`ರಾಜ್ಯ ಸರ್ಕಾರ ಜಾರಿಗೆ ತಂದಿರುವ ಗ್ಯಾರಂಟಿ ಯೋಜನೆಗಳಿಗೆ ಯಾವುದೇ ಹೊಸ ಷರತ್ತುಗಳಿಲ್ಲ. ಹಾಗೇ ಈ ಯೋಜನೆ ಅನರ್ಹರಿಗೆ ಸಹ ಸಿಗಲ್ಲ. ಗ್ಯಾರಂಟಿ ಯೋಜನೆಗೆ ಹಾಗೂ ರಾಜಕಾರಣಕ್ಕೆ ಯಾವುದೇ ಸಂಬoಧ ಇಲ್ಲ’ ಎಂದು ಉತ್ತರ ಕನ್ನಡ ಉಸ್ತುವಾರಿ ಸಚಿವ ಮಂಕಾಳು ವೈದ್ಯ ಹೇಳಿದ್ದಾರೆ.
ಸುದ್ದಿಗಾರರ ಜೊತೆ ಮಾತನಾಡಿದ ಅವರು `ಸರ್ಕಾರದ ಗ್ಯಾರಂಟಿ ಯೋಜನೆಗಳನ್ನು ರಾಜ್ಯದ ಕಟ್ಟಕಡೆಯ ಅರ್ಹ ವ್ಯಕ್ತಿಗಳಿಗೂ ತಲುಪಿಸುವ ಮೂಲಕ ಅವರ ಸಮಗ್ರ ಅಭಿವೃಧ್ದಿಗೆ ನೆರವಾಗುವ ಉದ್ದೇಶವಿದೆ. ಈ ಯೋಜನೆಗಳು ಅನರ್ಹ ವ್ಯಕ್ತಿಗಳಿಗೆ ತಲುಪದಂತೆ ಎಚ್ಚರವಹಿಸಲಾಗುತ್ತಿದೆ’ ಎಂದರು. `ಗ್ಯಾರಂಟಿ ಯೋಜನೆಗಳಿಗೂ ರಾಜಕಾರಣಕ್ಕೂ ಸಂಬoಧವಿಲ್ಲ. ಯೋಜನೆಗಳು ಯಾವುದೇ ಕಾರಣಕ್ಕೂ ಸ್ಥಗಿತಗೊಳ್ಳದೇ ಮುಂದುವರೆಯಲಿವೆ’ ಎಂದರು.
ಸಚಿವ ಮಂಕಾಳು ವೈದ್ಯ ಇನ್ನೂ ಏನೇನು ಹೇಳಿದರು? ವಿಡಿಯೋ ಇಲ್ಲಿದೆ ನೋಡಿ…







Discussion about this post