ಕಾಳಿ ನದಿ ಸೇತುವೆ ಮುರಿತಕ್ಕೆ (Bridge collapse) ಕಾರಣ, ಅಪೂರ್ಣವಾಗಿ ಮುರಿದ ಸೇತುವೆ ಪೂರ್ಣ ಪ್ರಮಾಣದಲ್ಲಿ ತೆರವು ಹಾಗೂ ಹೊಸ ಸೇತುವೆ ನಿರ್ಮಾಣದ ಸವಾಲುಗಳ ಬಗ್ಗೆ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಬುಧವಾರ ಚರ್ಚೆ ನಡೆಸಿದ್ದಾರೆ. ಹೊಸ ಸೇತುವೆ ಮೇಲೆ ನಿಂತು ಹಳೆ ಸೇತುವೆ ನೋಡಿದ ಅವರು ಅಲ್ಲಿ ಸಮಾಧಾನವಾಗದ ಕಾರಣ ಕುಸಿತ ಸೇತುವೆ ತಳಭಾಗಕ್ಕೆ ಹೋಗಿ ವೀಕ್ಷಣೆ ನಡೆಸಿದರು.
S News ಡಿಜಿಟಲ್”
ಕಾರವಾರದ ಕೋಡಿಭಾಗಕ್ಕೆ ತೆರಳಿದ ಅವರು ಕಾಳಿ ನದಿ ಸೇತುವೆ ಕುಸಿತವನ್ನು (Bridge collapse) ಪರಿಶೀಲಿಸಿ ತಮಗಿದ್ದ ಅನುಮಾನಗಳನ್ನು ಬಗೆಹರಿಸಿಕೊಂಡರು. `ಹೊಸ ಸೇತುವೆ ಸಂಚಾರಕ್ಕೆ ಸುರಕ್ಷಿತವೇ?’ ಎಂದು ಅವರು ಜಿಲ್ಲಾಡಳಿತವನ್ನು ಪ್ರಶ್ನಿಸಿ `ಅದು ಸುರಕ್ಷಿತ’ ಎಂದು ಮಾಹಿತಿ ಪಡೆದರು. ಇನ್ನೂ `ಕುಸಿತ ಕಂಡ ಸೇತುವೆಯ ಕೆಲ ಭಾಗಗಳು ಅಪಾಯಕಾರಿ ರೀತಿಯಲ್ಲಿದ್ದು, ಅದನ್ನು ವೈಜ್ಞಾನಿಕವಾಗಿ ಬಿಡಿಸಬೇಕು. ಅದನ್ನು ತೆಗೆಯುವ ವೇಳೆ ಹೊಸ ಸೇತುವೆಗೆ ಯಾವುದೇ ಹಾನಿ ಆಗಬಾರದು’ ಎಂದವರು ಸೂಚಿಸಿದರು.
S News ಡಿಜಿಟಲ್”
ಇದೆಲ್ಲದರ ಜೊತೆ `ಸಾರ್ವಜನಿಕ ಓಡಾಟಕ್ಕೆ ಅನುಕೂಲವಾಗುವಂತೆ ಇನ್ನೊಂದು ಸೇತುವೆ ನಿರ್ಮಿಸಬೇಕು. ಆ ಹೊಣೆ ಸಹ ನಮ್ಮ ಮೇಲಿದ್ದು, ಹೆದ್ದಾರಿ ಪ್ರಾಧಿಕಾರದ ಜೊತೆ ಚರ್ಚೆ ನಡೆಸಿದ್ದೇನೆ’ ಎಂದರು. `ಕಾಳಿ ಸೇತುವೆ ಕುಸಿತದ ಹಿನ್ನಲೆ ಎಲ್ಲಾ ಸೇತುವೆಗಳ ಗುಣಮಟ್ಟ ಪರಿಶೀಲಿಸಿ ವರದಿ ಸಲ್ಲಿಸುವಂತೆ ಸಂಬ0ಧಿಸಿದವರಿಗೆ ಸೂಚಿಸಲಾಗಿದೆ’ ಎಂದು ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಹೇಳಿದರು. ಪ್ರಮುಖರಾದ ರೂಪಾಲಿ ನಾಯ್ಕ, ಗಣಪತಿ ಉಳ್ವೇಕರ್, ನಿತಿನ್ ಪಿಕಳೆ ಇತರರು ಅವರ ಜೊತೆಯಿದ್ದರು.
ಕೋಡಿಭಾಗಕ್ಕೆ ತೆರಳಿದ ಸಂಸದ ವಿಶ್ವೇಶ್ವರ ಹೆಗಡೆ ಕಾಗೇರಿ ಅಲ್ಲಿ ಮಾಡಿದ್ದೇನು? ನೋಡಿದ್ದೇನು? ಹೇಳಿದ್ದೇನು? ವಿಡಿಯೋ ಇಲ್ಲಿ ನೋಡಿ..





Discussion about this post