ಭಟ್ಕಳದ ಶ್ರೀ ಕಂಚಿನ ದುರ್ಗಾ ಪರಮೇಶ್ವರಿ ದೇವಸ್ಥಾನದ ಒಳ ಹೊಕ್ಕಿ ದೇವಸ್ಥಾನದ ಕಾಣಿಕೆ ಹುಂಡಿಯ ಹಣ ಕಳ್ಳತನ ಮಾಡಿದ್ದ ಇಬ್ಬರು ಕಳ್ಳರು ಪೊಲೀಸರ ಬಲೆಗೆ ಬಿದ್ದಿದ್ದಾರೆ.
ಕಾರಗದ್ದೆಯ ದರ್ಶನ್ ಮಂಜುನಾಥ್ ನಾಯ್ಕ, ಕಾರಗದ್ದೆ, ಭಟ್ಕಳ, ಶಿರಾಲಿಯ ನಾರಾಯಣ ನಾಗಪ್ಪ ಗುಡಿಹಿತ್ತಲ ಬಂಧಿತರು.
ಇವರು ದೇವಸ್ಥಾನದ ಬಾಗಿಲಿನ ಬೀಗವನ್ನು ಮುರಿದು ಒಳಗೆ ಬಂದು, ಹುಂಡಿಯ ಬೀಗವನ್ನು ಮುರಿದು ಹುಂಡಿಯಲ್ಲಿದ್ದ ಹಣವನ್ನು ಕಳ್ಳತನವನ್ನು ಮಾಡಿಕೊಂಡು ಹೋಗಿದ್ದರು. ಪ್ರಕರಣ ದಾಖಲಿಸಿಕೊಂಡ ಪೊಲೀಸರು ಇಬ್ಬರನ್ನೂ ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.
ಕ್ರತ್ಯಕ್ಕೆ ಬಳಸಲಾದ ಒಂದು ದ್ವಿಚಕ್ರ ವಾಹನವನ್ನು ಒಳಗೊಂಡಂತೆ ಹಾಗೂ 1,20,030 ರೂ. ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಳ್ಳಲಾಗಿದೆ. ಬಂಧಿತರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.







