್ಕ ಸಾವಿಗೆ ಶರಣಾಗಿದ್ದಾರೆ. ಸಾವಿಗೂ ಮುನ್ನ ಅವರು ಸಿದ್ದಾಪುರದಲ್ಲಿ ಹೈಸ್ಕೂಲ್ ಹುಡುಗಿಯರನ್ನು ಕಾಮದಾಸೆಗೆ ಬಳಸಿಕೊಳ್ಳುತ್ತಿರುವ ಬಗ್ಗೆ ಸ್ಪೋಟಕ ಮಾಹಿತಿ ನೀಡಿದ್ದಾರೆ. ಸಾವಿಗೂ ಮುನ್ನ ಸಂತೋಷ ನಾಯ್ಕ ಮಾಡಿದ ವಿಡಿಯೋದಲ್ಲಿ ವಾಟ್ಸಪ್ ಚಾಟ್ ವಿಷಯ ಹಲವು ರಹಸ್ಯಗಳನ್ನು ಕೆದಕಿದೆ. ಸಿದ್ದಾಪುರ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ವಸಂತ ನಾಯ್ಕ ಹೆಸರು ಈ ವಿಡಿಯೋದಲ್ಲಿ ತಳಕುಹಾಕಿದ್ದು, ಪೊಲೀಸರು ಈಗಾಲೇ ವಸಂತ ನಾಯ್ಕರ ವಿಚಾರಣೆ ನಡೆಸಿದ್ದಾರೆ.

Advertisement. Scroll to continue reading.
ADVERTISEMENT
ADVERTISEMENT

ವಿಚಾರಣೆ ಎದುರಿಸಿ ಹೊರಬಂದ ವಸಂತ ನಾಯ್ಕ ಅವರು `ಸಾವನಪ್ಪಿದ ಸಂತೋಷ ನಾಯ್ಕ ಸಹ ಸಾಚಾ ಅಲ್ಲ’ ಎಂದು ಆರೋಪ ಮಾಡಿದ್ದಾರೆ. ಈ ವೇಳೆ `ಸಂತೋಷ ನಾಯ್ಕಗೆ ಕೆಲ ಹುಡುಗರು 3.5 ಲಕ್ಷ ರೂ ಹಣ ನೀಡಿದ್ದಾರೆ’ ಎಂದು ಸಹ ವಸಂತ ನಾಯ್ಕ ಹೇಳಿದ್ದಾರೆ. ಅಷ್ಟಕ್ಕೂ ದೊಡ್ಡ ದೊಡ್ಡ ದುಡಿಮೆ ಇಲ್ಲದ ಆ ಹುಡುಗರಿಗೆ ಅಷ್ಟು ಪ್ರಮಾಣದ ಹಣ ಎಲ್ಲಿಂದ ಬಂದಿತು? ವಸಂತ ನಾಯ್ಕ ಅವರು `ಅಮಾಯಕರು’ ಎನ್ನುತ್ತಿರುವ ಹುಡುಗರು ಹುಡುಗಿ ಹೆಸರಿನಲ್ಲಿ ಮೆಸೆಜ್ ಮಾಡಿದವನಿಗೆ ಅಷ್ಟೊಂದು ದೊಡ್ಡ ಮೊತ್ತ ಏಕೆ ಕೊಟ್ಟರು? ಎಂಬ ಪ್ರಶ್ನೆ ಜನರನ್ನು ಕಾಡುತ್ತಿದೆ.

ಕಾನೇಹಳ್ಳಿಯಲ್ಲಿ ನಡೆದ ಸಂತೋಷ ನಾಯ್ಕ ಆತ್ಮಹತ್ಯೆ ಪ್ರಕರಣಕ್ಕೆ ಸಂಬoಧಿಸಿ ಪೊಲೀಸರು ಈಗಾಗಲೇ ಇಬ್ಬರನ್ನು ಬಂಧಿಸಿದ್ದಾರೆ. ವಾಹನ ಚಾಲಕನಾಗಿರುವ ಚನ್ನಮಾವಿನ ಹೇಮಂತ ನಾಯ್ಕ ಹಾಗೂ ಶಾಮಿಯಾನ ಹಾಕುವುದನ್ನು ಕಾಯಕವನ್ನಾಗಿಸಿಕೊಂಡಿದ್ದ ಶಿವಕುಮಾರ ನಾಯ್ಕ ಬಂಧಿತರಾಗಿದ್ದು, ಅವರ ವಿಚಾರಣೆ ನಡೆಯುತ್ತಿದೆ. ಬೆಂಗಳೂರಿಗೆ ಪರಾರಿಯಾಗಲು ಯತ್ನಿಸಿದ್ದ ಯುವಕರಿಬ್ಬರನ್ನು ಪೊಲೀಸರು ವಶಕ್ಕೆಪಡೆದಿದ್ದು, ಸಿದ್ದಾಪುರದ ಪೊಲೀಸ್ ಸಿಬ್ಬಂದಿ ಪ್ರಶಾಂತಕುಮಾರ ಹಾಗೂ ಮೋಹನ್ ಗಾವಡಿ ಸಹ ಇದೇ ಪ್ರಕರಣದಲ್ಲಿ ಅಮಾನತು ಆಗಿದ್ದಾರೆ. ಈ ಪ್ರಕರಣದಲ್ಲಿ ಭಾಗಿಯಾದ ಇನ್ನಷ್ಟು ಜನರನ್ನು ಬಂಧಿಸುವ ಸಾಧ್ಯತೆಯಿದೆ.

Advertisement. Scroll to continue reading.

ಈ ಎಲ್ಲದರ ನಡುವೆ ಕೋಲಸಿರ್ಸಿ ಕ್ರಾಸಿನ ಹುಡುಗಿ ವಿಷಯದ ಚರ್ಚೆ ಮುನ್ನೆಲೆಗೆ ಬಂದಿದೆ. ಜೊತೆಗೆ ಇನ್ನಷ್ಟು ಹುಡುಗಿಯರು ಪ್ರೀತಿ-ಪ್ರೇಮದ ವಿಷಯಕ್ಕೆ ಸಿಲುಕಿ `ದೇಹದಾನ’ ಮಾಡಿದ ಬಗ್ಗೆಯೂ ಸಂತೋಷ ನಾಯ್ಕ ಹೇಳಿಕೊಂಡಿದ್ದಾರೆ. ಇದಕ್ಕೆ ಸಂಬoಧಿಸಿ ಅಶ್ಲೀಲ ಫೋಟೋವೊಂದನ್ನು ಸಹ ಅವರು ವಿಡಿಯೋದಲ್ಲಿ ಬಹಿರಂಗಪಡಿಸಿದ್ದು, ವಾಟ್ಸಪ್ ಚಾಟಿನಲ್ಲಿ ಸಹ ಡೌನ್ಲೋಡ್ ಆಗಿರದ ಇನ್ನಷ್ಟು ಹಸಿಬಿಸಿ ಚಿತ್ರಣಗಳನ್ನು ಸಂತೋಷ ನಾಯ್ಕ ವಿಡಿಯೋ ಮೂಲಕ ಕಾಣಿಸಿದ್ದಾರೆ. ಸಂತೋಷ್ ನಾಯ್ಕ ಜೊತೆ ಚಾಟ್ ಮಾಡಿದ ವ್ಯಕ್ತಿಯೇ ಈ ವಿಡಿಯೋಗಳನ್ನು ಹರಿಬಿಟ್ಟಿದ್ದು, `10ನೇ ತರಗತಿ ವಿದ್ಯಾರ್ಥಿನಿಯ ಇನ್ನಷ್ಟು ಇಂಥ ವಿಡಿಯೋಗಳಿದೆ’ ಎಂಬ ಅರ್ಥದಲ್ಲಿ ಆ ಚಾಟ್’ಗಳಿವೆ.

ಸಂತೋಷ ನಾಯ್ಕ ಸಾಚಾ ಅಲ್ಲ ಎಂಬುದು ಎಲ್ಲರಿಗೂ ಗೊತ್ತಿರುವ ಸಂಗತಿ. ಮರಣಪೂರ್ವ ವಿಡಿಯೋ ಕೊನೆಗೆ ಅದನ್ನು ಸಂತೋಷ ನಾಯ್ಕ ಅವರೇ ಒಪ್ಪಿಕೊಂಡಿದ್ದಾರೆ. `ತಾನು ಪ್ರೀತಿಸಿದ ಹುಡುಗಿಗಾಗಿ ಸ್ಟಿಂಗ್ ಆಪರೇಶನ್ ನಡೆಸಿದ್ದು, ಆ ಹುಡುಗಿಯೇ ಇದೀಗ ಅವರ ಬೆಂಬಲಕ್ಕಿದ್ದಾಳೆ’ ಎಂದು ಸಂತೋಷ ನಾಯ್ಕ ಹೇಳಿಕೊಂಡಿದ್ದಾರೆ. ಇದರೊಂದಿಗೆ ಸಂತೋಷ ನಾಯ್ಕ ಜೊತೆ ಚಾಟ್ ಮಾಡಿದ ವ್ಯಕ್ತಿ `ತನ್ನಲ್ಲಿ ಇನ್ನಷ್ಟು ವಿಡಿಯೋ ಇದೆ’ ಎನ್ನುವ ಬಗ್ಗೆ ಹೇಳಿರುವುದು ಹಾಗೂ ಆ ಹುಡುಗರು ಸಂತೋಷ್ ನಾಯ್ಕಗೆ ಲಕ್ಷಾಂತರ ರೂ ಹಣ ನೀಡಿರುವುದು ಸಾಭೀತಾಗಿರುವುದರಿಂದ `ಸತ್ಯ ಇಲ್ಲಿಗೆ ಮುಗಿದಿಲ್ಲ’ ಎಂಬ ಅನುಮಾನಕ್ಕೆ ಕಾರಣವಾಗಿದೆ.

ShareSendTweetShare
ADVERTISEMENT
Previous Post

`ಮಳೆ ಅವಾಂತರಕ್ಕೆ ನಗರಸಭೆಯೇ ಕಾರಣ’

Next Post

ಸೆಂಟ್ ಮಿಲಾಗ್ರಿಸ್: ಸಾಲ ನೀಡಿದ ಸೊಸೈಟಿಗೆ ಮೂರು ನಾಮ!

Next Post
Saint Milagres Three names for the society that gave the loan!

ಸೆಂಟ್ ಮಿಲಾಗ್ರಿಸ್: ಸಾಲ ನೀಡಿದ ಸೊಸೈಟಿಗೆ ಮೂರು ನಾಮ!

Road accident Youth from Karwar dies

ರಸ್ತೆ ಅಪಘಾತ: ಕಾರವಾರದ ಯುವಕ ಮೃತ್ಯು

Sirsi-Kumata Night traffic ban!

ಶಿರಸಿ-ಕುಮಟಾ: ರಾತ್ರಿ ಸಂಚಾರ ನಿಷೇಧ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.