ಜೋಯಿಡಾ: ಚಿಕ್ಕಬಳ್ಳಾಪುರದ ಶ್ರೀ ಸತ್ಯ ಸಾಯಿ ಅನ್ನಪೂರ್ಣ ಟ್ರಸ್ಟ್ ನೀಡುವ `ರಾಜ್ಯಮಟ್ಟದ ಹಸಿರು ನೈರ್ಮಲ್ಯ ಶಾಲಾ ಅಭ್ಯುದಯ ಪ್ರಶಸ್ತಿ’ಗೆ ಅಣಶಿಯ ಸರ್ಕಾರಿ ಹಿರಿಯ ಪ್ರಾಥಮಿಕ ಕನ್ನಡ ಶಾಲೆ ಆಯ್ಕೆಯಾಗಿದೆ.
ಇಲ್ಲಿನ ಪರಿಸರ ಸ್ನೇಹಿ ಚಟುವಟಿಕೆ, ಸ್ವಚ್ಛತೆ, ಕಲಿಕಾ ಚಟುವಟಿಕೆ, ಶಿಸ್ತು ಗಮನಿಸಿ ಈ ಪ್ರಶಸ್ತಿ ಅರೆಸಿ ಬಂದಿದೆ. ಶಾಲಾ ಮುಖ್ಯ ಶಿಕ್ಷಕಿಯಾದ ಅಕ್ಷತಾ ಕೃಷ್ಣಮೂರ್ತಿ `ಶಾಲೆಯ ಮಕ್ಕಳ ಹಾಗೂ ಉಳಿದ ಶಿಕ್ಷಕರ ಸಂಪೂರ್ಣ ತೊಡಗುವಿಕೆಯಿಂದ ಪ್ರಶಸ್ತಿ ಪಡೆಯಲು ಸಾಧ್ಯವಾಯಿತು’ ಎಂದಿದ್ದಾರೆ..





Discussion about this post