6
  • Latest

ಅಂಕೋಲಿಗರಿಗೆ ಅತೃಪ್ತ ಆತ್ಮಗಳ ಕಾಟ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ಅಂಕೋಲಿಗರಿಗೆ ಅತೃಪ್ತ ಆತ್ಮಗಳ ಕಾಟ!

40 ಸಾವಿರ ಬೇಡಿದ ಜ್ಯೋತಿಷಿ | ದೆವ್ವ ಓಡಿಸಲು ಪೊಲೀಸರ ಮೊರೆ | ಬಾವಿಯ ಸುತ್ತ ಅನುಮಾನಗಳ ಹುತ್ತ | ಊರು ಬಿಟ್ಟು ತೆರಳುತ್ತಿರುವ ಜನ

AchyutKumar by AchyutKumar
in ದೇಶ - ವಿದೇಶ

ಕಳೆದ ಎರಡು ವಾರಗಳಿಂದ ಅಂಕೋಲಾ ಹುಲಿದೇವರವಾಡದ ಜನರಿಗೆ ನಿದ್ದೆಯಿಲ್ಲ. ಇದಕ್ಕೆ ಕಾರಣ ಭಾನಾಮತಿಯ ಕಾಟ!
ಬಾಬಿಮನೆ ಪ್ರದೇಶದಲ್ಲಿ ಕಳೆದ 40 ವರ್ಷಗಳಿಂದ ಹಾಳುಬಿದ್ದ ಬಾವಿಯಿಂದ ನಿತ್ಯ ರಾತ್ರಿ ಗಜ್ಜೆಗಳ ಸದ್ದು ಕೇಳಿಬರುತ್ತಿದೆ. ಆ ಸದ್ದಿಗೆ ಜನ ನಲುಗಿದ್ದಾರೆ. ಹಿಂದೂಳಿದವರು ಹಾಗೂ ಮುಸ್ಲಿಂ ಸಮುದಾಯದವರು ಹೆಚ್ಚಿರುವ ಹುಲಿದೇವರವಾಡದಲ್ಲಿ ರಾತ್ರಿ ಎಂದರೆ ಜನ ಹೆದರುತ್ತಿದ್ದಾರೆ. ಕಳೆದ 20 ದಿನಗಳಿಂದ ರಾತ್ರಿ 10.30ರಿಂದ 12ಗಂಟೆಯವರೆಗೂ ಗಜ್ಜೆಯ ಸದ್ದು ಜೋರಾಗಿದೆ. ಆ ಸದ್ದು ಇಡೀ ಊರಿನವರಿಗೆ ಕೇಳುವುದು ಇನ್ನೊಂದು ವಿಶೇಷ.
ಈ ಬಾವಿಯಲ್ಲಿ ಪ್ರೇತಾತ್ಮವಿದೆ ಎಂಬ ವದಂತಿ ಮೊದಲಿನಿಂದಲೂ ಇತ್ತು. ಅದಕ್ಕಾಗಿ ಸಮೀಪದ ಮನೆಯವರು ಹೊಮವನ್ನು ಮಾಡಿಸಿದ್ದರು. ತಿಂಗಳ ಹಿಂದೆ ಬಾವಿಯನ್ನು ಸ್ವಚ್ಛಗೊಳಿಸಿ ಆ ನೀರನ್ನು ಬಳಸಲು ಶುರು ಮಾಡಿದ್ದರು. `ಆ ಮನೆಯವರು ಪ್ರೇತಕ್ಕೆ ಸರಿಯಾಗಿ ದಿಗ್ಬಂಧನ ಹಾಕಿಲ್ಲ. ಅದೇ ಕಾರಣಕ್ಕೆ ಇಡೀ ಊರಿಗೆ ತೊಂದರೆಯಾಗುತ್ತಿದೆ’ ಎಂಬುದು ಸ್ಥಳೀಯರ ಆಕ್ಷೇಪ. `ನಾವು ಹೋಮ ಹಾಕಿ ಆ ನೀರು ಬಳಸುತ್ತಿದ್ದೇವೆ. ನಮಗೆ ಯಾವುದೇ ಸದ್ದು ಕೇಳುತ್ತಿಲ್ಲ. ಊರಿನವರ ಮಾತು ಸುಳ್ಳು’ ಎಂಬುದು ಆ ಮನೆಯವರ ಆರೋಪ.
ಗಜ್ಜೆ ಸದ್ದು ಕೇಳಿದ ಇಬ್ಬರು ಜ್ವರದಿಂದ ಮಲಗಿದ್ದಾರೆ. ಇನ್ನೂ ಕೆಲವರು `ಈ ಊರಿನ ಸಹವಾಸವೇ ಬೇಡ’ ಎಂದು ಸಂಬAಧಿಕರ ಮನೆಗೆ ತೆರಳಿದ್ದಾರೆ. ಗಜ್ಜೆ ಸದ್ದು ಕೇಳಿದ ಒಬ್ಬ 112 ಸಹಾಯವಾಣಿಗೆ ಕರೆ ಮಾಡಿದ್ದು, ಅಲ್ಲಿಗೆ ಬಂದ ಪೊಲೀಸರು `ಮನುಷ್ಯರಿಂದ ತೊಂದರೆ ಆದರೆ ಮಾತ್ರ ನಾವು ಬಗೆಹರಿಸುತ್ತೇವೆ’ ಎಂದಿದ್ದಾರೆ. ಇದೆಲ್ಲದರ ನಡುವೆ ಊರಿನವರೆಲ್ಲ ಸೇರಿ ಭಾನಾಮತಿ ಓಡಿಸಲು ಜ್ಯೋತಿಷಿಯ ಮೊರೆ ಹೋಗಿದ್ದು, ಜ್ಯೋತಿಷಿ 40 ಸಾವಿರ ರೂ ಕೇಳಿದ್ದಾರೆ. `ಈ ಬಾವಿಯಲ್ಲಿ ಸಮಸ್ಯೆ ಇದೆ. ಎರಡು ಜೀವ ಹೋಗುವ ಸಾಧ್ಯತೆ ಹೆಚ್ಚಿದೆ’ ಎಂದು ಜ್ಯೋತಿಷಿ ಹೇಳಿದ್ದರಿಂದ ಜನ ಇನ್ನಷ್ಟು ಹೆದರಿದ್ದಾರೆ. ಹೀಗಾಗಿ ಊರಿನವರೆಲ್ಲ ಸೇರಿ 40 ಸಾವಿರ ಒಟ್ಟು ಹಾಕುತ್ತಿದ್ದರೆ, ಕೆಲವರು `ತನ್ನಲ್ಲಿ ಹಣವಿಲ್ಲ’ ಎನ್ನುತ್ತ ಅಸಹಾಯಕತೆ ವ್ಯಕ್ತಪಡಿಸಿದ್ದಾರೆ.

ADVERTISEMENT
Advertisement. Scroll to continue reading.
Advertisement. Scroll to continue reading.
Previous Post

ಮಕ್ಕಳ ಊಟಕ್ಕೆ ಮಳೆ ನೀರೇ ಗತಿ!

Next Post

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

Next Post
ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್’ ಜೊತೆ ಕೈ ಜೋಡಿಸಿ!

ಡಿಜಿಟಲ್ ಟ್ರಿಕ್ ಬಳಸಿ `ಟ್ರೆಕ್' ಜೊತೆ ಕೈ ಜೋಡಿಸಿ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ