ಜೊಯಿಡಾ: ಧಾರಾಕಾರ ಮಳೆಯ ನಡುವೆಯೂ ರಾಮನಗರದಲ್ಲಿ ಟಾಕ್ಟರ್ ಬಳಸಿ ಅಕ್ರಮ ಮರಳು ಸಾಗಾಟ ಮುಂದುವರೆದಿದೆ. ಮರಳು ಸಾಗಾಟಗಾರರು ಕುಡಿಯುವ ನೀರಿನ ಪೈಪುಗಳನ್ನು ಧ್ವಂಸ ಮಾಡಿದ್ದು, ಆ ಭಾಗದ ಜನರಿಗೆ ಶುದ್ಧ ಕುಡಿಯುವ ನೀರು ಸಿಗುತ್ತಿಲ್ಲ.
ಪ್ರತಿ ದಿನ ರಾತ್ರಿ ವೇಳೆ ಇಲ್ಲಿ ಉಸುಕು ಸಾಗಾಟ ನಡೆಯುತ್ತಿದೆ. ಹಳ್ಳ-ಕೊಳ್ಳದಲ್ಲಿ ಸಂಗ್ರಹವಾದ ಉಸುಕನ್ನು ಕೆಲವರು ದಾಸ್ತಾನು ಮಾಡಿಕೊಳ್ಳುತ್ತಿದ್ದು, ಮಳೆ ಮುಗಿದ ನಂತರ ಕಾಳಸಂತೆಯಲ್ಲಿ ಮಾರುವ ಯೋಜನೆಯಲ್ಲಿದ್ದಾರೆ. ವಡ್ರಗಲ್ಲಿಯಿಂದ ಅಡಾಳಿಯವರೆಗೆ ಉಸುಕ ರಾಶಿ ಸಂಗ್ರಹವಾಗಿದೆ.
ಈ ಭಾಗದ ಟಾಕ್ಟರ್ ಓಡಿಸಿ ರಸ್ತೆಯನ್ನು ರಾಡಿ ಮಾಡುತ್ತಿರುವುದರಿಂದ ಇತರೆ ವಾಹನ ಸಂಚಾರಕ್ಕೆ ಸಮಸ್ಯೆಯಾಗಿದೆ. ಜೊತೆಗೆ ಈ ವೇಳೆ ರಸ್ತೆ ಅಂಚಿನಲ್ಲಿ ಹಾದುಹೋಗಿದ್ದ ಕುಡಿಯುವ ನೀರಿನ ಪೈಪುಗಳನ್ನು ಸಹ ಟಾಕ್ಟರ್ ಓಡೆದಿದೆ. ಈ ಬಗ್ಗೆ ಸ್ಥಳೀಯರು ಗ್ರಾಮ ಪಂಚಾಯತಗೆ ದೂರು ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ.
ಅಕ್ರಮ ಮರಳು ದಾಸ್ತಾನು ಹಾಗೂ ಕುಡಿಯುವ ನೀರಿನ ಪೈಪ್ ಒಡೆದ ದೃಶ್ಯಾವಳಿಗಳನ್ನು ಇಲ್ಲಿ ನೋಡಿ..





Discussion about this post