6
  • Latest

ಮುಂಬಡ್ತಿ ಸಿಕ್ಕರೂ ಸ್ವೀಕರಿಸದ ಮಾತೃಹೃದಯಿ: ಜನ ಮೆಚ್ಚಿದ ಶಿಕ್ಷಕಿಗೆ ಸೇವಾ ನಿವೃತ್ತಿ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಮುಂಬಡ್ತಿ ಸಿಕ್ಕರೂ ಸ್ವೀಕರಿಸದ ಮಾತೃಹೃದಯಿ: ಜನ ಮೆಚ್ಚಿದ ಶಿಕ್ಷಕಿಗೆ ಸೇವಾ ನಿವೃತ್ತಿ

AchyutKumar by AchyutKumar
in ಸ್ಥಳೀಯ

ಗೋಕರ್ಣದ ಹಾರುಮಾಸ್ಕೇರಿಯಲ್ಲಿ ಹುಟ್ಟಿದ ವನಿತಾ ಭಟ್ಟ ಅವರು ಶಿಕ್ಷಕಿಯಾಗಿ 42 ವರ್ಷಗಳ ಕಾಲ ಸೇವೆ ಸಲ್ಲಿಸಿದ್ದಾರೆ. ಮುರುಡೇಶ್ವರ ಮಾವಳ್ಳಿ-2ರ ಸರ್ಕಾರಿ ಮಾದರಿ ಗಂಡು ಮಕ್ಕಳ ಶಾಲೆಗೆ ಅವರ ಕೊಡುಗೆ ಅಪಾರ.

ADVERTISEMENT

ತಮ್ಮ ಜೀವನದುದ್ದಕ್ಕೂ ಶಿಸ್ತು ಹಾಗೂ ಸಮಯ ಪಾಲನೆಯನ್ನು ರೂಡಿಸಿಕೊಂಡಿರುವ ಅವರು ಮಕ್ಕಳಿಗೆ ಸಹ ಅದನ್ನು ಕಲಿಸಿದ್ದಾರೆ. ಹೀಗಾಗಿ ವನಿತಾ ಭಟ್ಟ ಅವರಲ್ಲಿ ಶಿಷ್ಯರೆಲ್ಲರೂ ಇದೀಗ ಅಚ್ಚುಕಟ್ಟಾದ ಜೀವನ ನಡೆಸುತ್ತಿದ್ದಾರೆ. ಮಾತೃ ಹೃದಯದ ಶಿಕ್ಷಕಿಯಾದ ಅವರು ಎಂದಿಗೂ ಮಕ್ಕಳಿಗೆ ಗಟ್ಟಿಯಾಗಿ ಹೊಡೆದದ್ದಿಲ್ಲ. ಪ್ರೀತಿಯಿಂದ ಗದರಿ ತಿಳಿಸಿ ಹೇಳಿದ ಉದಾಹರಣೆಗಳೇ ಸಾವಿರಾರು. ಅವರ ಕಾಯಕ ನೋಡಿದ ಶಿಕ್ಷಣ ಇಲಾಖೆ `ಜನ ಮೆಚ್ಚಿದ ಶಿಕ್ಷಕಿ’ ಎಂಬ ಬಿರುದು ನೀಡಿದೆ.

ವನಿತಾ ಭಟ್ಟ ಅವರಿಗೆ ಮುಖ್ಯ ಶಿಕ್ಷಕಿ ಆಗುವ ಅವಕಾಶ ಸಿಕ್ಕಿತ್ತು. ಆದರೆ, ಮಕ್ಕಳಿಗೆ ಪಾಠ ಮಾಡುವುದನ್ನು ಬಿಟ್ಟು ಬೇರೆನೂ ಬಯಸದ ಅವರು ಮುಂಬಡ್ತಿಯನ್ನು ನಯವಾಗಿಯೇ ನಿರಾಕರಿಸಿದರು. ಈಗಲೂ ಲವಲವಿಕೆಯಿಂದಿರುವ ಅವರು ನಿವೃತ್ತರಾಗಿದ್ದಾರೆ ಎಂದು ಹೇಳಿದರೆ ಯಾರೂ ನಂಬುವುದಿಲ್ಲ!

Advertisement. Scroll to continue reading.

`ತಮ್ಮ ಜೊತೆಯಾಗಿರುವವರು ಖುಷಿಯಾಗಿರಬೇಕು ಎಂದು ಬಯಸುವ ವನಿತಾ ಭಟ್ಟ ಅವರು ನಮಗೆಲ್ಲ ಹಿರಿಯ ಅಕ್ಕನ ಹಾಗಿದ್ದಾರೆ. ಬೇರೆಯವರ ಕಷ್ಟಕ್ಕೆ ಸ್ಪಂದಿಸುವ ಅವರ ಗುಣ ದೊಡ್ಡದು’ ಎಂದು ಮುರುಡೇಶ್ವರದ ದಿವಿಗಿರಿ ಎಲ್‌ಪಿಎಸ್ ಶಾಲಾ ಶಿಕ್ಷಕಿ ಫಾತಿಮಾ ಫ್ರಾನ್ಸಸ್ ಅಭಿಪ್ರಾಯ ಹಂಚಿಕೊoಡರು.

Advertisement. Scroll to continue reading.

ನಿರoತರ ಅಧ್ಯಯನ, ಅಪಾರವಾದ ಜ್ಞಾನವನ್ನು ಅವರು ಮಕ್ಕಳಿಗೆ ನಿತ್ಯ ಉಣಬಡಿಸಿದ್ದಾರೆ. ಸರಳ ವ್ಯಕ್ತಿತ್ವದ ಮೂಲಕ ಬದುಕು ಕಟ್ಟಿಕೊಂಡಿರುವ ಅವರು ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಆರ್ಥಿಕ ನೆರವು ನೀಡಿದ್ದಾರೆ. ನಿವೃತ್ತಿ ನಂತರವೂ ಅವರು ಶಾಲೆಯವರನ್ನು ಉದ್ದೇಶಿಸಿ, `ಏನಾದರೂ ಕೆಲಸ ಇದ್ದರೆ ಮರೆಯದೇ ಕರೆಯಿರಿ’ ಎಂದು ಹೇಳಿ ಹೋಗುವುದನ್ನು ಮರೆಯಲಿಲ್ಲ!

Previous Post

ಶಿಕ್ಷಕರನ್ನು ನೆನೆದ ಸಾಧಕ ವಿದ್ಯಾರ್ಥಿ

Next Post

ಆಹಾರ ಬೆಳೆ ಸುತ್ತುವರೆದ ಗರಿ ಹುಳು

Next Post

ಆಹಾರ ಬೆಳೆ ಸುತ್ತುವರೆದ ಗರಿ ಹುಳು

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ