ಯಲ್ಲಾಪುರ ನ್ಯಾಯಾಲಯದ ಆವಾರದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು.
ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ.ಎಸ್ ಅವರ ಸಮ್ಮುಖದಲ್ಲಿ ದಾಖಲಾಗಿದ್ದ 44 ಪ್ರಕರಣಗಳಲ್ಲಿ 23 ಪ್ರಕರಣಗಳು ಇತ್ಯರ್ಥಗೊಂಡು, 78.56 ಲಕ್ಷ ರೂ ಭರಣವಾಯಿತು. ಸಂಧಾನಕಾರರಾಗಿ ರವಿ ಶಿವನಗೌಡ ಪಾಟೀಲ ಕಾರ್ಯನಿರ್ವಹಿಸಿದರು.
ಸಿವಿಲ್ ನ್ಯಾಯಾಲಯದಲ್ಲಿ ನ್ಯಾಯಾಧೀಶರಾದ ಅನಿತಾಕುಮಾರಿ ಎಸ್ ಅವರ ಸಮ್ಮುಖದಲ್ಲಿ 215 ಪ್ರಕರಣಗಳು ದಾಖಲಾಗಿದ್ದು, 187 ಪ್ರಕರಣಗಳು ಇತ್ಯರ್ಥಗೊಂಡು 6.22 ಕೋಟಿ ರೂ ಭರಣವಾಯಿತು. ಸಂಧಾನಕಾರರಾಗಿ ಬಿ.ಬಿ.ಅಮೀನಾ ಶೇಖ್ ಕಾರ್ಯನಿರ್ವಹಿಸಿದರು. 396 ಬ್ಯಾಂಕ್ ಪ್ರಕರಣಗಳು ದಾಖಲಾಗಿದ್ದು, ಅವುಗಳಲ್ಲಿ 7 ಪ್ರಕರಣಗಳು ಇತ್ಯರ್ಥಗೊಂಡು, 7.80 ಲಕ್ಷ ರೂ ಭರಣವಾಯಿತು.
ವಕೀಲರ ಸಂಘದ ಅಧ್ಯಕ್ಷ ವಿ.ಟಿ.ಭಟ್ಟ, ಅಪರ ಸರ್ಕಾರಿ ವಕೀಲ ಎನ್.ಟಿ.ಗಾಂವ್ಕರ, ಸಹಾಯಕ ಸರ್ಕಾರಿ ಅಭಿಯೋಜಕರಾದ ಝೀನತ್ ಬಾನು ಶೇಖ್ ಇತರರಿದ್ದರು.
ಫೊಟೊ- 13 ವಾಯೆಲ್ಪಿ 07- ಯಲ್ಲಾಪುರದ ನ್ಯಾಯಾಲಯದ ಆವಾರದಲ್ಲಿ ಶನಿವಾರ ರಾಷ್ಟ್ರೀಯ ಲೋಕ ಅದಾಲತ್ ನಡೆಯಿತು. ಹಿರಿಯ ಸಿವಿಲ್ ನ್ಯಾಯಾಧೀಶ ಕುಮಾರ. ಎಸ್, ಸಿವಿಲ್ ನ್ಯಾಯಾಧೀಶರಾದ ಅನಿತಾಕುಮಾರಿ ಎಸ್, ಸಂಧಾನಕಾರರಾದ ಬಿ.ಬಿ.ಅಮೀನಾ ಶೇಖ್, ರವಿ ಶಿವನಗೌಡ ಪಾಟೀಲ ಇತರರಿದ್ದರು.







