ಯಲ್ಲಾಪುರ ತಾಲೂಕಿನ ಮಲವಳ್ಳಿಯಿಂದ ಬೇಣದಗುಳೆಗೆ ಹೋಗುವ ಕ್ರಾಸ್ ಬಳಿ ರಸ್ತೆ ಕುಸಿಯುವ ಅಪಾಯವಿದ್ದು, ವಾಹನ ಸವಾರರು ಭಯದಲ್ಲೇ ಸಾಗಬೇಕಾಗಿದೆ.
ಮಲವಳ್ಳಿಯಿಂದ ಬೇಣದಗುಳಿ ರಸ್ತೆ ಕ್ರಾಸಿನಲ್ಲಿನ ದೇವರ ಹಳ್ಳಕ್ಕೆ ಅಳವಡಿಸಿದ ಸಿಮೆಂಟ್ ಪೈಪ್ ಪಕ್ಕದಲ್ಲಿ ಕುಸಿತವಾಗಿದೆ. ಇದರಿಂದ ರಸ್ತೆಯ ಒಳಭಾಗದ ಮಣ್ಣು ತೊಳೆದು ಹೋಗಿದೆ. ಮಳೆ ಜೋರಾದಲ್ಲಿ ರಸ್ತೆಯು ಸಂಪೂರ್ಣ ಕುಸಿಯುವ ಸಾಧ್ಯತೆ ಇದೆ.
ರಸ್ತೆಯ ಮೇಲ್ಭಾಗದಿಂದ ನೋಡಿದರೆ ಅಪಾಯದ ಹಂತ ತಿಳಿಯುವಂತಿಲ್ಲ. ಆದರೆ ಒಳ ಭಾಗದಲ್ಲಿ ಪೂರ್ಣ ರಸ್ತೆಯು ಟೊಳ್ಳಾಗಿದೆ. ದೊಡ್ಡ ವಾಹನಗಳು ಓಡಾಡಿದರೆ ಅಪಾಯ ಕಟ್ಟಿಟ್ಟ ಬುತ್ತಿ.
ಹಾಗಾಗಿ ಸಣ್ಣಪುಟ್ಟ ವಾಹನಗಳನ್ನು ಹೊರತುಪಡಿಸಿ, ದೊಡ್ಡ ವಾಹನಗಳು ಸಂಚರಿಸದೇ ಇರುವುದು ಒಳ್ಳೆಯದೆಂದು ಸ್ಥಳೀಯ ಆಡಳಿತ ಜಾಗೃತಿ ಮೂಡಿಸುತ್ತಿದೆ.







