ಕಾರವಾರ: ಕಾಜುಭಾಗ ನಾಗಚೌಡೇಶ್ವರಿ ದೇವಿಯ ಎರಡು ಕಣ್ಣುಗಳು ಕಳ್ಳರ ಪಾಲಾಗಿದೆ.
ಅಗಸ್ಟ 27ರ ರಾತ್ರಿ ದೇವಾಲಯದ ಬಾಗಿಲು ಒಡೆದು ಒಳ ನುಗ್ಗಿದ ಕಳ್ಳರು ಬಂಗಾರದ ಕಣ್ಣುಗಳನ್ನು ಅಪಹರಿಸಿದ್ದಾರೆ. ಇದರೊಂದಿಗೆ ಬಂಗಾರದ ತಿಲಕ, ಕರಿಮಣಿ ಸರ, ಕಿವಿ ಓಲೆಯನ್ನು ಸಹ ಬಿಟ್ಟಿಲ್ಲ. ಅಗಸ್ಟ 28ರ ಬೆಳಗ್ಗೆ ದೇವಾಲಯಕ್ಕೆ ಬಂದವರಿಗೆ ಈ ಕಳ್ಳತನದ ಬಗ್ಗೆ ಅರಿವಾಗಿದೆ.
ತಕ್ಷಣ ಸಮಿತಿಯವರು ಸಭೆ ನಡೆಸಿ ಈ ಬಗ್ಗೆ ಚರ್ಚಿಸಿದ್ದಾರೆ. ದೇವಾಲಯ ಆವರಣ ಹಾಗೂ ಸುತ್ತಲಿನ ಪ್ರದೇಶದಲ್ಲಿ ಕಳ್ಳತನವಾದ ವಸ್ತುಗಳ ಹುಡುಕಾಟ ನಡೆಸಿದ್ದಾರೆ. ಆದರೆ, ಯಾವುದೇ ಸುಳಿವು ಸಿಕ್ಕಿಲ್ಲ. ಹೀಗಾಗಿ ತೆರಿಗೆ ಸಲಹಗಾರರು ಆಗಿರುವ ದೇವಾಲಯದ ಮುಖ್ಯಸ್ಥ ಸತೀಶ ಗಿರಿಧರ ನಾಯ್ಕ ಈ ಬಗ್ಗೆ ಪೊಲೀಸ್ ದೂರು ನೀಡಿದ್ದಾರೆ.




