ಯಲ್ಲಾಪುರ: ತಾಲೂಕಿನ ಬಾರೆ ಸಮೀಪದ ಬಂಕೊಳ್ಳಿಯ ವೃದ್ಧನೊಬ್ಬ ಕಾಣೆಯಾದ ಬಗ್ಗೆ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಬಂಕೊಳ್ಳಿಯ ನೆಮ್ಮಾ ನಾರಾಯಣ ಕುಣಬಿ ಕಾಣೆಯಾದ ವ್ಯಕ್ತಿ. ಇವರು ಕಳೆದ ಜೂನ್ 30 ರಂದು ಬೆಳಗಿನ ಜಾವ ಮನೆಯಿಂದ ಹೋದವರು ಮರಳಿ ಮನೆಗೆ ಬಂದಿಲ್ಲವೆಂದು ಕುಟುಂಬದವರು ದೂರಿದ್ದಾರೆ.
ADVERTISEMENT







