ಉತ್ತರ ಕನ್ನಡ ಜಿಲ್ಲೆಯ 300ಕ್ಕೂ ಅಧಿಕ ಜನ ಭಾಗವಹಿಸಿರುವ ಬಿಜೆಪಿ ಪಾದಯಾತ್ರೆ ಇದೀಗ ಬೆಂಗಳೂರಿನ ಕುಂಬ್ಳಗೋಡ ತಲುಪಿದೆ.
ರಾಜ್ಯ ಸರ್ಕಾರದ ವಿರುದ್ಧ ಬಿಜೆಪಿಗರು ಆಯೋಜಿಸಿದ `ಮೈಸೂರು ಚಲೋ’ ಪಾದಯಾತ್ರೆ ಶನಿವಾರ ಬೆಂಗಳೂರಿನ ಕೆಂಗೇರಿಯಿoದ ಶುರುವಾಯಿತು. ರಾತ್ರಿ 8 ಗಂಟೆ ವೇಳೆಗೆ ಈ ಪಾದಯಾತ್ರೆ ಬಿಡದಿ ತಲುಪಲಿದೆ. ಪಾದಯಾತ್ರೆಯಲ್ಲಿ ಭಾಗವಹಿಸಿದವರು ಶನಿವಾರ 16ಕಿಮೀ ನಡೆಯಲಿದ್ದಾರೆ. ಬಿಜೆಪಿ ಹಾಗೂ ಜೆಡಿಎಸ್ ಒಟ್ಟಿಗೆ ಈ ಪಾದಯಾತ್ರೆ ನಡೆಸಿದ್ದು, 50 ಸಾವಿರಕ್ಕೂ ಅಧಿಕ ಜನ ಭಾಗಿಯಾಗಿದ್ದಾರೆ.
ಕಾಂಗ್ರೆಸ್ ಸರ್ಕಾರದ ಹಗರಣಗಳ ವಿರುದ್ಧ ಪ್ರತಿಭಟನಾಕಾರರು ಜನರಲ್ಲಿ ಜಾಗೃತಿ ಮೂಡಿಸುತ್ತಿದ್ದಾರೆ. ಹಾಡು ನೃತ್ಯಗಳ ಮೂಲಕ ರಸ್ತೆಯೂದ್ದಕ್ಕೂ ನಾಯಕರು ಹೆಜ್ಜೆ ಹಾಕಿದ್ದಾರೆ. ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ, ವಿಧಾನ ಪರಿಷತ್ ಸದಸ್ಯ ಗಣಪತಿ ಉಳ್ವೇಕರ್, ಶಾಸಕ ದಿನಕರ ಶೆಟ್ಟಿ, ಮಾಜಿ ಶಾಸಕಿ ರೂಪಾಲಿ ನಾಯ್ಕ, ಪ್ರಮುಖರಾದ ಸೂರಜ ನಾಯ್ಕ ಸೋನಿ ಮೊದಲಾದವರು ಈ ಪಾದಯಾತ್ರೆಯಲ್ಲಿ ಹೆಜ್ಜೆ ಹಾಕಿದ್ದಾರೆ. ಶನಿವಾರ ರಾತ್ರಿ ಬಿಡದಿಯಲ್ಲಿ ವಸತಿ ಹೂಡಿ ಭಾನುವಾರ ಮೈಸೂರಿನ ಕಡೆ ಈ ಪಾದಯಾತ್ರೆ ಸಂಚರಿಸಲಿದೆ.
ಪಾದಯಾತ್ರೆಯ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..





Discussion about this post