ಯಲ್ಲಾಪುರ ತಾಲೂಕಿನ ಗುಂಡ್ಕಲ್ ನ ಗಣಪತಿ ಮಹಾಬಲೇಶ್ವರ ಭಟ್ಟ (ಗೇರಗದ್ದೆ) ಶನಿವಾರ ನಿಧನರಾದರು. ಅವರಿಗೆ 86 ವರ್ಷ ವಯಸ್ಸಾಗಿತ್ತು. ಅವರು ಪತ್ನಿ, ನಾಲ್ವರು ಪುತ್ರರು ಹಾಗೂ ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.
ಇವರು ಚಂದಗುಳಿಯ ಘಂಟೆ ಗಣಪತಿ ದೇವಸ್ಥಾನದ ಟ್ರಸ್ಟಿ ಆಗಿದ್ದ ಇವರು, ಜೀರ್ಣೋದ್ಧಾರದಲ್ಲಿ ಮಹತ್ವದ ಪಾತ್ರ ವಹಿಸಿದ್ದರು.
ಪ್ರಸ್ತುತ ಅತ್ಯಂತ ಅಪರೂಪವಾಗಿರುವ ಅವಿಭಕ್ತ ಕುಟುಂಬದ ಯಜಮಾನರಾಗಿದ್ದ ಗಣಪತಿ ಭಟ್ಟ ರು, ಉತ್ತಮ ಕೃಷಿಕರಾಗಿಯೂ ಜನಪ್ರಿಯರಾಗಿದ್ದರು.
ಸಾಮಾಜಿಕ, ಸಾಂಸ್ಕೃತಿಕ, ಧಾರ್ಮಿಕವಾಗಿ ಹಲವು ನೆಲೆಯಲ್ಲಿ ತೊಡಗಿಸಿಕೊಂಡಿದ್ದರು. ಸಾಮಾಜಿಕ ಕ್ಷೇತ್ರಕ್ಕೆ ಬರುವ ಯುವಕರಿಗೆ ಪ್ರೀತಿಯಿಂದ ಪ್ರೋತ್ಸಾಹ, ಮಾರ್ಗದರ್ಶನ ನೀಡುತ್ತಿದ್ದರು.







