6
  • Latest

ನಾಲ್ಕು ದಶಕದ ಹಿಂದಿನ ಪ್ರಕರಣಕ್ಕೆ ಮುಕ್ತಿ: ಕೊಪ್ಪರಿಗೆ ಕಳ್ಳನನ್ನು ಪತ್ತೆ ಮಾಡಿದ ಪೊಲೀಸರು!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ದೇಶ - ವಿದೇಶ

ನಾಲ್ಕು ದಶಕದ ಹಿಂದಿನ ಪ್ರಕರಣಕ್ಕೆ ಮುಕ್ತಿ: ಕೊಪ್ಪರಿಗೆ ಕಳ್ಳನನ್ನು ಪತ್ತೆ ಮಾಡಿದ ಪೊಲೀಸರು!

AchyutKumar by AchyutKumar
in ದೇಶ - ವಿದೇಶ

ನಾಲ್ಕು ದಶಕಗಳ ಹಿಂದೆ ನಡೆದ ಕೊಪ್ಪರಿಗೆ ಕಳ್ಳತನ ಪ್ರಕರಣದಲ್ಲಿ ದೂರುದಾರ-ಆರೋಪಿ ಇಬ್ಬರೂ ಸಾವನಪ್ಪಿದರೂ ಆ ಪ್ರಕರಣ ಮಾತ್ರ ಸಾವನಪ್ಪಿರಲಿಲ್ಲ. ಆಗ ಇನ್ನೂ ಹುಟ್ಟಿರದ ಪೊಲೀಸರು, ಇದೀಗ ಪ್ರಕರಣದ ಬೆನ್ನುಬಿದ್ದು ನೆರೆರಾಜ್ಯಕ್ಕೆ ತೆರಳಿ `ಕೊಪ್ಪರಿಗೆ ಕಳ್ಳತನ’ ಪ್ರಕರಣಕ್ಕೆ ಇತಿಶ್ರೀ ಹಾಡಿದ್ದಾರೆ.

ADVERTISEMENT

ನಾಲ್ಕು ದಶಕಗಳ ಹಿಂದೆ ಯಲ್ಲಾಪುರದ ತಟಗಾರದ ಬೋಳಪಾಲದಲ್ಲಿ ಕಬ್ಬಿಣದ ಗಾಣ ಹಾಗೂ ಕೊಪ್ಪರಿಗೆ ಕಳ್ಳತನವಾಗಿತ್ತು. ಈ ಬಗ್ಗೆ ನಾರಾಯಣ ವೆಂಕಟರಮಣ ಭಟ್ಟ ಎಂಬಾತರು 1982ರ ಏಪ್ರಿಲ್ 1ರಂದು ಕಬ್ಬಿಣದ ಕೊಪ್ಪರಿಗೆ ಕಳ್ಳತನವಾದ ಬಗ್ಗೆ ಪೊಲೀಸ್ ದೂರು ನೀಡಿದ್ದರು. ಆಗ ಪ್ರಕರಣದ ತನಿಖೆ ನಡೆಸಿದ ಪೊಲೀಸರು ಗಾಣದಸಮೇತ ಕಳ್ಳನೊಬ್ಬನನ್ನು ಬಂಧಿಸಿದ್ದರು. ಆದರೆ, ಆತನಿಗೆ ಸಹಾಯ ಮಾಡಿದ್ದ ಇನ್ನೊಬ್ಬ ಪರಾರಿಯಾಗಿದ್ದು, ದೂರುದಾರ ಹಾಗೂ ಆರೋಪಿ ಇಬ್ಬರೂ ಸಾವನಪ್ಪಿದರೂ ಆ ಪ್ರಕರಣ ಸಾವು ಕಂಡಿರಲಿಲ್ಲ!
ಈ ಪ್ರಕರಣ ಅನೇಕ ವರ್ಷಗಳಿಂದ ಬಾಕಿಯಿರುವ ಬಗ್ಗೆ ಕಡತದಲ್ಲಿ ಕಾಣಿಸುತ್ತಿದ್ದು ಈಗಿನ ಪೊಲೀಸರು ಅದರ ಬೆನ್ನು ಬಿದ್ದಿದ್ದರು. ಆಗ ಅವರ ಪೊಲೀಸರ ಬಳಿ ಆತನ ಬಗ್ಗೆ ಯಾವುದೇ ಸುಳಿವು ಸಹ ಇರಲಿಲ್ಲ. ಅನೇಕ ಹಿರಿಯರನ್ನು ಮಾತನಾಡಿಸಿದಾಗ `ಅಂತೋನಿ’ ಎಂಬ ಹೆಸರು ಕೇಳಿಸಿತು. ಅಲ್ಲಲ್ಲಿ ತಡಕಾಡಿದಾಗ ಆತನ ಫೋಟೋ ಒಂದು ಸಿಕ್ಕಿತು. ಅಂತೋನಿಯ ಸಂಬAಧಿಕರನ್ನು ಹುಡುಕಾಡಿದಾಗ ಅವರೆಲ್ಲ ಗೋವಾದಲ್ಲಿರುವ ಬಗ್ಗೆ ಗೊತ್ತಾಯಿತು. ಅಂತೋನಿ ಸಹ ಅಲ್ಲೇ ಇರುವುದಾಗಿ ಕೆಲವರು ಹೇಳಿದರು. ಅಂತೋನಿಯನ್ನು ಹುಡುಕಿ ಗೋವಾಗೆ ಹೊರಟ ಪೊಲೀಸರಿಗೆ ಆತ ಸಹ 2 ವರ್ಷದ ಹಿಂದೆ ಅಪಘಾತದಲ್ಲಿ ಸಾವನಪ್ಪಿರುವ ಬಗ್ಗೆ ತಿಳಿಯಿತು.
ಆತನ ಮರಣಪತ್ರದೊಂದಿಗೆ ಯಲ್ಲಾಪುರಕ್ಕೆ ಬಂದ ಪೊಲೀಸರು ಕೊನೆಗೂ ಪ್ರಕರಣಕ್ಕೆ ಇತಿಶ್ರೀ ಹಾಡಿದರು. ಪ್ರಕರಣದ ಸಲುವಾಗಿ ಗೋವಾಗೆ ತೆರಳಿದ ಎಲ್ಲಾ ಪೊಲೀಸರು 40 ವರ್ಷದ ಒಳಗಿನವರೇ ಆಗಿದ್ದು, ಈ ಕಳ್ಳತನ ನಡೆದಾಗ ಅವರೆಲ್ಲರೂ ಹುಟ್ಟಿರಲೇ ಇಲ್ಲ!

Advertisement. Scroll to continue reading.
Advertisement. Scroll to continue reading.
Previous Post

ಗುಡ್ಡದ ಮೇಲಿನ ಕಾಲೇಜಿಗೂ ಜಲ ಕಂಟಕ!

Next Post

ಸಡಗೇರಿ ಇದೀಗ ಸುರಕ್ಷಿತ!

Next Post

ಸಡಗೇರಿ ಇದೀಗ ಸುರಕ್ಷಿತ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ