6
  • Latest
Shirur Hill The soil of the mound remains deep in the Ganga River!

ಶಿರೂರು ಗುಡ್ಡ: ಗಂಗಾವಳಿ ಆಳದಲ್ಲಿಯೇ ಉಳಿದ ದಿಬ್ಬದ ಮಣ್ಣು!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಶಿರೂರು ಗುಡ್ಡ: ಗಂಗಾವಳಿ ಆಳದಲ್ಲಿಯೇ ಉಳಿದ ದಿಬ್ಬದ ಮಣ್ಣು!

AchyutKumar by AchyutKumar
June 21, 2025
in ಸ್ಥಳೀಯ
Shirur Hill The soil of the mound remains deep in the Ganga River!
advt advt advt
ADVERTISEMENT

ಅಂಕೋಲಾ ತಾಲೂಕಿನ ಶಿರೂರಿನಲ್ಲಿ ಗುಡ್ಡ ಕುಸಿತ ನಡೆದು ಒಂದು ವರ್ಷವಾದರೂ ನದಿ ಆಳದಲ್ಲಿ ಬಿದ್ದ ಗುಡ್ಡದ ಮಣ್ಣು ತೆರವು ಕಾರ್ಯಾಚರಣೆ ನಡೆದಿಲ್ಲ. ಗುಡ್ಡ ಕುಸಿತದ ಅವಧಿಯಲ್ಲಿ ನಾಪತ್ತೆಯಾದ ಇಬ್ಬರ ಸುಳಿವು ಸಹ ಈವರೆಗೆ ಸಿಕ್ಕಿಲ್ಲ.

2024ರ ಜುಲೈ 16ರಂದು ಶಿರೂರಿನಲ್ಲಿ ಭಾರೀ ಪ್ರಮಾಣದ ಗುಡ್ಡ ಕುಸಿಯಿತು. ಹೆದ್ದಾರಿ ಅಂಚಿನಲ್ಲಿ ಅಂಗಡಿ ಮಾಡಿಕೊಂಡಿದ್ದ ಲಕ್ಷಣ ನಾಯ್ಕ ಕುಟುಂಬ ಗುಡ್ಡದ ಅಡಿ ಮಣ್ಣಾಯಿತು. ಇದರೊಂದಿಗೆ ಕೇರಳದ ಲಾರಿ ಚಾಲಕ ಅರ್ಜುನ ನದಿ ಆಳದಲ್ಲಿ ಸಿಕ್ಕಿಬಿದ್ದಿದ್ದರಿಂದ ಈ ಭೂ ಕುಸಿತ ಅಂತರಾಷ್ಟಿಯ ಮಟ್ಟದಲ್ಲಿ ಸುದ್ದಿಯಾಗಿದ್ದು, ಇಲ್ಲಿನ ಕಾರ್ಯಾಚರಣೆಯನ್ನು ದೇಶ-ವಿದೇಶದವರು ಅಣಕಿಸುವಂತಾಯಿತು. ಒಟ್ಟು 11 ಜನ ಗುಡ್ಡ ಕುಸಿತದಿಂದ ಸಾವನಪ್ಪಿರುವ ಲೆಕ್ಕ ಸಿಕ್ಕಿತು. ಅರ್ಜುನನ ಶವ ಸಿಕ್ಕ ನಂತರ ಶಿರೂರು ಗುಡ್ಡದ ಸುದ್ದಿ ಕ್ರಮೇಣವಾಗಿ ಕಡಿಮೆಯಾಯಿತು.

Advertisement. Scroll to continue reading.
ADVERTISEMENT
ADVERTISEMENT

ಅದಾದ ನಂತರ ಗಂಗಾವಳಿ ಆಳದಲ್ಲಿ ತುಂಬಿದ ಗುಡ್ಡದ ಮಣ್ಣನ್ನು ತೆಗೆಯಲು ನಾನಾ ಬಗೆಯ ಕಸರತ್ತು ನಡೆಯಿತು. ಗೋವಾದ ಕಂಪನಿಯೊAದು ಇದಕ್ಕೆ ಆಸಕ್ತಿವಹಿಸಿದ್ದು, ನಂತರ ಮಳೆ ಕಾರಣ ಒಡ್ಡಿ ಮಣ್ಣು ತೆಗೆಯುವ ಕೆಲಸವನ್ನು ಅರ್ದಕ್ಕೆ ನಿಲ್ಲಿಸಿತು. ಅದಾದ ನಂತರ ಬೇಸಿಗೆ ಬಂದರೂ ಗುಡ್ಡದ ಮಣ್ಣು ತೆರವು ಮಾಡುವ ಪ್ರಕ್ರಿಯೆ ಮುಂದುವರೆಯಲಿಲ್ಲ. ಗುಡ್ಡ ಕುಸಿತದ ಅವಧಿಯಲ್ಲಿ ಹೆದ್ದಾರಿಯಲ್ಲಿ ಬಿದ್ದ ಭಾರೀ ಪ್ರಮಾಣದ ಮಣ್ಣನ್ನು ತುರ್ತಾಗಿ ತೆಗೆದು ವಾಹನ ಸಂಚಾರಕ್ಕೆ ಅವಕಾಶ ಮಾಡಿಕೊಡಲಾಗಿದ್ದು, ನದಿ ನೀರಿನಲ್ಲಿನ ಮಣ್ಣು ತೆಗೆಯುವ ಸಾಹಸಕ್ಕೆ ಯಾರೂ ಮುಂದೆ ಬರಲಿಲ್ಲ.

Advertisement. Scroll to continue reading.

ನದಿ ಆಳದಲ್ಲಿ ಭಾರೀ ಪ್ರಮಾಣದಲ್ಲಿ ಮಣ್ಣು ಬಿದ್ದಿದ್ದರಿಂದ ಗಂಗಾವಳಿ ಹರಿವಿಗೆ ಸೂಕ್ತ ಜಾಗವಿಲ್ಲ. ಪರಿಣಾಮ ಭಾರೀ ಪ್ರಮಾಣದಲ್ಲಿ ಮಳೆಯಾದರೆ ನದಿ ನೀರು ಮತ್ತೆ ಹೆದ್ದಾರಿಗೆ ಬರುವ ಸಾಧ್ಯತೆ ಹೆಚ್ಚಿದೆ. ಇದರೊಂದಿಗೆ ಪಕ್ಕದ ಉಳುವರೆ ಊರಿಗೂ ಕಂಟಕ ತಪ್ಪಿದ್ದಲ್ಲ. ಹೀಗಾಗಿ ನದಿ ಆಳದ ಮಣ್ಣು ಹೊರ ಹಾಕಲು ಜಿಲ್ಲಾಡಳಿತ ಸಾಕಷ್ಟು ಪ್ರಯತ್ನ ಮಾಡಿದರೂ ಮಣ್ಣು ತೆಗೆಯುವ ಟೆಂಡರ್ ಪಡೆಯಲು ಯಾವ ಕಂಪನಿಯೂ ಆಸಕ್ತಿವಹಿಸಿಲ್ಲ. ದೊಡ್ಡ ದೊಡ್ಡ ಬಾರ್ಜುಗಳ ಬಳಕೆ, ಅಧಿಕ ಕಾಮಗಾರಿ ವೆಚ್ಚ, ಮುಂದುವರೆದ ಮಳೆ ಹಾಗೂ ಮಣ್ಣು ತೆಗೆಯುವ ಕೆಲಸದಲ್ಲಿನ ನಿರಾಸಕ್ತಿಯಿಂದ ಗಂಗಾವಳಿ ಆಳದಲ್ಲಿರುವ ಗುಡ್ಡದ ಮಣ್ಣು ಹಾಗೇ ಉಳಿದಿದೆ.

ShareSendTweetShare
ADVERTISEMENT
Previous Post

ಉಪಯುಕ್ತ ಮಾಹಿತಿ: ಶಿರಸಿಯ ಈ ವೈದ್ಯರೆಲ್ಲರೂ ಆಪತ್ಬಾಂದವರು!

Next Post

ಅರಣ್ಯ ಹಕ್ಕು | ಕಾಯ್ದೆ ಸರಳೀಕರಣಕ್ಕೆ ಕೇಂದ್ರದ ನಕಾರ: ಹೋರಾಟಗಾರನಿಂದ ಮುಖ್ಯಮಂತ್ರಿಗೆ ಪತ್ರ

Next Post
Forest Rights Center's refusal to simplify the law Letter from activist to Chief Minister

ಅರಣ್ಯ ಹಕ್ಕು | ಕಾಯ್ದೆ ಸರಳೀಕರಣಕ್ಕೆ ಕೇಂದ್ರದ ನಕಾರ: ಹೋರಾಟಗಾರನಿಂದ ಮುಖ್ಯಮಂತ್ರಿಗೆ ಪತ್ರ

Struggle to bring what the company gave to the constituency MLAs' fight against the government!

ಕಂಪನಿ ಕೊಟ್ಟಿದ್ದು ಕ್ಷೇತ್ರಕ್ಕೆ ತರಲು ಹರಸಾಹಸ: ಸರ್ಕಾರದ ವಿರುದ್ಧ ಶಾಸಕರ ಹೋರಾಟ!

Wild animal approaches house Deadly attack on fence builder

ಮನೆ ಬಳಿ ಬಂದ ಕಾಡುಪ್ರಾಣಿ: ಬೇಲಿ ನಿರ್ಮಾಣ ಮಾಡುವವನ ಮೇಲೆ ಮಾರಣಾಂತಿಕ ದಾಳಿ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.