6
  • Latest
Gram Panchayat refuses to provide house number Gram Panchayat member gives deadline to government!

ಮನೆ ನಂ ನೀಡಲು ಗ್ರಾ ಪಂ ನಕಾರ: ಸರ್ಕಾರಕ್ಕೆ ಗಡುವು ನೀಡಿದ ಗ್ರಾ ಪಂ ಸದಸ್ಯ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮನೆ ನಂ ನೀಡಲು ಗ್ರಾ ಪಂ ನಕಾರ: ಸರ್ಕಾರಕ್ಕೆ ಗಡುವು ನೀಡಿದ ಗ್ರಾ ಪಂ ಸದಸ್ಯ!

AchyutKumar by AchyutKumar
in ಸ್ಥಳೀಯ
Gram Panchayat refuses to provide house number Gram Panchayat member gives deadline to government!

`ಉತ್ತರ ಕನ್ನಡ ಜಿಲ್ಲೆಯ ಗ್ರಾಮ ಪಂಚಾಯತ ವ್ಯಾಪ್ತಿಯಲ್ಲಿ ಹೊಸದಾಗಿ ಮನೆ ಸಂಖ್ಯೆ ನೀಡಲು ಅಧಿಕಾರಿಗಳು ಕಾಡಿಸುತ್ತಿದ್ದು, ಒಂದು ತಿಂಗಳ ಒಳಗೆ ಎಲ್ಲಾ ತಾಂತ್ರಿಕ ಸಮಸ್ಯೆ ಬಗೆಹರಿಸಿ ಅಗತ್ಯವಿದ್ದವರಿಗೆ ಮನೆ ಸಂಖ್ಯೆ ನೀಡಬೇಕು’ ಎಂದು ಶಿರಸಿಯ ಗ್ರಾಮ ಪಂಚಾಯತ ಸದಸ್ಯರು ಆಗ್ರಹಿಸಿದ್ದಾರೆ. ಒಂದು ತಿಂಗಳ ಗಡುವು ಮುಗಿದರೂ ಸಮಸ್ಯೆ ಹಾಗೇ ಉಳಿದಲ್ಲಿ ಪ್ರತಿಭಟನೆ ನಡೆಸುವ ಎಚ್ಚರಿಕೆಯನ್ನು ನೀಡಿದ್ದಾರೆ.

ADVERTISEMENT

ಶಿರಸಿಯಲ್ಲಿ ಶುಕ್ರವಾರ ಚುನಾಯಿತ ಗ್ರಾಮ ಪ್ರತಿನಿಧಿಗಳ ಒಕ್ಕೂಟದ ಸಭೆ ನಡೆದಿದ್ದು, ಆಸ್ತಿ ಸಂಖ್ಯೆ ವಿಷಯವಾಗಿ ಸದಸ್ಯರು ಚರ್ಚಿಸಿದರು. ಜನ ಸಾಮಾನ್ಯರು ಅನುಭವಿಸುತ್ತಿರುವ ಸಮಸ್ಯೆ ಹಾಗೂ ಇದರಿಂದ ಗ್ರಾ ಪಂ ಸದಸ್ಯರಿಗೆ ಎದುರಾಗುತ್ತಿರುವ ಆತಂಕದ ಕುರಿತು ಅನೇಕರು ವಿಷಯ ಮಂಡಿಸಿದರು. ಬಡ ಜನರು ಮನೆ ಸಂಖ್ಯೆ ಇಲ್ಲದೇ ತೊಂದರೆ ಅನುಭವಿಸುತ್ತಿರುವ ಬಗ್ಗೆ ಸಭೆಯಲ್ಲಿದ್ದವರು ನೋವು ತೋಡಿಕೊಂಡರು.

`ಅನೇಕ ಗ್ರಾಮ ಪಂಚಾಯತಗಳಲ್ಲಿ ಮನೆ ಸಂಖ್ಯೆ ನೀಡಲು ಅನಗತ್ಯ ವಿಳಂಬ ಮಾಡಲಾಗುತ್ತಿದೆ. ಅನೇಕ ವರ್ಷಗಳಿಂದ ಜನ ಮನೆಯಲ್ಲಿ ವಾಸವಾಗಿದ್ದರೂ ಆ ಮನೆಗೆ ಅಧಿಕೃತ ಸಂಖ್ಯೆ ಸಿಗುತ್ತಿಲ್ಲ’ ಎಂದು ಗ್ರಾ ಪಂ ಸದಸ್ಯರು ಅಸಮಧಾನಹೊರಹಾಕಿದರು. ಈ ಸಮಸ್ಯೆ ಬಗ್ಗೆ ತಾಲೂಕು ಪಂಚಾಯತ ಅಧಿಕಾರಿಗಳ ಜೊತೆ ಚರ್ಚಿಸಿದ ಶಿರಸಿ ಒಕ್ಕೂಟ ಅಧ್ಯಕ್ಷ ನವೀನ ಶೆಟ್ಟಿ `ಒಂದು ತಿಂಗಳ ಒಳಗೆ ಸಮಸ್ಯೆ ಬಗೆಹರಿಸದೇ ಇದ್ದರೆ ಉಗ್ರ ಹೋರಾಟ ನಿಶ್ಚಿತ’ ಎಂದು ಎಚ್ಚರಿಸಿದರು.

Advertisement. Scroll to continue reading.

ಒಕ್ಕೂಟದ ಸದಸ್ಯರಾದ ರವಿಶ್ ಹೆಗಡೆ, ನಾರಾಯಣ ಹೆಗಡೆ, ಮಂಜುನಾಥ ಪೂಜಾರಿ, ಗಜಾನನ ನಾಯ್ಕ, ಎಸ್ ಎಲ್ ರೆಬೆಲ್ಲೊ , ಶ್ರೀಕಲಾ ನಾಯ್ಕ, ನಾಗರಾಜ ಮುಕ್ರಿ ಅವರು ಇದಕ್ಕೆ ಧ್ವನಿಗೂಡಿಸಿದರು. `ಮನೆ ನಂ ನೀಡಲು ಈಗಲೂ ಅವಕಾಶವಿದೆ. ಈ ಬಗ್ಗೆ ಗ್ರಾ ಪಂ ಅಧಿಕಾರಿಗಳಿಗೆ ಸೂಚಿಸುವೆ’ ಎಂದು ತಾ ಪಂ ಅಧಿಕಾರಿಗಳು ಸಮಾಧಾನ ಮಾಡಿದರು.

Advertisement. Scroll to continue reading.
Previous Post

ಕೊನೆಗೂ ಸಿಕ್ಕಿಬಿದ್ದ ಆರೋಪಿ: ಲೀಲಾ ಹೆಗಡೆ ಆತ್ಮಕ್ಕೆ ಸಿಕ್ಕಿತು ಶಾಂತಿ!

Next Post

ಬೈಕಿನಿಂದ ಬಿದ್ದವ ಜಾಗದಲ್ಲಿಯೇ ಕಲಾಸು!

Next Post
Kalasu who fell off his bike is still alive!

ಬೈಕಿನಿಂದ ಬಿದ್ದವ ಜಾಗದಲ್ಲಿಯೇ ಕಲಾಸು!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ