ಯಲ್ಲಾಪುರದ ಅಡಿಕೆ ಭವನದಲ್ಲಿ ಮಲೆನಾಡು ಕೃಷಿ ಅಭಿವೃದ್ಧಿ ಸೇವಾ ಸಹಕಾರಿ ಸಂಘದ ವಾರ್ಷಿಕ ಸರ್ಷ ಸಾಧಾರಣ ಸಭೆ ಎಂ.ಆರ್.ಹೆಗಡೆ ಕುಂಬ್ರಿಗುಡ್ಡೆ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.
ಯುವ ಕೃಷಿ ಸಾಧಕರಾದ ವಿನಾಯಕ ಭಟ್ಟ ತುಡುಗುಣಿ, ಸುಬ್ರಹ್ಮಣ್ಯ ಬಾಗಿನಕಟ್ಟಾ, ಜಯಪ್ರಕಾಶ ಹೆಗಡೆ ಶಿರನಾಲಾ, ವಾಸುದೇವ ಶೆಟ್ಟಿ ಕುಂದರ್ಗಿ, ಅನಂತ ಹೆಗಡೆ ತೋರಣಸರ, ಆದಿತ್ಯ ಹೆಗಡೆ ಹಿರೇಸರ, ಸುಬ್ರಾಯ ಭಟ್ಟ ದಾನ್ಯಾನಕೊಪ್ಪ, ಗಣೇಶ ಭಟ್ಟ ಶಿರಲೆ, ಶಿವರಾಮ ಭಟ್ಟ ಶಿದ್ರಮನೆ, ಮಹೇಶ ಭಟ್ಟ ಹಸ್ರಪಾಲ,ಗಣಪತಿ ನಾಯ್ಕ ಸಾವಗದ್ದೆ ಅವರನ್ನು ಸನ್ಮಾನಿಸಿ ಗೌರವಿಸಲಾಯಿತು. ಸನ್ಮಾನಿತರ ಪರವಾಗಿ ಆದಿತ್ಯ ಹೆಗಡೆ ಹಿರೇಸರ, ಮಾತನಾಡಿದರು.
ಸಂಘದ ಉಪಾಧ್ಯಕ್ಷ ಎಂ.ಜಿ.ಭಟ್ಟ ಶೀಗೇಪಾಲ, ಲೆಕ್ಕಪರಿಶೋಧಕ ಎಸ್.ಜಿ.ಹೆಗಡೆ ಬೆದೆಹಕ್ಲ ಹಾಗೂ ನಿರ್ದೇಶಕರು ವೇದಿಕೆಯಲ್ಲಿದ್ದರು.
ನಿರ್ದೇಶಕ ಎಂ.ಆರ್.ಹೆಗಡೆ ತಾರೇಹಳ್ಳಿ ಸ್ವಾಗತಿಸಿದರು, ಡಾ.ರವಿ ಭಟ್ಟ ಬರಗದ್ದೆ, ಸಣ್ಣಪ್ಪ ಭಾಗ್ವತ್ ನಿರೂಪಿಸಿದರು, ಮುಖ್ಯ ಕಾರ್ಯನಿರ್ವಾಹಕ ವಿನಾಯಕ ಹೆಗಡೆ ವಾರ್ಷಿಕ ವರದಿ ಮಂಡಿಸಿದರು. ನಿರ್ದೇಶಕ ದತ್ತಾತ್ರೇಯ ಬೋಳಗುಡ್ಡೆ ವಂದಿಸಿದರು.







