ಜಿಲ್ಲಾ ತಂಬಾಕು ಕೋಶದ ಆದೇಶದಂತೆ ತಾಲೂಕು ತಂಬಾಕು ತನಿಖಾ ದಳದಿಂದ ಯಲ್ಲಾಪುರ ಪಟ್ಟಣ ಹಾಗೂ ಉಮ್ಮಚಗಿ ಗ್ರಾಮದಲ್ಲಿ ಅಂಗಡಿಗಳ ಮೇಲೆ ದಾಳಿ ನಡೆಸಿ, ತಂಬಾಕು ಉತ್ಪನ್ನಗಳನ್ನು ಮಾರುವವರಿಗೆ ದಂಡ ವಿಧಿಸಲಾಯಿತು.
ಸಿಗರೇಟುಗಳ ಮತ್ತು ಇತರೆ ತಂಬಾಕು ಉತ್ಪನ್ನಗಳ ಜಾಹೀರಾತು ನಿಷೇಧ, ವ್ಯಾಪಾರ, ವಾಣಿಜ್ಯ ಉತ್ಪಾದನೆ, ಸರಬರಾಜು ಮತ್ತು ವಿತರಣೆಯ ವಿನಿಮಯ ಅಧಿನಿಯಮ 2024ರ ಕುರಿತು ಜಾಗೃತಿ ಮೂಡಿಸಲಾಯಿತು. 5700 ರೂ ದಂಡ ವಿಧಿಸಲಾಯಿತು.
ಉಪ ತಹಸೀಲ್ದಾರ ಕೆ.ಎನ್. ಫರ್ನಾಂಡಿಸ್, ತಾಲೂಕು ಆರೋಗ್ಯಾಧಿಕಾರಿ ಡಾ. ನರೇಂದ್ರ ಪವಾರ, ಕ್ಷೇತ್ರ ಶಿಕ್ಷಣಾಧಿಕಾರಿ ಕಚೇರಿ ವ್ಯವಸ್ಥಾಪಕ ಎಂ.ಎಂ. ಮಂಗಿ, ಎ.ಎಸ್.ಐ. ಅಣ್ಣಪ್ಪ ಬಿ. ಕೊಪ್ಪದ, ಕಾರ್ಮಿಕ ನಿರೀಕ್ಷಕ ಫಕ್ಕಿರಪ್ಪಾ ಗೋಡಿ, ತಾಲೂಕು ಪಂಚಾಯತ ಸಿಬ್ಬಂದಿ ಗಣಪತಿ ಭಾಗವತ್, ಪಟ್ಟಣ ಪಂಚಾಯತ ಆರೋಗ್ಯ ನಿರೀಕ್ಷಕ ಗುರುನಾಥ ಗಡಗಿ, ಐಸಿಡಿಎಸ್ ಇಲಾಖೆ ಸಿಬ್ಬಂದಿ, ಆರೋಗ್ಯ ಇಲಾಖೆ ಹಿರಿಯ ಆರೋಗ್ಯ ನಿರೀಕ್ಷಣಾಧಿಕಾರಿ ಮಹೇಶ ತಾಳಿಕೋಟಿ, ಯು. ಜೊಸೆಫ್, ವೀರೂಪಾಕ್ಷಪ್ಪ ಶಿರೂರ, ಎಸ್.ಟಿ.ಎಸ್. ರಾಹುಲ್ ಶೇಟ್ ಉಪಸ್ಥಿತರಿದ್ದರು.







