6
  • Latest

ಮಹಿಳಾ ರಾಜಕಾರಣ: ಬಿಜೆಪಿ – ಕಾಂಗ್ರೆಸ್ ನಡುವೆ `ಜಡೆ’ ಜಗಳ!

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜಕೀಯ

ಮಹಿಳಾ ರಾಜಕಾರಣ: ಬಿಜೆಪಿ – ಕಾಂಗ್ರೆಸ್ ನಡುವೆ `ಜಡೆ’ ಜಗಳ!

ನಾನಾ-ನೀನಾ ಯಾರು ಭಲ? ನೋಡಿ ಬಿಡೋಣ ಎನ್ನುತ್ತಿರುವ ನಾರಿಶಕ್ತಿ

AchyutKumar by AchyutKumar
in ರಾಜಕೀಯ

ಯಲ್ಲಾಪುರ: ಬಿಜೆಪಿ ನಡೆಸುತ್ತಿರುವ ಪಾದಯಾತ್ರೆಯನ್ನು ಮಹಿಳಾ ಕಾಂಗ್ರೆಸ್ ಟೀಕಿಸಿದ್ದು, ಇದೀಗ ಬಿಜೆಪಿ ಮಹಿಳಾ ಮೋರ್ಚಾ ತಿರುಗೇಟು ನೀಡಿದೆ. ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಶುರುವಾದ ಈ `ಜಡೆ ಜಗಳ’ ಎರಡೂ ಪಕ್ಷದ `ನಾರಿಶಕ್ತಿ’ ಪ್ರದರ್ಶಿಸಿದೆ.

ADVERTISEMENT

ಕಾಂಗ್ರೆಸ್ ಬೆಂಬಲಿತ ಮಹಿಳೆಯರು ಸಿದ್ದರಾಮಯ್ಯ ನಡೆಯನ್ನು ಸಮರ್ಥಿಸಿದ್ದಾರೆ. ಬಿಜೆಪಿ ಬೆಂಬಲಿತ ಮಹಿಳೆಯರು ಸಿದ್ದರಾಮಯ್ಯ ರಾಜೀನಾಮೆಗೆ ಒತ್ತಾಯಿಸಿದ್ದಾರೆ. ಆದರೆ, ಈ ಎರಡೂ ಕಡೆಯವರ ಧ್ವನಿ ರಾಜ್ಯ ರಾಜಕೀಯದಲ್ಲಿದ್ದವರಿಗೆ ಕೇಳುವಷ್ಟು ದೊಡ್ಡದಾಗಿಲ್ಲ. ಈ ಬಗೆಯ ಹೇಳಿಕೆಗಳು ಸ್ಥಳೀಯ ಸಂಘಟನೆಗೆ ಸಹ ಯಾವುದೇ ಬಗೆಯ ಪರಿಣಾಮ ಬೀರುತ್ತಿಲ್ಲ!

ಅಗಸ್ಟ 8ರಂದು ಐವರು ಕಾಂಗ್ರೆಸ್ ಮಹಿಳೆಯರು ಯಾರದೋ ಮನೆಯಲ್ಲಿ ಕುಳಿತು `ಸಿದ್ದರಾಮಯ್ಯ ಸಾಧನೆ ಸಹಿಸದ ಬಿಜೆಪಿಗರು ಪಾದಯಾತ್ರೆ ಮಾಡುತ್ತಿದ್ದಾರೆ’ ಎಂದು ಫೋಟೋ ಜೊತೆ ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿದ್ದರು. ಇದಕ್ಕೆ ಪ್ರತಿಯಾಗಿ ಅಗಸ್ಟ 10ರಂದು ಬಿಜೆಪಿಯ ಏಳು ಮಹಿಳೆಯರು ಪಕ್ಷದ ಕಚೇರಿಯಲ್ಲಿ ಸುದ್ದಿಗೋಷ್ಟಿ ನಡೆಸಿ `ಕಾಂಗ್ರೆಸ್ ಪಕ್ಷದಿಂದ ಉಚ್ಚಾಟನೆಗೊಂಡವರು ಬಿಜೆಪಿಗರ ಬಗ್ಗೆ ಮಾತನಾಡುವ ನೈತಿಕತೆ ಉಳಿಸಿಕೊಂಡಿಲ್ಲ. ಪ್ರತಿ ಬಾರಿ ಪಕ್ಷ ಬದಲಿಸುವವರ ಮಾತಿಗೆ ಸಮಾಜದಲ್ಲಿ ಕಿಮ್ಮತ್ತಿಲ್ಲ’ ಎನ್ನುವ ಮೂಲಕ ತಿರುಗೇಟು ನೀಡಿದ್ದಾರೆ.

Advertisement. Scroll to continue reading.

`ಕಾಂಗ್ರೆಸ್ಸಿಗೆ ಜನ ಬೆಂಬಲವಿದೆ’ ಎಂಬುದು ಕಾಂಗ್ರೆಸ್ ಮಹಿಳೆಯರ ವಾದ. `ಕಾಂಗ್ರೆಸ್ ಸರ್ಕಾರ ದಲಿತರ ಹಣವನ್ನು ಕೊಳ್ಳೆ ಹೊಡೆದಿದೆ’ ಎಂಬುದು ಬಿಜೆಪಿ ಮಹಿಳೆಯರ ದೂರು. `ಕಾಂಗ್ರೆಸ್ ಸರ್ಕಾರ ಬಡವರಿಗೆ ಒಳ್ಳೆಯದು ಮಾಡಿದೆ’ ಎಂದು ಕಾಂಗ್ರೆಸ್ಸಿನ ಮಹಿಳಾ ಅಧ್ಯಕ್ಷೆ ಪೂಜಾ ನೇತ್ರೇಕರ್ ಹೇಳಿದರೆ, `ಕಾಂಗ್ರೆಸ್ ಸರ್ಕಾರದಿಂದ ಯಾವುದೇ ಅಭಿವೃದ್ಧಿ ಆಗಿಲ್ಲ’ ಎಂದು ಬಿಜೆಪಿ ರಾಜ್ಯ ಕಾರ್ಯಕಾರಣಿ ಸದಸ್ಯೆ ರೇಖಾ ಹೆಗಡೆ ಆರೋಪಿಸಿದ್ದಾರೆ.

Advertisement. Scroll to continue reading.

ಕಾಂಗ್ರೆಸ್ ಪರ ಹೇಳಿಕೆಯನ್ನು ಸರಸ್ವತಿ ಗುನಗ, ಸುನಂದ ದಾಸ್, ನರ್ಮದಾ ನಾಯ್ಕ್,, ಹಲಿಮಾ ಕಕ್ಕೆರಿ ಬೆಂಬಲಿಸಿದ್ದಾರೆ. ಬಿಜೆಪಿ ಹೇಳಿಕೆಯನ್ನು ಶ್ರುತಿ ಹೆಗಡೆ, ಚಂದ್ರಕಲಾ ಭಟ್, ಶ್ಯಾಮಿಲಿ ಪಾಟಣಕರ, ನಿರ್ಮಲಾ ನಾಯ್ಕ ಹಾಗೂ ಸುನಂದಾ ಮರಾಠಿ ಬೆoಬಲಿಸಿದ್ದಾರೆ. ಒಟ್ಟಿನಲ್ಲಿ ಎರಡು ಪಕ್ಷದಲ್ಲಿ ನಡೆಯುತ್ತಿರುವ ಜಡೆ ಜಗಳ ಪಕ್ಷದ ಇತರರ ಇರುಸು-ಮುರುಸಿಗೆ ಕಾರಣವಾಗಿದೆ.

Previous Post

ಕಾಣೆಯಾದ ಮೊಬೈಲ್ ಹುಡುಕಿದ ಪೊಲೀಸರು: ವಾರಸುದಾರರ ಮೊಗದಲ್ಲಿ ಸಂತಸ

Next Post

ಪಟಾಕಿ ಸದ್ದಿಗೂ ಬೆದರದ ಕಾಡುಕೋಣ!

Next Post

ಪಟಾಕಿ ಸದ್ದಿಗೂ ಬೆದರದ ಕಾಡುಕೋಣ!

Discussion about this post

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ