6
  • Latest
Ananthanam's supporters clash Former MP flies to Singapore

ಅನಂತಣ್ಣನ ಬೆಂಬಲಿಗರ ಹೊಡೆದಾಟ: ಸಿಂಗಾಪುರಕ್ಕೆ ಹಾರಿದ ಮಾಜಿ ಸಂಸದ

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಮಗೆ ನಾವೇ, ರಸ್ತೆಗೆ ಮಣ್ಣೇ!

ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

ಸುಜ್ಞಾನ ಸೇವಾ ಸಂಸ್ಥೆಯಿಂದ ಜಿಲ್ಲಾಮಟ್ಟದ ಮುದ್ದುಕೃಷ್ಣ ವೇಷ ಫೊಟೊ ಸ್ಪರ್ಧೆ: ಫಲಿತಾಂಶ ಪ್ರಕಟ

  • Home
Tuesday, August 19, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

ಅನಂತಣ್ಣನ ಬೆಂಬಲಿಗರ ಹೊಡೆದಾಟ: ಸಿಂಗಾಪುರಕ್ಕೆ ಹಾರಿದ ಮಾಜಿ ಸಂಸದ

AchyutKumar by AchyutKumar
in ರಾಜ್ಯ
Ananthanam's supporters clash Former MP flies to Singapore

ಉತ್ತರ ಕನ್ನಡದ ಮಾಜಿ ಸಂಸದ ಅನಂತಕುಮಾರ ಹೆಗಡೆ ಅವರು ಸಂಚರಿಸುತ್ತಿದ್ದ ಕಾರನ್ನು ಹಿಂದಿಕ್ಕಿದ ಕೆಲವರು ಸಂಸದರ ಕುರಿತು ಅವಹೇಳನಕಾರಿ ರೀತಿಯಲ್ಲಿ ಮಾತನಾಡಿದ್ದು, ಇದೇ ವಿಷಯವಾಗಿ ತುಮಕೂರಿನ ಬಳಿ ಹೊಡೆದಾಟ ನಡೆದಿದೆ.

ADVERTISEMENT

ಬೆಂಗಳೂರಿನ ಹೊರವಲಯದ ಹಳೆ ನಿಜಗಲ್ ಬಳಿ ಈ ಹೊಡೆದಾಟ ನಡೆದಿದೆ. ಹೊಡೆದಾಟ ವಿಷಯವಾಗಿ ಅನಂತಕುಮಾರ ಹೆಗಡೆ ಅವರ ಪುತ್ರ, ಕಾರು ಚಾಲಕ ಹಾಗೂ ಗನ್‌ಮ್ಯಾನ್ ವಿರುದ್ಧ ದಾಬಸ್‌ಪೇಟೆ ಪೊಲೀಸರು ಪ್ರಕರಣ ದಾಖಲಿಸಿದ್ದಾರೆ.

ಹಳೆ ನಿಜಗಲ್ ಬಳಿ ಅನಂತಕುಮಾರ ಹೆಗಡೆ ಅವರು ಕಾರ್ಯಕ್ರಮವೊಂದರಲ್ಲಿ ಭಾಗವಹಿಸಿದ್ದರು. ಅದನ್ನು ಮುಗಿಸಿ ಅವರು ಸಿಂಗಾಪುರಕ್ಕೆ ಹೋಗಬೇಕಿದ್ದು, ಬೆಂಗಳೂರಿನ ಕಡೆ ಹೊರಟಿದ್ದರು. ಆಗ, ಇನ್ನಷ್ಟು ವೇಗವಾಗಿ ಕಾರೊಂದು ಆಗಮಿಸಿ ಅನಂತಕುಮಾರ ಹೆಗಡೆ ಅವರಿದ್ದ ಕಾರನ್ನು ಹಿಂದಿಕ್ಕಿತು. ಅದಾದ ನಂತರ ಮುಂದೆ ಚಲಿಸಿದ ಕಾರಿನವರು ಅನಂತಕುಮಾರ ಹೆಗಡೆ ಅವರ ಕಾರಿನಲ್ಲಿದ್ದವರನ್ನು ನಿಂದಿಸಿದರು. ಇದೇ ವಿಷಯವಾಗಿ ಎರಡು ಕಾರಿನಲ್ಲಿದ್ದವರ ನಡುವೆ ವಾಗ್ವಾದ ನಡೆದಿದ್ದು, ಹೊಡೆದಾಟಕ್ಕೆ ಕಾರಣವಾಯಿತು.

Advertisement. Scroll to continue reading.

ಇನ್ನೊಂದು ಕಾರನ್ನು ಸೈಫ್ ಖಾನ್ ಎಂಬಾತರು ಚಲಾಯಿಸುತ್ತಿದ್ದರು. ಕಾರು ಓವರ್‌ಟೆಕ್ ಮಾಡಲು ಆಗಲಿಲ್ಲ ಎಂಬ ಕಾರಣಕ್ಕೆ ಸೈಫ್ ಖಾನ್ ಅಡ್ಡಾದಿಡ್ಡಿ ಕಾರು ಓಡಿಸಿದ್ದು, ಕೊನೆಗೂ ಅನಂತಕುಮಾರ ಹೆಗಡೆ ಅವರು ಕೂತಿದ್ದ ಕಾರನ್ನು ಹಿಂದಿಕ್ಕಿ ಮುಂದೆ ಸಾಗಿದರು. ಅಡ್ಡಾದಿಡ್ಡಿ ಕಾರು ಓಡಿಸಿದ ವಿಷಯವಾಗಿ ಅನಂತಕುಮಾರ ಹೆಗಡೆ ಅವರ ಕಾರಿನ ಚಾಲಕ ಸೈಫ್ ಖಾನ್ ಅವರನ್ನು ಪ್ರಶ್ನಿಸಿರುವುದೇ ಹೊಡೆದಾಟಕ್ಕೆ ಕಾರಣವಾಯಿತು. ಸದ್ಯ ಸೈಫ್ ಖಾನ್ ಕುಟುಂಬದವರ ಮೇಲೆ ಅನಂತಕುಮಾರ ಹೆಗಡೆ ಕಾರಿನಲ್ಲಿದ್ದ ಜನ ಹಲ್ಲೆ ನಡೆಸಿದ ಆರೋಪ ಎದುರಿಸುತ್ತಿದ್ದಾರೆ.

Advertisement. Scroll to continue reading.

ಸೈಫ್ ಖಾನ್ ಅವರ ಕುಟುಂಬದ ಸದಸ್ಯರು ಕಾರಿನ ಒಳಗಿನಿಂದ ಹೊಡೆದಾಟದ ದೃಶ್ಯಾವಳಿಗಳನ್ನು ರೆಕಾರ್ಡ್ ಮಾಡಿದ್ದಾರೆ. ಹೊಡೆದಾಟದಲ್ಲಿ ಸೈಫ್ ಖಾನ್ ಅವರ ಹಲ್ಲು ಮುರಿದಿದೆ. ನೆಲಮಂಗಲದಲ್ಲಿರುವ ಪೊಲೀಸ್ ಉಪಅಧೀಕ್ಷಕರ ಕಚೇರಿಯಲ್ಲಿ ಪೊಲೀಸರು ಅನಂತಕುಮಾರ ಹೆಗಡೆ ಅವರನ್ನು ವಿಚಾರಣೆಗೊಳಪಡಿಸಿ ಬಿಡುಗಡೆ ಮಾಡಿದ್ದಾರೆ. ಇದರಿಂದ ಆಕ್ರೋಶವ್ಯಕ್ತಪಡಿಸಿದ ಸೈಫ್ ಖಾನ್ ಅನಂತಕುಮಾರ ಹೆಗಡೆ ಬಂಧನಕ್ಕಾಗಿ ಪಟ್ಟು ಹಿಡಿದಿದ್ದಾರೆ. ಅನಂತಕುಮಾರ ಹೆಗಡೆ ಗನ್ ಮ್ಯಾನ್ ಹಾಗೂ ಚಾಲಕನ ಬಂಧನವಾಗಿದೆ. ಅನಂತಕುಮಾರ ಹೆಗಡೆ ತಮ್ಮ ಪೂರ್ವನಿಗದಿತ ಕಾರ್ಯಕ್ರಮದಂತೆ ವಿದೇಶಕ್ಕೆ ತೆರಳಿದ್ದಾರೆ.

Previous Post

ಗ್ರಾಮಸಭೆ: ಜನ ಬಂದರೂ ಅಧಿಕಾರಿಗಳೇ ಬಂದಿಲ್ಲ!

Next Post

ಬಾಲಕನಿಗೆ ಗುದ್ದಿದ ಬುಲೆರೋ: ಶಾಲೆಗೆ ಹೋಗಿದ್ದ ಹುಡುಗ ಮನೆಗೆ ಮರಳಿದ್ದು ಹೆಣವಾಗಿ!

Next Post
Bulero punches boy Boy who went to school returns home dead!

ಬಾಲಕನಿಗೆ ಗುದ್ದಿದ ಬುಲೆರೋ: ಶಾಲೆಗೆ ಹೋಗಿದ್ದ ಹುಡುಗ ಮನೆಗೆ ಮರಳಿದ್ದು ಹೆಣವಾಗಿ!

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ