ಕುಮಟಾ:: ಜುಲೈ 11 ಕುಮಟಾದ ಟೌನ್ಹಾಲಿನಲ್ಲಿ `ಜನಸ್ಪಂದನಾ ಸಭೆ’ ನಡೆಸಲು ಉದ್ದೇಶಿಸಲಾಗಿದೆ. ಆದರೆ, ಇಲ್ಲಿ ಫ್ಯಾನ್ ತಿರುಗಲ್ಲ. ಶೌಚಾಲಯ ಸರಿಯಿಲ್ಲ. ಮೈಕ್ ಹಾಕಿದರೂ ಕೊನೆಯವರೆಗೆ ಧ್ವನಿ ಕೇಳಲ್ಲ. ಈ ಹಿಂದೆ ನಡೆದ ಅನೇಕ ಸಭೆಗಳಲ್ಲಿ ಹೀಗೆ ಆದರೂ, ಅಧಿಕಾರಿಗಳು ಮಾತ್ರ ಉತ್ತಮ ಗಾಳಿ-ಬೆಳಕಿನ ವ್ಯವಸ್ಥೆ ಇರುವ ಕಡೆ ಸಭೆ ಆಯೋಜಿಸುತ್ತಿಲ್ಲ ಎಂಬ ದೂರು ಕೇಳಿಬಂದಿದೆ.
ಉತ್ತರ ಕನ್ನಡ ಜಿಲ್ಲೆಯ ಉಸ್ತುವಾರಿ ಸಚಿವ ಮಂಕಾಳ ವೈದ್ಯ ಈ ಸಭೆಯಲ್ಲಿ ಭಾಗವಹಿಸಲಿದ್ದಾರೆ. ಆದರೆ, ಅವರ ಬಳಿ ಸಮಸ್ಯೆ ಹೇಳಿಕೊಳ್ಳಲು ಆಗಮಿಸುವವರಿಗೆ ಸಮಸ್ಯೆ ಆಗುವ ಸಾಧ್ಯತೆ ಜಾಸ್ತಿಯಿದೆ. ಕೆಲ ದಿನಗಳ ಹಿಂದೆ ಕುಮಟಾ ಶಾಸಕ ದಿನಕರ ಶೆಟ್ಟಿ ನೇತೃತ್ವದಲ್ಲಿ ತಾಲೂಕಾ ಮಟ್ಟದ ಜನಸ್ಪಂದನ ಸಭೆ ಇಲ್ಲಿ ನಡೆದಿತ್ತು. ಆಗ ಅನೇಕರು ಅವ್ಯವಸ್ಥೆಯ ಬಗ್ಗೆ ದೂರಿದ್ದರು. ಆದರೂ, ಇಲ್ಲಿಯೇ ಸಭೆ ನಡೆಸಲು ಅಧಿಕಾರಿಗಳು ಮುಂದಾಗಿದ್ದಾರೆ.
ಸರ್ಕಾರಿ ಅಧೀನದಲ್ಲಿರುವ ಕಟ್ಟಡ ಇದಾಗಿದ್ದು, ಎಲ್ಲವೂ ಸರಿಯಾಗಿದ್ದರೆ ಯಾರೂ ತಕರಾರು ಮಾಡುತ್ತಿರಲಿಲ್ಲ. ಆದರೆ, ಸಭೆ ನಡೆಯುವ ಸ್ಥಳವನ್ನು ಸ್ವಚ್ಛವಾಗಿರಿಸಿಕೊಳ್ಳಲು ಸಹ ಆಸಕ್ತಿ ತೋರಿದವರಿಲ್ಲ. ಆಗಮಿಸುವ ಜನಪ್ರತಿನಿಧಿಗಳು ಕಟ್ಟಡದ ಸುತ್ತ ಒಮ್ಮೆ ಸುತ್ತಿದರೆ ಅಲ್ಲಿನ ಅಶುಚಿತ್ವ ಅರಿವಿಗೆ ಬರುತ್ತದೆ ಎಂಬುದು ಸ್ಥಳೀಯರ ಮಾತು.





Discussion about this post