6
  • Latest
Movie song at Devi Utsav: Stabbed with a knife because the song stopped!

ಸಿದ್ದಾಪುರ: ಹಳೆ ದ್ವೇಷ.. ಹೊಸ ಹೊಡೆದಾಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಸಿದ್ದಾಪುರ: ಹಳೆ ದ್ವೇಷ.. ಹೊಸ ಹೊಡೆದಾಟ!

AchyutKumar by AchyutKumar
in ಸ್ಥಳೀಯ
Movie song at Devi Utsav: Stabbed with a knife because the song stopped!

ಸಿದ್ದಾಪುರದ ಮಂಜುನಾಥ ಮಡಿವಾಳ ಹಾಗೂ ಸಂದೇಶ ಮಡಿವಾಳ ನಡುವೆ ವೈಮನಸ್ಸಿದ್ದು, ಅದೇ ವಿಷಯವಾಗಿ ಅವರಿಬ್ಬರ ಪಾಲಕರು ಹೊಡೆದಾಟ ನಡೆಸಿದ್ದಾರೆ. ಪಾಲಕರ ಹೊಡೆದಾಟಕ್ಕೆ ಮಕ್ಕಳು ಕೈ ಜೋಡಿಸಿದ್ದು, ಈ ವೇಳೆ ಚಾಕು-ಕತ್ತಿ ಪ್ರವೇಶಿಸಿದ್ದರಿಂದ ಎಲ್ಲರೂ ಇದೀಗ ಆಸ್ಪತ್ರೆಗೆ ದಾಖಲಾಗಿದ್ದಾರೆ.

ADVERTISEMENT

ಸಿದ್ದಾಪುರದ ಆಡುಕಟ್ಟಾದ ನೆಲ್ಲಿಕೊಪ್ಪದಲ್ಲಿ ರಮೇಶ ಮಡಿವಾಳ ಅವರು ತಮ್ಮ ಪುತ್ರ ಸಂದೇಶ ಮಡಿವಾಳ ಜೊತೆ ಕೃಷಿ ಕೆಲಸ ಮಾಡಿಕೊಂಡಿದ್ದರು. ಪಕ್ಕದ ಊರಾದ ಹೆಗ್ಗೆಕೊಪ್ಪದಲ್ಲಿ ಬಂಗಾರ್ಯ ಮಡಿವಾಳ ಅವರು ತಮ್ಮ ಪುತ್ರ ಮಂಜುನಾಥ ಮಡಿವಾಳ ಜೊತೆ ವಾಸವಾಗಿದ್ದರು. ಬಿಸಿ ರಕ್ತದ ಸಂದೇಶ ಮಡಿವಾಳ ಹಾಗೂ ಮಂಜುನಾಥ ಮಡಿವಾಳ ನಡುವೆ ಮೊದಲಿನಿಂದಲೂ ಕಾದಾಟ ನಡೆಯುತ್ತಿತ್ತು. ಈ ಹಿಂದೆ ನಡೆದಿದ್ದ ಜಗಳದ ಕಾರಣ ಅವರಿಬ್ಬರು ಪರಸ್ಪರ ದ್ವೇಷದಿಂದಲೇ ಬದುಕುತ್ತಿದ್ದರು.

ಈ ಬಗ್ಗೆ ಪೊಲೀಸ್ ಠಾಣೆಯಲ್ಲಿ ಸಹ ಪರಸ್ಪರ ದೂರು-ಪ್ರತಿ ದೂರುಗಳಿದ್ದವು. ಪೊಲೀಸರು ಎರಡು ಕಡೆಯವರನ್ನು ವಿಚಾರಣೆಗೊಳಪಡಿಸಿ ಬುದ್ದಿಹೇಳಿ ಕಳುಹಿಸಿದ್ದರು. ಅದಾಗಿಯೂ ಅವರ ನಡುವಿನ ದ್ವೇಷ ಮಾತ್ರ ಕಡಿಮೆ ಆಗಿರಲಿಲ್ಲ. ಜೂನ್ 19ರ ಮಧ್ಯಾಹ್ನ ಮಂಜುನಾಥ ಮಡಿವಾಳ ಅವರು ಸಂದೇಶ ಮಡಿವಾಳ ಅವರ ಮನೆ ಕಡೆ ಬಂದಿದ್ದರು. ಸಂದೇಶ ಮಡಿವಾಳ ಅವರ ಮನೆಯೊಳಗಿದ್ದ ಟಿವಿಯನ್ನು ಒಡೆದು, ಅಲ್ಲಿದ್ದ ಸಾಮಗ್ರಿಗಳನ್ನು ಧ್ವಂಸ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಸಂದೇಶ ಮಡಿವಾಳ ಸಹ ಮಂಜುನಾಥ ಮಡಿವಾಳ ಅವರ ಮನೆಗೆ ನುಗ್ಗಿ ಅಲ್ಲಿದ್ದ ಗೇಟು-ಬಾಗಿಲು ಮುರಿದಿದ್ದರು.

Advertisement. Scroll to continue reading.

ಆ ದಿನ ರಾತ್ರಿ ಮನೆಗೆ ಬಂದ ರಮೇಶ ಮಡಿವಾಳ ಮಗನಿಂದ ಘಟನಾವಳಿಗಳ ಮಾಹಿತಿ ಪಡೆದರು. ಈ ಬಗ್ಗೆ ವಿಚಾರಿಸುವುದಕ್ಕಾಗಿ ಹೆಗ್ಗೆಕೊಪ್ಪದಲ್ಲಿ ಬಂಗಾರ್ಯ ಮಡಿವಾಳ ಅವರ ಮನೆಗೆ ಹೋದರು. ಆಗ, ರಮೇಶ ಮಡಿವಾಳ ಹಾಗೂ ಬಂಗಾರ್ಯ ಮಡಿವಾಳರ ನಡುವೆ ಜಗಳ ನಡೆಯಿತು. ಅವರಿಬ್ಬರ ಮಕ್ಕಳು ದೊಡ್ಡದಾಗಿ ಜಗಳ ಶುರು ಮಾಡಿದರು. ಆ ನಾಲ್ವರು ಸೇರಿ ಪರಸ್ಪರ ಹೊಡೆದಾಟ ನಡೆಸಿದರು.

Advertisement. Scroll to continue reading.

ಈ ವೇಳೆ ಮಂಜುನಾಥ ಮಡಿವಾಳ ಮನೆಯಲ್ಲಿದ್ದ ಕತ್ತಿ ತಂದು ಬೀಸಿದರು. ರಮೇಶ ಮಡಿವಾಳ ಅವರ ಕೈಗೆ ಗಾಯಗೊಳಿಸಿದರು. ರಮೇಶ ಮಡಿವಾಳ ಸಹ ಕೈಯಿಂದ ಥಳಿಸಿದರು. ಬಂಗಾರ್ಯ ಮಡಿವಾಳ ಅವರು ಸಂದೇಶ ಮಡಿವಾಳ ಅವರಿಗೆ ಥಳಿಸಿದರು. ಸಂದೇಶ ಮಡಿವಾಳ ಸಹ ಎದುರಾಳಿಗಳ ಜೊತೆ ಹೊಡೆದಾಟ ಮಾಡಿದರು. ಪರಿಣಾಮ ಎಲ್ಲರೂ ಗಾಯಗೊಂಡು ಆಸ್ಪತ್ರೆ ಸೇರಿದರು.

ಎರಡು ಕಡೆಯವರ ದೂರು ಆಲಿಸಿದ ಪೊಲೀಸರು ಪ್ರಕರಣ ದಾಖಲಿಸಿಕೊಂಡು, ತನಿಖೆ ನಡೆಸಿದರು.

Previous Post

ಫೋನ್ ಪೇ: ಶಿರಸಿ ಶಿಕ್ಷಕನ ಖಾತೆ ಖಾಲಿ ಖಾಲಿ!

Next Post

ಅಪಘಾತ | ಎದೆಗೆ ನಾಟಿದ ಕಬ್ಬಿಣದ ರಾಡು: ಬ್ಯಾಂಕ್ ಉದ್ಯೋಗಿ ಮರಣ

Next Post
ಅಪಘಾತ | ಎದೆಗೆ ನಾಟಿದ ಕಬ್ಬಿಣದ ರಾಡು: ಬ್ಯಾಂಕ್ ಉದ್ಯೋಗಿ ಮರಣ

ಅಪಘಾತ | ಎದೆಗೆ ನಾಟಿದ ಕಬ್ಬಿಣದ ರಾಡು: ಬ್ಯಾಂಕ್ ಉದ್ಯೋಗಿ ಮರಣ

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ