ಯಲ್ಲಾಪುರ ತಾಲೂಕಿನ ಹುತ್ಕಂಡ ಕ್ರಾಸ್ ನಲ್ಲಿ ಬಸ್ ನಿಲುಗಡೆಗೆ ಆಗ್ರಹಿಸಿ ಗ್ರಾಮಸ್ಥರು ಪಟ್ಟಣದಲ್ಲಿ ಘಟಕ ವ್ಯವಸ್ಥಾಪಕ ಸಂತೋಷ ವೆರ್ಣೆಕರ್ ಅವರಿಗೆ ಮನವಿ ಸಲ್ಲಿಸಿದರು.
ಯಲ್ಲಾಪುರ-ಶಿರಸಿ ಮಾರ್ಗದ ಹುತ್ಕಂಡ ಕ್ರಾಸ್ ನಲ್ಲಿ ಬಸ್ ನಿಲುಗಡೆ ಮಾಡದೇ ಇರುವುದರಿಂದ ವಿದ್ಯಾರ್ಥಿಗಳಿಗೆ ತೊಂದರೆಯಾಗುತ್ತಿದೆ. ಬೆಳಿಗ್ಗೆ ಸಮಯಕ್ಮೆ ಸರಿಯಾಗಿ ಶಾಲೆ-ಕಾಲೇಜು ತಲುಪಲು ಸಾಧ್ಯವಾಗುತ್ತಿಲ್ಲ.
ಈ ಸಮಸ್ಯೆ ಬಗ್ಗೆ ಹಲವು ಬಾರಿ ಘಟಕದ ಅಧಿಕಾರಿಗಳ ಗಮನಕ್ಕೆ ತಂದರೂ ಯಾವುದೇ ಸ್ಪಂದನೆ ದೊರೆತಿಲ್ಲ.
ಬೆಳಿಗ್ಗೆ 8.30 ರಿಂದ 9.15 ಕ್ಕೆ ಹಾಗೂ ಸಂಜೆಯ ವೇಳೆಗೆ 4.45 ರಿಂದ 5.30 ರ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಬೇಕು. ಇರುವ ಬಸ್ ಗೆ ಹುತ್ಕಂಡ ಕ್ರಾಸ್ ನಲ್ಲಿ ನಿಲುಗಡೆ ನೀಡಬೇಕೆಂದು ಆಗ್ರಹಿಸಿದರು.
ಅಕ್ಟೋಬರ್ 27 ರ ಒಳಗೆ ಈ ವ್ಯವಸ್ಥೆ ಆಗದಿದ್ದಲ್ಲಿ ಹುತ್ಕಂಡ ಕ್ರಾಸ್ ಬಳಿ ಬಸ್ ತಡೆದು ಪ್ರತಿಭಟನೆ ನಡೆಸಲಾಗುವುದೆಂದು ಎಚ್ಚರಿಸಿದರು.
ಚಂದಗುಳಿ ಗ್ರಾ.ಪಂ ಸದಸ್ಯ ಆರ್.ಎಸ್ ಭಟ್ಟ, ಗ್ರಾಮಸ್ಥರಾದ ನಾಗರಾಜ ರಜಪೂತ, ಬಸ್ತ್ಯಾಂವ ಫರ್ನಾಂಡೀಸ್, ನಾರಾಯಣ ಗೌಡ, ಶಶಿಕಾಂತ ಬಾಂದೇಕರ್, ನಾಗರತ್ನಾ ದೇವಾಡಿಗ, ಹೇಮಾವತಿ ಜಾಧವ, ಚಿತ್ರಾ ಜಾಧವ, ಸಿಂಚನಾ ಗೌಡ, ಯಶೋದಾ ಗೌಡ, ಅಂಜಲಿ ಫರ್ನಾಂಡೀಸ್ ಇತರರಿದ್ದರು.







