ಯಲ್ಲಾಪುರ ತಾಲೂಕಿನ ಪ್ರಸಕ್ತ ಸಾಲಿನ ಉತ್ತಮ ಶಿಕ್ಷಕ ಪ್ರಶಸ್ತಿ ಪ್ರಕಟಿಸಲಾಗಿದೆ. ಪ್ರಾಥಮಿಕ ಶಾಲೆಯ ಮೂರು ಹಾಗೂ ಪ್ರೌಢಶಾಲೆಗಳ ಇಬ್ಬರು ಶಿಕ್ಷಕರಿಗೆ ಪ್ರಶಸ್ತಿ ಘೋಷಿಸಲಾಗಿದೆ.
ಪ್ರಾಥಮಿಕ ಶಾಲಾ ವಿಭಾಗದಲ್ಲಿ ತಾರೇಹಳ್ಳಿ ಸ.ಹಿ.ಪ್ರಾ ಶಾಲೆಯ ರಾಮದಾಸ ಪೈ, ಶಿರನಾಲಾ ಸ.ಹಿ.ಪ್ರಾ ಶಾಲೆಯ ಸತೀಶ ಶೆಟ್ಟಿ, ಕೊಂಡೆಮನೆಯ ಸ.ಕಿ.ಪ್ರಾ ಶಾಲೆಯ ಮಮತಾಜ್ ನದಾಫ ಅವರು ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ.
ಪ್ರೌಢಶಾಲಾ ವಿಭಾಗದಲ್ಲಿ ಯಲ್ಲಾಪುರ ಸರ್ಕಾರಿ ಪ್ರೌಢಶಾಲೆಯ ಶ್ಯಾಮಲಾಬಾಯಿ ಹಾಗೂ ಮಂಚಿಕೇರಿಯ ರಾಜರಾಜೇಶ್ವರಿ ಪ್ರೌಢಶಾಲೆಯ ಸದಾನಂದ ನಾಯ್ಕ ಆಯ್ಕೆಯಾಗಿದ್ದಾರೆ.
ಇವರಿಗೆ ಸೆ.5 ರಂದು ನಡೆಯಲಿರುವ ತಾಲೂಕು ಮಟ್ಟದ ಶಿಕ್ಷಕರ ದಿನಾಚರಣೆ ಕಾರ್ಯಕ್ರಮದಲ್ಲಿ ಪ್ರಶಸ್ತಿ ನೀಡಿ ಗೌರವಿಸಲಾಗುವುದೆಂದು ಬಿಇಒ ರೇಖಾ ನಾಯ್ಕ ತಿಳಿಸಿದ್ದಾರೆ.







