ಯಲ್ಲಾಪುರ ತಾಲೂಕಿನ ಗುಳ್ಳಾಪುರದ ಬಡ ಪ್ರತಿಭಾನ್ವಿತ ಮ್ಯಾಕೆನಿಕ್ ಇಂಜಿನಿಯರಿಂಗ್ ವಿದ್ಯಾರ್ಥಿ ವಿನಾಯಕ ಮಾರುತಿ ನಾಯ್ಕ ಅವರ ಕಲಿಕೆಗೆ ಮಂಗಳೂರಿನ ಸಹ್ಯಾದ್ರಿ ಸಂಚಯದ ದಿನೇಶ್ ಹೊಳ್ಳ ಅವರು ಲ್ಯಾಪ್ ಟಾಪ್ ವಿತರಿಸಿದರು.
ಪಣಂಬೂರು ವಾಸುದೇವ್ ಐತಾಳ್, ಹರ್ಷ ಡಿಸೋಜಾ, ರಾಕೇಶ ಬೋಳಾರ ಮುಂತಾದವರ ನೆರವಿನೊಂದಿಗೆ ವನಚೇತನ ಉಸ್ತುವಾರಿಗಳಾದ ರಾಜೇಶ್ವರಿ ಸಿದ್ದಿ ಕೆಳಾಸೆ, ಅನಂತ ಸಿದ್ದಿ ನಂದೊಳ್ಳಿ ಅವರ ಸಹಕಾರದೊಂದಿಗೆ ಕಳೆದ ಆರು ವರ್ಷಗಳಿಂದ ಇಂತಹ ವಿಧಾಯಕ ಕಾರ್ಯಗಳನ್ನು ವನಚೇತನ ಮಾಡುತ್ತ ಬಂದಿದೆ.
ತಾಲೂಕಿನ ಹಿಂದುಳಿದ ಬಡ ಗ್ರಾಮೀಣ ವಿದ್ಯಾರ್ಥಿಗಳ ಕಲಿಕೆಗೆ ನೆರವು ನೀಡುತ್ತಾ ಬಂದಿದೆ. ಆಯ್ದ ಶಾಲೆಗಳಿಗೆ ಪೀಠೋಪಕರಣ, ಗ್ರೀನ್ ಬೋರ್ಡ್, ಕಂಪ್ಯೂಟರ್, ಟಿವಿ, ಕಪಾಟು, ಕ್ರೀಡಾ ಸಾಮಗ್ರಿ, ನಲಿಕಲಿ ಸಾಮಾಗ್ರಿಗಳನ್ನು,
ಪಠ್ಯಪುಸ್ತಕಗಳನ್ನು ನೀಡುತ್ತ ಬಂದಿರುವುದು ವಿಶೇಷವಾಗಿದೆ.
ಈ ಎಲ್ಲ ಕಾರ್ಯಗಳಿಗೆ ತಾವೇ ಒಂದಷ್ಟು ಖರ್ಚು ವೆಚ್ಚ ಭರಿಸುತ್ತಾರೆ. ಜತೆಗೆ ದಾನಿಗಳಿಂದ ಹಣ ಪಡೆಯದೇ, ನೇರವಾಗಿ ವಸ್ತುಗಳನ್ನೇ ದಾನವಾಗಿ ಪಡೆದು, ಅಗತ್ಯವುಳ್ಳವರಿಗೆ ನೀಡುತ್ತಾರೆ.







