ಭಟ್ಕಳ: ಕಾಂಗ್ರೆಸ್ ಪಕ್ಷದಲ್ಲಿ ಗುರುತಿಸಿಕೊಂಡಿರುವ ನ್ಯಾಯವಾದಿ ರವೀಂದ್ರ ನಾಯ್ಕ ಸ್ವ ಪಕ್ಷದ ಸಚಿವ ಈಶ್ವರ ಖಂಡ್ರೆ ಆದೇಶದ ವಿರುದ್ಧ ಕಿಡಿಕಾರಿದ್ದಾರೆ. `ಅರಣ್ಯವಾಸಿಗಳನ್ನ ಒಕ್ಕಲೆಬ್ಬಿಸುವ ಮಾನದಂಡ 2015ಕ್ಕೆ ನಿಗದಿಗೊಳಿಸಿ ಅರಣ್ಯ ಸಚಿವರಾದ ಈಶ್ವರ್ ಖಂಡ್ರೆ ಹೊರಡಿಸಿದ ಟಿಪ್ಪಣೆಯಿಂದ ಬಡವರಿಗೆ ನ್ಯಾಯ ಸಿಗುತ್ತಿಲ್ಲ’ ಎಂದವರು ಹೇಳಿದ್ದಾರೆ. `ಈ ಟಿಪ್ಪಣಿಯಿಂದ ಕಾನೂನು ಉಲ್ಲಂಗನೆಯಾಗಿದೆ’ ಎಂದು ಅವರು ಕಾನೂನಾತ್ಮಕ ಅಂಶಗಳ ಜೊತೆ ಸಚಿವರ ನಡವಳಿಕೆಗೆ ಆಕ್ಷೇಪ ವ್ಯಕ್ತಪಡಿಸಿದ್ದಾರೆ.
ಭಾನುವಾರ ಭಟ್ಕಳ ತಾಲೂಕಿನ ಅರಣ್ಯ ವಾಸಿಗಳ ಸಭೆಯಲ್ಲಿ ಮಾತನಾಡಿದ ಅವರು `ದೇಶದಲ್ಲಿ ಇಂದು ಅರಣ್ಯ ಸಂರಕ್ಷಣಾ ಕಾಯಿದೆ 1980 ಅಡಿಯಲ್ಲಿ, 1978 ರ ನಂತರ ಹಾಗೂ ಅರಣ್ಯ ಹಕ್ಕು ಕಾಯಿದೆಯಂತೆ ಡಿಸೆಂಬರ 13, 2005ರ ನಂತರ ಅತಿಕ್ರಮಣ ಮಂಜೂರಿಗೆ ಕಾನೂನು ಜಾರಿಯಲ್ಲಿ ಇಲ್ಲ. ಅಲ್ಲದೇ ನಿರ್ಭಂಧವಿದೆ. ಇದನ್ನು ಸುಪ್ರೀಂ ಕೋರ್ಟಸಹಿತ ನಿರ್ಭಂಧಿಸಿದೆ. ಆದರೇ, ಅಗಸ್ಟ 2ರ ಸಚಿವರ ಆದೇಶ ನಿಗದಿಗೋಳಿಸಿದ 2015ರವರೆಗಿನ ಅವಧಿಗೆ ಯಾವೂದೇ ಅತಿಕ್ರಮಣ ಮಾಡಲೂ ಕಾನೂನಲ್ಲಿ ಮಾನ್ಯತೆ ಇಲ್ಲ ಎಂದು ಅವರು ಹೇಳಿದರು.’ ಎಂದು ಹೇಳಿದರು.
ಈ ಸಭೆಯಲ್ಲಿ ಅರಣ್ಯ ಹಕ್ಕು ಹೋರಾಟ ಸಮಿತಿ ಪದಾಧಿಕಾರಿಗಳಾದ ಪಾಂಡು ನಾಯ್ಕ ಬೆಳಕೆ, ದೇವರಾಜ ಗೊಂಡಾ, ಮಂಜುನಾಥ ಮರಾಠಿ, ಶಬ್ಬೀರ್, ಚಂದ್ರು ನಾಯ್ಕ ಗೊರಟೆ, ದೇವೇಂದ್ರ ಮರಾಠಿ, ಹೆಜ್ಜೆಲ್, ಕಯುಂ ಕೊಲ, ಎಸ್ ಕೆ ಮನ್ಸುರ್, ಚೇತನ ಮರಾಠಿ ಇತರರು ಇದ್ದರು.
ಸಂಘಟನೆಗೆ ಬಲ:
ಅರಣ್ಯ ವಾಸಿಗಳ ಸಮಸ್ಯೆಗಳಿಗೆ ನಿರಂತರ 33 ವರ್ಷದ ಹೋರಾಟ ಕೊನೆಯ ಹಂತದಲ್ಲಿದ್ದು, ಇದನ್ನು ಇನ್ನಷ್ಟು ತುರುಸುಗೊಳಿಸಲು ಈ ಸಭೆಯಲ್ಲಿ ನಿರ್ಣಯಿಸಲಾಗಿದೆ. ಮುಂದಿನ ದಿನಗಳಲ್ಲಿ ಸಂಘಟನಾ ಬಲ ಹೆಚ್ಚಿಸುವ ಬಗ್ಗೆ ಸಭೆಯಲ್ಲಿ ಚರ್ಚೆ ನಡೆದಿದೆ.






Discussion about this post