ಕರಾವಳಿಯಲ್ಲಿ ಮುಂಗಾರು ಮಳೆ ಜೋರಾಗಿದೆ. ಹೊನ್ನಾವರ – ಕುಮಟಾ ಭಾಗದ ಹಲವು ಭಾಗಗಳು ಜಲಾವೃತಗೊಂಡಿದ್ದು, ಜನರಿಗೆ ಕಾಳಜಿ ಕೇಂದ್ರ ಅನಿವಾರ್ಯವಾಗಿದೆ.
ಆರು ದಿನದಿಂದ ಎಡಬಿಡದೇ ಸುರಿಯುತ್ತಿರುವ ಮಳೆಯಿಂದ ಹಳ್ಳಗಳು ತುಂಬಿ ಹರಿಯುತ್ತಿದೆ. ತಗ್ಗುಪ್ರದೇಶದ ಮನೆಗಳಿಗೆ ನೀರು ನುಗ್ಗುತ್ತಿದ್ದು, ನದಿ ತೀರದ ತೋಟಗಳು ಜವಳಿಗೆ ನಲುಗಿದೆ. ಐಆರ್ಬಿ ಕಂಪನಿಯ ಅವೈಜ್ಞಾನಿಕ ರಸ್ತೆ ಕಾಮಗಾರಿಯಿಂದ ಗುಡ್ಡ ಕುಸಿತ ಸಾಮಾನ್ಯವಾಗಿದೆ. ಇದರ ಜೊತೆ ಹೆದ್ದಾರಿಯುದ್ದಕ್ಕೂ ನೀರು ನಿಂತು ವಾಹನ ಸವಾರರು ಪರದಾಡುತ್ತಿದ್ದಾರೆ. ವಿದ್ಯುತ್ ತಂತಿಗಳ ಮರ ಬೀಳುವುದು, ವಿದ್ಯುತ್ ಕಡಿತ ಸಾಮಾನ್ಯವಾಗಿದೆ.
ಹೊನ್ನಾವರದ ಗುಂಡಬಾಳ, ಭಾಸ್ಕೇರಿ, ಬಡಗಣೆ ಹೊಳೆಯ ನದಿ ತೀರ ಪ್ರದೇಶದ ಹಲವು ಮನೆಗಳು ಜಲಾವೃತಗೊಂಡಿದ್ದು, ಅನೇಕರು ಸಂಬAಧಿಕರ ಮನೆಗೆ ಹೋಗಿದ್ದಾರೆ. ಇನ್ನೂ ಕೆಲವರು ಕಾಳಜಿ ಕೇಂದ್ರದಲ್ಲಿದ್ದಾರೆ. ಗುಂಡಿಬೈಲ್, ಹರಡಸೆ, ಹಾಡಗೇರಿ, ಹಡಿನಬಾಳ, ಮುಟ್ಟಾ, ಕಡಗೇರಿ, ಖರ್ವಾ ಭಾಸ್ಕೇರಿ, ಗಜನಿಕೇರಿ ಊರಿನ ಸುತ್ತಲು ನೀರು ನಿಂತಿದ್ದು, ಪ್ರವೇಶ ಅಸಾಧ್ಯ ಎಂಬAತಾಗಿದೆ. ಅಡಿಕೆ ಮರದ ಬುಡದಲ್ಲಿ ನೀರು ನಿಂತಿದ್ದರಿAದ ಕೊಳೆರೋಗ ಕಾಡುತ್ತಿದೆ.





Discussion about this post