6
  • Latest

ಆಹಾರ ಬೆಳೆ ಸುತ್ತುವರೆದ ಗರಿ ಹುಳು

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

‘ಧರ್ಮ’ಸ್ಥಳದಲ್ಲಿ ಮುಸುಕುಧಾರಿ ಭೂತ ಸಂಚಾರ: ಅಪಪ್ರಚಾರಕ್ಕೆ ರಾಮು ನಾಯ್ಕ ಖಂಡನೆ

ಈ 6 ತಾಲೂಕುಗಳಲ್ಲಿ ನಾಳೆಯೂ ಶಾಲೆ-ಕಾಲೇಜಿಗೆ ರಜೆ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

ಅಂಕೋಲಾದ ಮಂಜುನಾಥ, ನಾಯಕನಕೆರೆ ಬಳಿ ಸಾರಾಯಿ ಕುಡಿಯಲು ಅವಕಾಶ ಕೊಟ್ಟ

  • Home
Wednesday, August 20, 2025
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಆಹಾರ ಬೆಳೆ ಸುತ್ತುವರೆದ ಗರಿ ಹುಳು

AchyutKumar by AchyutKumar
in ಸ್ಥಳೀಯ

ಉತ್ತರ ಕನ್ನಡ ಜಿಲ್ಲೆಯಲ್ಲಿ ಭತ್ತ ಬೆಳೆಯುವವರ ಸಂಖ್ಯೆಯೇ ಕಡಿಮೆಯಾಗಿದೆ. ಅದಾಗಿಯೂ ಅಲ್ಲಲ್ಲಿ `ಮನೆ ಖರ್ಚಿನ ಅಕ್ಕಿಗಾದರೂ ಭತ್ತ ಬೆಳೆಯುವ’ ಎನ್ನುವ ರೈತರಿಗೂ ಕೀಟಬಾಧೆ ತೊಂದರೆ ನೀಡುತ್ತಿದೆ.

ADVERTISEMENT

ಯಲ್ಲಾಪುರ, ಜೊಯಿಡಾ, ಹೊನ್ನಾವರ ಮೊದಲಾದ ಕಡೆ ಭತ್ತ ಬೆಳೆದವರು ಗರಿ ಸುತ್ತುವ ಹುಳದ ಉಪಟಳಕ್ಕೆ ನಲುಗಿದ್ದಾರೆ. ಭತ್ತ ಬೆಳೆಯುವ ಮುನ್ನವೇ ಗದ್ದೆಗೆ ಲಗ್ಗೆ ಇಟ್ಟ ಈ ಹುಳಗಳು ಭತ್ತದ ಎಲೆಗಳನ್ನು ಸುತ್ತುವರೆದಿದ್ದು, ಗಿಡದ ಬೆಳವಣಿಗೆಗೆ ಅಡ್ಡಿಯಾಗುತ್ತಿವೆ. ಈ ಕೀಟವನ್ನು ಎಲೆ ಸುರುಳಿ ಹುಳು ಅಥವಾ ಬಿಳಿ ಎರಗಲು ಎಂದು ಕರೆಯುತ್ತಾರೆ. ಈ ಕೀಟದ ಮರಿ ಹುಳುಗಳು ಹಸಿರು ಬಣ್ಣದಿದ್ದು, ಭತ್ತದ ಗರಿಗಳ ಎರಡು ಅಂಚನ್ನು ಮಡಿಚಿ ಒಳಗಡೆ ವಾಸಿಸುತ್ತವೆ. ಗಿಡದ ಹಸಿರು ಭಾಗವನ್ನು ಕೆರೆದು ತಿನ್ನುವುದು ಆ ಹುಳಗಳ ಕಾಯಕ. ಈ ಕೀಟ ಭಾದೆಯಿಂದ ತೆನೆ ಉದ್ದ ಮತ್ತು ತೂಕ ಕಡಿಮೆಯಾಗುತ್ತದೆ.

ಗದ್ದೆಯ ಕಾಲುವೆಗಳು ಮತ್ತು ಬದುಗಳ ಮೇಲೆ ಹುಲ್ಲು ಬೆಳೆಯದಂತೆ ನೋಡಿಕೊಂಡರೆ ಮಾತ್ರ ಈ ಕೀಟ ಬರದಂತೆ ತಡೆಯಬಹುದು. ಆದರೆ, ಈಗಾಗಲೇ ಕಷ್ಟಪಟ್ಟು ಭತ್ತ ಬೆಳೆಯುತ್ತಿರುವವರಿಗೆ ಹುಲ್ಲು ಬರೆದಂತೆ ನೋಡಿಕೊಳ್ಳುವುದು ಇನ್ನಷ್ಟು ಕಷ್ಟದ ಕೆಲಸ. ನೊಮೊರಿಯಾ ರಿಲೆ 1 ಗ್ರಾಂ ಅಥವಾ ಬೇವು ಆಧಾರಿತ ಕೀಟನಾಶಕವಾದ ನಿಂಬಿಸಿಡಿನ್ 3 ಮಿ.ಲೀ ಪ್ರತಿ ಲೀಟರ್ ನೀರಿಗೆ ಅಥವಾ ಶೇ 5ರ ಮುಕ್ಕಡಕ ಸೊಪ್ಪಿನ ನೀರಿನ ಕಷಾಯ ಸಿಂಪಡಣೆ ಮಾಡಿ ಈ ಕೀಟವನ್ನು ಹತೋಟಿಗೆ ತರಬಹುದು ಎಂಬುದು ಕೆಲ ರೈತರ ಅಭಿಪ್ರಾಯ.

Advertisement. Scroll to continue reading.

`ಎಕರೆಗೆ 7.5 ಕೆ.ಜಿ. ಕಾರ್ಬೊಪ್ಯೂರಾನ್ 3ಜಿ. ಅಥವಾ 10 ಕೆ.ಜಿ. ಫಿಪ್ರೊನಿಲ್ 0.3ಜಿ ಹರಳುಗಳನ್ನು ಗದ್ದೆಯಿಂದ ನೀರನ್ನು ಬಸಿದು ನಂತರ ಎರಚಬೇಕು. ಕನಿಷ್ಟ 36 ಗಂಟೆಗಳ ನಂತರ ನೀರನ್ನು ಗದ್ದೆಗೆ ಹರಿಯಬಿಡಬೇಕು. ಹರಳು ರೂಪದ ಕೀಟನಾಶಕಗಳನ್ನು ಉಪಯೋಗಿಸಿದಾಗ ಮೇವು ಮತ್ತು ಕಾಳನ್ನು ಬಳಕೆಗೆ ಉಪಯೋಗಿಸಬಾರದು. ಕಾರ್ಬೊಫ್ಯುರಾನ್, ಫಿಪ್ರೊನಿಲ್ ಉಪಯೋಗಿಸಿದಾಗ 30 ದಿನಗಳವರೆಗೆ ಬಳಕೆಯನ್ನು ತಡೆಯಬೇಕು’ ಎಂಬುದು ಅಧಿಕಾರಿಗಳ ಸಲಹೆ.

Advertisement. Scroll to continue reading.

 

Previous Post

ಮುಂಬಡ್ತಿ ಸಿಕ್ಕರೂ ಸ್ವೀಕರಿಸದ ಮಾತೃಹೃದಯಿ: ಜನ ಮೆಚ್ಚಿದ ಶಿಕ್ಷಕಿಗೆ ಸೇವಾ ನಿವೃತ್ತಿ

Next Post

ಆನೆ ಬಂತು ಆನೆ | ಯಾವ ಊರಿನ ಆನೆ? ಇಲ್ಲಿಗೆ ಯಾಕೆ ಬಂತು?

Next Post

ಆನೆ ಬಂತು ಆನೆ | ಯಾವ ಊರಿನ ಆನೆ? ಇಲ್ಲಿಗೆ ಯಾಕೆ ಬಂತು?

Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ. ನುರಿತ ಪತ್ರಕರ್ತ ಶ್ರೀಧರ ಅಣಲಗಾರ್ ಶ್ರೀ ನ್ಯೂಸ್ ರೂವಾರಿ.

ಸಹಾಯ ಬೇಕಿದ್ದರೆ ಇಲ್ಲಿ ವಾಟ್ಸಪ್ ಮಾಡಿ