ಶಿರೂರು ಗುಡ್ಡ ಕುಸಿತ ಪ್ರಕರಣ ನಡೆದ ನಂತರ `ಹೆದ್ದಾರಿಯಲ್ಲಿ ಬಿದ್ದ ಮಣ್ಣಿನಲ್ಲಿ ಲಾರಿ ಹುದುಗಿದೆ’ ಎಂದು ಅಂದಾಜಿಸಲಾಗಿತ್ತು. ಆದರೆ, `ಅಲ್ಲಿ ಲಾರಿ ಇಲ್ಲ’ ಎಂದು ಕಂದಾಯ ಸಚಿವ ಕೃಷ್ಣ ಬೈರೇಗೌಡ ಮೊದಲು ಅನುಮಾನ ವ್ಯಕ್ತಪಡಿಸಿದ್ದರು. ಅದಾದ ನಂತರ ನೌಕಾನೆಲೆ ಅಧಿಕಾರಿಗಳು ಸಹ ಲಾರಿ `ಹೆದ್ದಾರಿ ಮೇಲಿನ ಮಣ್ಣಿನಲ್ಲಿ ಇಲ್ಲ’ ಎಂದು ಖಚಿತಪಡಿಸಿದ್ದರು.
ಈ ಹಿನ್ನಲೆ ಬುಧವಾರದಿಂದ ಪೊಕ್ಲೆನ್ ಯಂತ್ರ ತರಿಸಿ ನದಿ ಆಳದಲ್ಲಿನ ಮಣ್ಣು ಬರಗುವ ಕೆಲಸ ನಡೆಸಲಾಗಿದ್ದು, ಮಣ್ಣನ್ನು ತೆಗೆಯುವಾಗ ಕಬ್ಬಿಣದ ಲೋಹ ಯಂತ್ರಕ್ಕೆ ತಗುಲಿದೆ. ಪ್ಲೊಕೆನ್ ಯಂತ್ರದ ಆಪರೇಟರ್ ಈ ಬಗ್ಗೆ ತಕ್ಷಣ ಅಲ್ಲಿದ್ದ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದಾರೆ. ನಂತರ ಆ ಭಾಗದಲ್ಲಿ ಮುಳುಗು ತಜ್ಞರು ಶೋಧ ನಡೆಸಿದಾಗ ಅಲ್ಲಿ ಲಾರಿ ಇರುವ ಕುರುಹು ಸಿಕ್ಕಿದೆ. ಪ್ರಸ್ತುತ ಜಿಲ್ಲಾಧಿಕಾರಿ ಲಕ್ಷ್ಮೀಪ್ರಿಯಾ, ಶಾಸಕ ಸತೀಶ್ ಸೈಲ್ ಲಾರಿ ಇರುವ ಸ್ಥಳಕ್ಕೆ ಬೋಟ್ ಮೂಲಕ ತೆರಳಿದ್ದಾರೆ.
ಲಾರಿ ಹುಡುಕುವ ಕಾರ್ಯಾಚರಣೆ ಹೇಗಿತ್ತು? ವಿಡಿಯೋ ಇಲ್ಲಿ ನೋಡಿ..





Discussion about this post