ಅಂಕೋಲಾದ ಶಿರೂರು ಭೂ ಕುಸಿತದಲ್ಲಿ ಕುಮಟಾದ ಜಗನ್ನಾಥ ನಾಯ್ಕ (61) ಎಂಬಾತರು ಸಿಲುಕಿದ್ದು, ಈವರೆಗೂ ಅವರ ಸುಳಿವು ಸಿಕ್ಕಿಲ್ಲ. ಅವರು ಬದುಕಿರುವ ಬಗ್ಗೆಯೂ ಮಾಹಿತಿ ಇಲ್ಲ. ಸಾವನಪ್ಪಿದ ಬಗ್ಗೆಯೂ ಖಚಿತ ಖಚಿತವಾಗಿಲ್ಲ.
ಕುಮಟಾ ತಾಲೂಕಿನ ಬಾಡ-ಹುಬ್ಬಣಗೇರಿಯ `ಬಾಬ್ಲುಮನೆ’ಯ ಜಗನ್ನಾಥ ನಾಯ್ಕ ಶಿರೂರಿನಲ್ಲಿ ಚಹಾ ಅಂಗಡಿ ನಡೆಸುತ್ತಿದ್ದ ಲಕ್ಷ್ಮಣ ನಾಯ್ಕರ ಭಾವ. ಲಕ್ಷ್ಮಣ ನಾಯ್ಕರ ಅಕ್ಕನನ್ನು ವರಿಸಿದ ಜಗನ್ನಾಥ್ ಶಿರೂರಿನಲ್ಲಿಯೇ ಬರೆ ಮನೆ ನಿರ್ಮಿಸಿಕೊಂಡಿದ್ದರು. ಭೂ ಕುಸಿತದ ದಿನ ಬೆಳಗ್ಗೆ ಬಾವನನ್ನು ಮಾತನಾಡಿಸಿಕೊಂಡು ಬರಲು ಚಹಾದ ಅಂಗಡಿಗೆ ಹೋಗಿದ್ದರು. ನಂತರ ಅವರು ಎಲ್ಲಿ ಹೋದರು? ಎಂಬುದು ಯಾರಿಗೂ ಗೊತ್ತಾಗಿಲ್ಲ.
`ಬಾವನಿಗೆ ಜ್ವರ ಬಂದಿದೆ. ಸ್ವಲ್ಪ ಸಹಾಯ ಮಾಡಿ ಬರುತ್ತೇನೆ’ ಎಂದು ಹೇಳಿ ಹೋಗಿದ್ದ ಜಗನ್ನಾಥ್ ಮನೆಗೆ ಮರಳಿಲ್ಲ. ಇದರಿಂದ ಅವರ ಪತ್ನಿ ಹಾಗೂ ಮೂರು ಹೆಣ್ಣು ಮಕ್ಕಳು ಆತಂಕದಲ್ಲಿದ್ದಾರೆ. ಆ ಕುಟುಂಬದವರು ಜಗನ್ನಾಥರ ಫೋಟೋ ಹಿಡಿದು ಅವರಿವರ ಬಳಿ ವಿಚಾರಿಸುತ್ತಿದ್ದಾರೆ.





Discussion about this post