ಯಲ್ಲಾಪುರ ತಾಲೂಕಿನ ಕೆಳಾಸೆಯಲ್ಲಿ ಬುಡಕಟ್ಟು ಸಮುದಾಯದವರು ನಡೆಸುತ್ತಿರುವ ಸಾರ್ವಜನಿಕ ಗಜಾನೋತ್ಸವ ಸಮಿತಿಯ ಬೆಳ್ಳಿ ಹಬ್ಬದ ಪ್ರಯುಕ್ತ ವಿವಿಧ ಕ್ಷೇತ್ರಗಳ ಸಾಧಕರನ್ನು ಗೌರವಿಸಲಾಯಿತು.
25 ವರ್ಷದ ಹಿಂದೆ ಸಾರ್ವಜನಿಕ ಗಣಪತಿಯ ಪೂಜೆ ಮಾಡಲು ಅವಕಾಶ ಮಾಡಿಕೊಟ್ಟ ಬುದ್ದಾ ಹಪಾರ್ಯ ಸಿದ್ದಿ, ದಾನಿಗಳಾದ ಅನಂತ ಸಿದ್ದಿ ನಂದೊಳ್ಳಿ, ಸೈನಿಕ ಗೌತಮ ನಾಗೇಂದ್ರ ಸಿದ್ಧಿ ಉಮ್ಮಚಗಿ ಅವರನ್ನು ಸನ್ಮಾನಿಸಲಾಯಿತು.
ಈ ವೇಳೆ ಸಮಿತಿ ಅಧ್ಯಕ್ಷ ಶಂಕರ ನಾರಾಯಣ ಸಿದ್ದಿ, ಉಪಾಧ್ಯಕ್ಷ ಶಿವಾನಂದ ಬೊಂಡು ಸಿದ್ದಿ, ಕಾರ್ಯದರ್ಶಿ ಶ್ರೀನಾಥ ಕೃಷ್ಣ ಸಿದ್ದಿ, ಖಜಾಂಚಿ ಶೇಷಾ ತಮ್ಮು ಸಿದ್ದಿ, ಅರ್ಚಕ ಕೃಷ್ಣ ತಮ್ಮ ಸಿದ್ದಿ ಕೆಳಾಸೆ, ಸ್ಥಳೀಯ ಪ್ರಮುಖರಾದ ರಾಜೇಶ್ವರಿ ಸಿದ್ದಿ ಹಾಗೂ ಉತ್ಸವ ಸಮಿತಿಯ ಪದಾಧಿಕಾರಿಗಳು, ಸದಸ್ಯರು ಭಾಗವಹಿಸಿದ್ದರು.







