ಶುಕ್ರವಾರ ರಾತ್ರಿ ಸುರಿದ ಮಳೆಗೆ ಕುಮಟಾದ (Kumta) ಬರ್ಗಿ ಗ್ರಾ ಪಂ ವ್ಯಾಪ್ತಿಯ ಕುರಿಗದ್ದೆ ಬಳಿಯ ಗುಡ್ಡದಲ್ಲಿ ಭಾರೀ ಪ್ರಮಾಣದ ಬಿರುಕು ಕಾಣಿಸಿಕೊಂಡಿದೆ. ಸಮೀಪದಲ್ಲಿಯೇ ಜನ ವಸತಿ ಪ್ರದೇಶವೂ ಇರುವುದರಿಂದ ಜನರಲ್ಲಿ ಆತಂಕ ಹೆಚ್ಚಾಗಿದೆ.
ಕುರಿಗದ್ದೆಯ ಕೃಷ್ಣಪ್ಪ ರಾಮಯ್ಯ ಪಟಗಾರ ಅವರ ಮನೆ ಸಮೀಪದ ಅರಣ್ಯ ಪ್ರದೇಶದಲ್ಲಿ 500 ಮೀ ಜಾಗದಲ್ಲಿ ಬಿರುಕು ಮೂಡಿದೆ. ದೊಡ್ಡ ಪ್ರಮಾಣದ ಜಾಗದಲ್ಲಿ ಕಂದಕ ಕಾಣಿಸಿಕೊಂಡಿದ್ದರಿ0ದ ಗುಡ್ಡ ಕುಸಿತದ ಆತಂಕ ಕಾಡುತ್ತಿದೆ.
ಗುಡ್ಡ ಬಾಯ್ತೆರೆದ ವಿಷಯ ತಿಳಿದ ಕಂದಾಯ ಅಧಿಕಾರಿಗಳು ಸ್ಥಳಕ್ಕೆ ಭೇಟಿ ನೀಡಿದ್ದಾರೆ. ಗುಡ್ಡದ ತಪ್ಪಲಿನಲ್ಲಿರುವವರಿಗೆ ಬೇರೆ ಕಡೆ ಸ್ಥಳಾಂತರವಾಗುವ0ತೆ ಸೂಚನೆ ನೀಡಿದ್ದಾರೆ.
ಕಳೆದ ಒಂದು ವಾರದಿಂದ ಮಳೆ ಪ್ರಮಾಣ ಕಡಿಮೆಯಾಗಿದ್ದು, ಶುಕ್ರವಾರ ಸಂಜೆ ಏಕಾಏಕಿ ರಭಸ ಮಳೆ ಸುರಿದಿದೆ. ರಾತ್ರಿಯಿಡಿ ಮಳೆ ಸುರಿದ ಪರಿಣಾಮ ಗುಡ್ಡ ಬಾಯ್ಬಿಟ್ಟಿದೆ. ಈ ಪ್ರದೇಶದಲ್ಲಿ ಇದೇ ಮೊದಲ ಬಾರಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಗುಡ್ಡದ ಬಿರುಕು ನೋಡಿರುವುದಾಗಿ ಸ್ಥಳೀಯರು ಮಾಹಿತಿ ನೀಡಿದ್ದಾರೆ.




