ಕಾರವಾರ: ಸದಾಶಿವಗಡ ಸ್ವಾಮಿ ವಿವೇಕಾನಂದ ಮಠದಲ್ಲಿ ನೆರೆದಿದ್ದ ಮಕ್ಕಳು ತಮ್ಮ ಪಾಲಕರ ಪಾದ ಪೂಜೆ ಮಾಡಿದರು. ಪಾಲಕರು ಅವರ ಪಾಲಕರಿಗೆ ನಮಿಸಿದರು.
ಸನಾತನ ಸ್ವರಾಜ ಸಂಘದಿoದ ಗುರುಪೂರ್ಣಿಮೆ ಅಂಗವಾಗಿ ತಂದೆ-ತಾಯಿಯನ್ನು ಮಕ್ಕಳು ಪೂಜಿಸುವ ಕಾರ್ಯಕ್ರಮ ಆಯೋಜಿಸಲಾಗಿದ್ದು, ಭಾವನಾತ್ಮಕ ಕ್ಷಣಗಳಿಗೆ ಈ ವೇದಿಕೆ ಸಾಕ್ಷಿಯಾಯಿತು. ನೆರೆದಿದ್ದವರು ತಂದೆ ತಾಯಿಯನ್ನು ಆಸನದಲ್ಲಿ ಕುಳಿಸಿ ಅವರ ಪಾದಕ್ಕೆ ನೀರು ಹಾಕಿ ಗಂಧ ಕುಂಕುಮ ಹಚ್ಚಿ, ಹೂವನ್ನು ಅರ್ಪಿಸಿ ಆರತಿ ಬೆಳಗಿದರು.





Discussion about this post