ಸಿದ್ದಾಪುರದ ಆಲದಕಟ್ಟೆಯಲ್ಲಿ ಬೈಕಿನಲ್ಲಿ ಬಂದು ಅಡಿಕೆ ಕದ್ದಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಅಕ್ತರ್ ರಜಾ ನುಮಾನ್ ರಫೀಕ್ ಸಾಬ್ ಹಾಗೂ ಇಮ್ರಾನ್ ಶೇಖ ಹುಸೇನ್ ಸಾಬ್ ಬಂಧಿತರು. ಈ ಇಬ್ಬರು ಅಡಿಕೆ ವ್ಯಾಪಾರಿ ಮಹಮದ್ ಸಾಬ್ ಅವರ ಶೆಡ್ಡಿನಲ್ಲಿದ್ದ ಅಡಿಕೆಯನ್ನು ಅಪಹರಿಸಿದ್ದರು.
ಇದನ್ನು ಓದಿ: ಅಡಿಕೆ ವ್ಯಾಪಾರಿಗೆ ಆರ್ಥಿಕ ನಷ್ಟ!
ರಾತ್ರಿ ವೇಳೆ ಬೈಕಿನಲ್ಲಿ ಬಂದು ಅಡಿಕೆ ಕದ್ದ ಬಗ್ಗೆ ವ್ಯಾಪಾರಿ ದೂರು ನೀಡಿ, ಬೈಕಿನ ನೊಂದಣಿ ಸಂಖ್ಯೆ ನೀಡಿದ್ದರು. ಈ ಹಿನ್ನಲೆ ಪೊಲೀಸರು ಕಳ್ಳರನ್ನು ಬಂಧಿಸಿದ್ದಾರೆ.




