ಯಲ್ಲಾಪುರದ ಪಿಡಬ್ಲ್ಯುಡಿ ಉದ್ಯಾನವನದ ಬಳಿ ಗಾಂಜಾ ಸೇವಿಸಿ ಅಮಲಿನಲ್ಲಿದ್ದ ಯುವಕನ ವಿರುದ್ಧ ಯಲ್ಲಾಪುರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಅಂಕೋಲಾ ತಾಲೂಕಿನ ಹೆಗ್ಗಾರಿನ ದರ್ಶನ ರವಿ ಸಿದ್ದಿ ವಿರುದ್ಧ ಪ್ರಕರಣ ದಾಖಲಾಗಿದೆ. ಈತ ಗಾಂಜಾ ಸೇವಿಸಿ, ಅಮಲಿನಲ್ಲಿರುವುದು ವೈದ್ಯಕೀಯ ಪರೀಕ್ಷೆಯಲ್ಲಿ ಸಾಬೀತಾಗಿದೆ.
ಈತನ ಜೊತೆಯಲ್ಲಿ ಚಿಕ್ಕುಮನೆಯ ರಫೀಕ್ ಹಸನ್ ಹಾಗೂ ಆನಂದ ಸಿದ್ದಿ ಎಂಬವರೂ ಇದ್ದರು. ಅವರಿಗೂ ವೈದ್ಯಕೀಯ ಪರೀಕ್ಷೆ ನಡೆಸಲಾಗಿದ್ದು, ಅವರು ಗಾಂಜಾ ಸೇವಿಸದೇ ಇರುವುದು ಧೃಢಪಟ್ಟಿದೆ.







