6
  • Latest
Tourism Tourist places in karnataka Sathoddi falls Travelphotography Nature Tourist Travel Trip S news digital Today news Kannada suddhi Karnataka Utthara kannada

Tourism | ಪ್ರವಾಸೋದ್ಯಮ ಚಟುವಟಿಕೆಗೆ ಅರಣ್ಯ ಇಲಾಖೆ ಅಡ್ಡಗಾಲು

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Thursday, February 12, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ರಾಜ್ಯ

Tourism | ಪ್ರವಾಸೋದ್ಯಮ ಚಟುವಟಿಕೆಗೆ ಅರಣ್ಯ ಇಲಾಖೆ ಅಡ್ಡಗಾಲು

AchyutKumar by AchyutKumar
August 24, 2024
in ರಾಜ್ಯ
Tourism Tourist places in karnataka Sathoddi falls Travelphotography Nature Tourist Travel Trip S news digital Today news Kannada suddhi Karnataka Utthara kannada
advt advt advt
ADVERTISEMENT

ಉತ್ತರ ಕನ್ನಡ ಜಿಲ್ಲೆಯಲ್ಲಿ ಪ್ರತಿ ವರ್ಷ ಅಗಸ್ಟ ಮೊದಲ ವಾರದಲ್ಲಿಯೇ ಪ್ರವಾಸೋದ್ಯಮ ( Tourism ) ಚಟುವಟಿಕೆಗಳು ಗರಿಗೆದರುತ್ತಿದ್ದು, ಈ ವರ್ಷ ಈವರೆಗೂ ಪ್ರವಾಸೋದ್ಯಮದ ಬಾಗಿಲು ತೆರೆದುಕೊಂಡಿಲ್ಲ. ಬಹುತೇಕ ಜಲಪಾತಗಳಿಗೆ ಅರಣ್ಯ ಇಲಾಖೆ ನಿಷೇಧ ಹೇರಿರುವುದರಿಂದ ಪ್ರವಾಸಿಗರಿಗೆ ನಿರಾಸೆಯಾಗಿದೆ. ಪ್ರವಾಸೋದ್ಯಮ ಚಟುವಟಿಕೆಯನ್ನು ನಂಬಿರುವ ಹೋಟೆಲ್, ಹೋಂ ಸ್ಟೇ ಹಾಗೂ ರೆಸಾರ್ಟ ಮಾಲಕರು ಇದರಿಂದ ಕಂಗಾಲಾಗಿದ್ದಾರೆ.

ಮಲೆನಾಡು ಭಾಗದಲ್ಲಿ ಅರಣ್ಯ ಇಲಾಖೆ ಅಧೀನದಲ್ಲಿರುವ ಗ್ರಾಮ ಅರಣ್ಯ ಸಮಿತಿಯವರ ಪ್ರವಾಸಿತಾಣಗಳ ( Tourism ) ನಿರ್ವಹಣೆ ನಡೆಯುತ್ತಿದೆ. ಜಲಪಾತ ವೀಕ್ಷಣೆಗೆ ಆಗಮಿಸುವವರಿಂದ ಗ್ರಾಮ ಅರಣ್ಯ ಸಮಿತಿಯವರು ಶುಲ್ಕ ಪಡೆದು ಪ್ರವೇಶ ನೀಡುತ್ತಾರೆ. ಆದರೆ, ಮಳೆಗಾಲ ಶುರುವಾದ ನಂತರ ಬಹುತೇಕ ಜಲಪಾತಗಳ ಪ್ರವೇಶ ನಿಷೇಧಿಸಲಾಗಿದ್ದು, ಮಳೆ ಕಡಿಮೆಯಾದರೂ ಅಲ್ಲಿನ ನಿಷೇಧ ತೆರವಾಗಿಲ್ಲ. ಇದರಿಂದ ಗ್ರಾಮ ಅರಣ್ಯ ಸಮಿತಿಯವರ ಆದಾಯಕ್ಕೂ ಸಮಸ್ಯೆಯಾಗಿದೆ. ಪ್ರಸ್ತುತ ಯಲ್ಲಾಪುರ ತಾಲೂಕಿನ ಪ್ರಸಿದ್ಧ ಸಾತೋಡ್ಡಿ ಜಲಪಾತಕ್ಕೆ ಪ್ರವೇಶವಿಲ್ಲ. ಮಾಗೋಡು ಜಲಪಾತಕ್ಕೆ ತೆರಳುವ ರಸ್ತೆ ಕುಸಿದಿದ್ದು, ಪರ್ಯಾಯ ರಸ್ತೆ ನಿರ್ಮಾಣವಾಗಿಲ್ಲ. ಅರಣ್ಯ ಸಮಿತಿ ಹಾಗೂ ವ್ಯಕ್ತಿಯೊಬ್ಬರ ಜಟಾಪಟಿಯಲ್ಲಿ ಅರಬೈಲ್ ಘಟ್ಟ ಪ್ರದೇಶದಲ್ಲಿರುವ ಶಿರಲೆ ಜಲಪಾತಕ್ಕೆ ಪ್ರವೇಶವಿಲ್ಲದೇ ಮೂರು ವರ್ಷ ಕಳೆದಿದೆ. ಕುಳಿ ಮಾಗೋಡು ಜಲಪಾತದ ಪ್ರವೇಶವನ್ನು ಸಹ ಅರಣ್ಯ ಇಲಾಖೆ ನಿಷೇಧಿಸಿದೆ. ಇದನ್ನು ಹೊರತುಪಡಿಸಿ ಅಂಕೋಲಾದ ಬೆಣ್ಣಹಳ್ಳ ಜಲಪಾತ, ವಿಭೂತಿ ಜಲಪಾತ, ಕಾರವಾರದ ಗೋಲಾರಿ ಜಲಪಾತ, ನಾಗರಮುಡಿ ಜಲಪಾತ ಸೇರಿ ಹಲವು ಜಲಪಾತಗಳಿಗೆ ಪ್ರವೇಶವಿಲ್ಲ. ಪ್ರವಾಸೋದ್ಯಮ ಬೆಳವಣಿಗೆಯಿಂದ ಉದ್ಯೋಗ ಸೃಷ್ಠಿ, ಆರ್ಥಿಕ ಅಭಿವೃದ್ಧಿ ಹಾಗೂ ಪರಿಸರ ಸ್ನೇಹಿ ಚಟುವಟಿಕೆಗೆ ಅವಕಾಶವಿದ್ದರೂ ಅರಣ್ಯ ಇಲಾಖೆಯ ಅಡ್ಡಗಾಲಿನಿಂದ ಇದ್ಯಾವ ಕೆಲಸವೂ ನಡೆಯುತ್ತಿಲ್ಲ.

Advertisement. Scroll to continue reading.
Advertisement. Scroll to continue reading.
ADVERTISEMENT
ADVERTISEMENT

ಇನ್ನೂ ಕರಾವಳಿ ಭಾಗದಲ್ಲಿ ಪ್ರವಾಸೋದ್ಯಮ ಚಟುವಟಿಕೆ ಉತ್ತೇಜನಕ್ಕಾಗಿ ಖಾಸಗಿಯವರಿಗೆ ಟೆಂಡರ್ ನೀಡಲಾಗುತ್ತಿದೆ. ಅಲ್ಲಿ ಪ್ರವಾಸಿಗರ ಸುರಕ್ಷತೆ ಹಾಗೂ ಪ್ರದೇಶದ ನಿರ್ವಹಣೆಯ ಹೊಣೆಯನ್ನು ಖಾಸಗಿಯವರುವಹಿಸಿಕೊಂಡಿದ್ದು, ಇದರಿಂದ ಸರ್ಕಾರಕ್ಕೂ ಆದಾಯ ಬರುತ್ತಿದೆ. ಪ್ರವಾಸೋದ್ಯಮ ಇಲಾಖೆ ಹಾಗೂ ಜಿಲ್ಲಾಡಳಿತ ಖಾಸಗಿಯವರ ಮೇಲೆ ನಿಗಾ ಇರಿಸಿ ಅಗತ್ಯ ಸಲಹೆಗಳನ್ನು ನೀಡುತ್ತಿದೆ. ಆದರೆ, ಮಲೆನಾಡು ಭಾಗದಲ್ಲಿ ಗ್ರಾಮ ಅರಣ್ಯ ಸಮಿತಿಯವರು ಅಗತ್ಯ ಸಿಬ್ಬಂದಿ ನೇಮಿಸುವಷ್ಟು ಆರ್ಥಿಕ ಸಾಮರ್ಥ್ಯ ಹೊಂದಿಲ್ಲ. ಖಾಸಗಿಯವರಿಗೆ ನಿರ್ವಹಣೆ ಕೊಡಲು ಮನಸ್ಸು ಮಾಡುತ್ತಿಲ್ಲ. ಇಲ್ಲಿ ಯಾವುದೇ ಅವಘಡ ನಡೆದರೂ ಗ್ರಾಮ ಅರಣ್ಯ ಸಮಿತಿಯವರನ್ನು ಹೊಣೆಗಾರರನ್ನಾಗಿ ಮಾಡುವ ಆತಂಕದ ಹಿನ್ನಲೆ ಸಮಿತಿಯವರು ಪ್ರವಾಸೋದ್ಯಮ ಚಟುವಟಿಕೆಗೆ ಅವಕಾಶವನ್ನು ನೀಡುತ್ತಿಲ್ಲ.

`ಪ್ರವಾಸೋದ್ಯಮ ತಾಣಗಳ ನಿರ್ವಹಣೆಯನ್ನು ಖಾಸಗಿಯವರಿಗೆ ನೀಡಿದಲ್ಲಿ ಸರ್ಕಾರಕ್ಕೆ ಆದಾಯ ಬರುವ ಜೊತೆ ಸುರಕ್ಷತೆಗೆ ಅಗತ್ಯವಿರುವ ಸಿಬ್ಬಂದಿ ನೇಮಕಾತಿಯೂ ನಡೆಯುತ್ತದೆ. ಆದರೆ, ಅರಣ್ಯ ವ್ಯಾಪ್ತಿಯಲ್ಲಿ ಬರುವ ಜಲಪಾತಗಳ ಬಗ್ಗೆ ಗ್ರಾಮ ಅರಣ್ಯ ಸಮಿತಿಯವರು ತಮ್ಮ ಹಕ್ಕಿನ ಬಗ್ಗೆ ಹೇಳುತ್ತಿದ್ದು, ಇದರಿಂದ ಪ್ರವಾಸೋದ್ಯಮ ಚಟುವಟಿಕೆಗೆ ಹಿನ್ನಡೆ ಆದ ಬಗ್ಗೆ ಅಧಿಕೃತ ದೂರು ಬಂದಲ್ಲಿ ತಕ್ಷಣ ಕ್ರಮ ಜರುಗಿಸಲಾಗುತ್ತದೆ’ ಎಂದು ಪ್ರವಾಸೋದ್ಯಮ ಇಲಾಖೆಯ ಸಹಾಯಕ ನಿರ್ದೇಶಕ ಜಯಂತ್ ಅವರು ತಿಳಿಸಿದರು.

ShareSendTweetShare
ADVERTISEMENT
Previous Post

Suicide | ರೈಲಿನ ಅಡಿಗೆ ಜಿಗಿದು ಜೀವಬಿಟ್ಟ ಮದ್ಯ ವ್ಯಸನಿ

Next Post

Whatsapp | ವಾಟ್ಸಪ್ ವೀರ ಈ ವಿಶ್ವನಾಥ: ನಗ್ನ ವಿಡಿಯೋ ಹರಿಬಿಟ್ಟ ವ್ಯಾಪಾರಿ ವಿರುದ್ಧ ದೂರು!

Next Post

Whatsapp | ವಾಟ್ಸಪ್ ವೀರ ಈ ವಿಶ್ವನಾಥ: ನಗ್ನ ವಿಡಿಯೋ ಹರಿಬಿಟ್ಟ ವ್ಯಾಪಾರಿ ವಿರುದ್ಧ ದೂರು!

Award | ಪ್ರಶಾಂತಿ ಫೌಂಡೇಶನ್'ಗೆ ಪ್ರಶಸ್ತಿಯ ಗರಿ: ದಿವ್ಯಾಂಗರ ಬದುಕಿಗೆ ಬಾಳು ನೀಡಿದ ಬಾಳೆ ನಾರು!

Kumta | ಗುಡ್ಡದ ತಪ್ಪಲಿನಲ್ಲಿ ಭಾರೀ ಪ್ರಮಾಣದ ಬಿರುಕು: ಜನರಲ್ಲಿ ಹೆಚ್ಚಿದ ಆತಂಕ

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.