ಶಿರಸಿ: ರಾಜ್ಯ ಪಾನೀಯ ನಿಗಮದಲ್ಲಿ ದಾಸ್ತಾನು ಇರಿಸಿದ್ದ 2 ಲಕ್ಷಕ್ಕೂ ಅಧಿಕ ಮೊತ್ತದ ಸರಾಯಿಯನ್ನು ಅಧಿಕಾರಿಗಳು ಗುರುವಾರ ಚರಂಡಿಗೆ ಚೆಲ್ಲಿದ್ದಾರೆ. ಈ ಮದ್ಯದ ಅವಧಿ ಮುಗಿದ ಕಾರಣ ಅದನ್ನು ಮಳಿಗೆಗಳಿಗೆ ನೀಡಿಲ್ಲ.
ಕಂದಾಯ ಇಲಾಖೆ, ಅಬಕಾರಿ ಇಲಾಖೆ ಮತ್ತು ಪಾನೀಯ ನಿಗಮದ ಅಧಿಕಾರಿಗಳು ಒಟ್ಟಾಗಿ ಈ ಕಾರ್ಯಾಚರಣೆ ನಡೆಸಿದರು. 96 ಪೆಟ್ಟಿಗೆ ಹಾಗೂ 79 ಬಾಟಲಿಯಲ್ಲಿನ ಒಟ್ಟೂ 2,60,551 ರೂ ಮೌಲ್ಯದ ಸರಾಯಿಗಳನ್ನು ಅಧಿಕಾರಿಗಳು ನಾಶಪಡಿಸಿದರು.




