`ಗಂಜಿ ಮಾಡಿ ಇಡುವೆ, ಬೇಗ ಮನೆಗೆ ಬಾ’ ಎಂದು ಸಣ್ಣು ಗೌಡ ಕೂಗಿದ್ದರು. ಇದಕ್ಕೆ ತಲೆಯಾಡಿಸಿದ ಆಕೆಯ ಮಗ ಮಂಜು ಗೌಡ 10 ನಿಮಿಷ ಬಿಟ್ಟು ಮನೆ ಕಡೆ ಹೋದಾಗ ಅಲ್ಲಿ ಜೋಪಡಿಯೂ ಇರಲಿಲ್ಲ. ಆತನ ತಾಯಿ ಸಹ ಕಾಣಲಿಲ್ಲ.
ಶಿರೂರಿನ ಗುಡ್ಡ ಕುಸಿತದಲ್ಲಿ ಉಳವರೆಯ ಮಂಜು ಗೌಡರ ಜೋಪಡಿಯ ಜೊತೆ ಆತನ ತಾಯಿ ಸಣ್ಣು ಗೌಡ ಸಹ ಕಣ್ಮರೆಯಾಗಿದ್ದಾರೆ. ತಾಯಿ ಉಟ್ಟಿದ್ದ ಸೀರೆ ಮಣ್ಣಿನಡಿಯ ನೀರಿನಲ್ಲಿ ಸಿಕ್ಕಿದ್ದು, ಅದನ್ನು ಹಿಡಿದು ಮಂಜು ಗೌಡ ಬಿಕ್ಕಿ ಬಿಕ್ಕಿ ಅಳುತ್ತಿದ್ದಾರೆ.
ಉಳವರೆಯ ಮಂಜುನಾಥ ಗೌಡ ಹಾಗೂ ಸಣ್ಣು ಗೌಡ ಬಡವರಾಗಿದ್ದರೂ ಪ್ರೀತಿ ವಿಶ್ವಾಸಕ್ಕೆ ಕೊರತೆಯಿರಲಿಲ್ಲ. ಈ ತಾಯಿ ಮಗ ಪುಟ್ಟದೊಂದು ಗುಡಿಸಲು ನಿರ್ಮಿಸಿಕೊಂಡು ಕೂಲಿ ಕೆಲಸ ಮಾಡಿ ಬದುಕು ಕಟ್ಟಿಕೊಂಡಿದ್ದರು. ಆದರೆ, ಈ ಗುಡ್ಡ ಕುಸಿತ ಮಂಜುನಾಥ ಗೌಡರ ಬದುಕನ್ನು ಕಿತ್ತುಕೊಂಡಿದೆ. ಮಂಜು ಗೌಡರ ಜೋಪಡಿ ಮೇಲೆ ಪೂರ್ತಿಯಾಗಿ ಗುಡ್ಡ ಬಿದ್ದಿದ್ದು, ಅದರ ಮಣ್ಣಿನ ಜೊತೆ ತಾಯಿ ಉಟ್ಟಿದ್ದ ಸೀರೆಯೂ ಗಂಗಾವಳಿ ಪಾಲಾಗಿದೆ.
ದುರಂತ ನಡೆದು ಎರಡು ದಿನ ಕಳೆದರೂ ಮಂಜು ತಾಯಿಯ ಸುಳಿವಿಲ್ಲ. 30 ಅಡಿ ಅಂತರದಲ್ಲಿ ಮನೆಯ ಚಾವಣಿ, ಗೋಡೆ ಕಾಣಿಸಿದೆ. `ಮಗನ ಮದುವೆ ಮಾಡಬೇಕು. ಉತ್ತಮ ಮನೆ ಕಟ್ಟಬೇಕು’ ಎಂದು ಸಣ್ಣು ಗೌಡ ಯಾವಾಗಲೂ ಹೇಳುತ್ತಿದ್ದರು. ಅವರ ಕನಸು ಈಡೇರುವ ಮುನ್ನವೇ ಈಗಿರುವ ಮನೆ ಜೊತೆ ಸಣ್ಣು ಗೌಡ ಸಹ ಮಣ್ಣಾಗಿದ್ದಾರೆ.





Discussion about this post