6
  • Latest
Attack on lodge suspended by PSI

ಅಮಾನತು ಆದವರಿಗೂ ಅಧಿಕಾರದ ಭಾಗ್ಯ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಸ್ಥಳೀಯ

ಅಮಾನತು ಆದವರಿಗೂ ಅಧಿಕಾರದ ಭಾಗ್ಯ!

AchyutKumar by AchyutKumar
September 13, 2024
in ಸ್ಥಳೀಯ
Attack on lodge suspended by PSI
advt advt advt
ADVERTISEMENT

ಹೊನ್ನಾವರ: ಮುರುಡೇಶ್ವರದ ಲಾಡ್ಜವೊಂದರಲ್ಲಿ ನಡೆಯುತ್ತಿದ್ದ ಅನೈತಿಕ ಚಟುವಟಿಕೆ ತಡೆಯುವಲ್ಲಿ ವಿಫಲವಾಗಿ ಅಮಾನತುಗೊಂಡಿದ್ದ ಪಿಎಸ್‌ಐ ಮಂಜುನಾಥ ಅವರಿಗೆ ಹೊನ್ನಾವರದಲ್ಲಿ ಅಧಿಕಾರದ ಭಾಗ್ಯ ದೊರೆತಿದೆ.

ಮಂಜುನಾಥ ಅವರ ಮೇಲೆ ಇಲಾಖಾ ವಿಚಾರಣೆ ಬಾಕಿಯಿರುವಾಗಲೇ ಹೊನ್ನಾವರದ ಪಿಎಸ್‌ಐ ಆಗಿ ಅಧಿಕಾರವಹಿಸಿಕೊಳ್ಳುವಂತೆ ದಿಡೀರ್ ಆದೇಶವಾಗಿದೆ. ಹೊನ್ನಾವರ ಠಾಣೆಯಲ್ಲಿ ಪಿಎಸ್‌ಐ ಆಗಿದ್ದ ಮಹಾಂತೇಶ್ ನಾಯಕ ಅವರನ್ನು ಮಂಗಳೂರು ಐಜಿ ಕಚೇರಿಗೆ ವರ್ಗಾಯಿಸಲಾಗಿದೆ. ಅಮಾನತು ಆದ ಪಿಎಸ್‌ಐನ್ನು ಪಕ್ಕದ ಊರಿನ ಠಾಣೆಗೆ ವರ್ಗಾಯಿಸಿರುವ ಬಗ್ಗೆ ಅನುಮಾನ ಹಾಗೂ ಆಕ್ಷೇಪಗಳು ವ್ಯಕ್ತವಾಗಿದೆ.

ADVERTISEMENT
ADVERTISEMENT

ಅಕ್ರಮ ಅಡ್ಡೆ ಮೇಲೆ ಪೊಲೀಸ್ ದಾಳಿ

ಭಟ್ಕಳ: ಬಂದರು ರೋಡಿನ ಪ್ರಶಾಂತ ದೇವೇಂದ್ರ ನಾಯ್ಕ (42) ಹಾಗೂ ಮುರುಡೇಶ್ವರ ಸೋನಾರಕೇರಿಯ ಕೃಷ್ಣ ಮಾರಿ ನಾಯ್ಕ (54) ಎಂಬಾತರು ಕಾನೂನುಬಾಹಿರ ಚಟುವಟಿಕೆ ನಡೆಸುತ್ತಿದ್ದಾಗ ಪೊಲೀಸರ ಬಲೆಗೆ ಬಿದ್ದಿದ್ದಾರೆ.

ಸೆ 12ರ ಸಂಜೆ ಶಂಶುದ್ದಿನ್ ಸರ್ಕಲ್ ಬಳಿ ಪಿಎಸ್‌ಐ ನವೀನ ನಾಯ್ಕ ದಾಳಿ ನಡೆಸಿದಾಗ ಪ್ರಶಾಂತ ಬಳಿ 16800ರೂ ಸಿಕ್ಕಿದೆ. ಆತನ ಬಳಿಯಿದ್ದ ಜೂಜಾಟದ ಸಲಕರಣೆಗಳನ್ನು ಪೊಲೀಸರು ವಶಕ್ಕೆ ಪಡೆದರು. ಅದೇ ದಿನ ಮುರುಡೇಶ್ವರ ಪಿಎಸ್‌ಐ ಹಣಮಂತ ಬೀರಾದರ್ ಮುರುಡೇಶ್ವರ ಬೀದಿಯ ಗೂಡಂಗಡಿಯಲ್ಲಿ ಸರಾಯಿ ಮಾರಾಟ ಮಾಡುತ್ತಿದ್ದ ಕೃಷ್ಣ ನಾಯ್ಕರನ್ನು ವಶಕ್ಕೆ ಪಡೆದಿದ್ದು, ವಿವಿಧ ಬಗೆಯ ಮದ್ಯಗಳು ಸಿಕ್ಕಿವೆ.

ಬಾವಿಗೆ ಬಿದ್ದ ಮದ್ಯ ವ್ಯಸನಿ

ಕುಮಟಾ: ಮೂರುರು ಬೋಳಗುಡ್ಡೆಯ ಗೌರೀಶ ಮಂಜುನಾಥ ಹೆಗಡೆ (35) ಎಂಬಾತರ ಶವ ಪಕ್ಕದಮನೆ ಬಾವಿಯಲ್ಲಿ ಸಿಕ್ಕಿದೆ.

ಕೂಲಿ ಮಾಡಿ ಜೀವನ ನಡೆಸುತ್ತಿದ್ದ ಗೌರೀಶ್ ಸರಾಯಿ ಕುಡಿಯುವ ಚಟ ಹೊಂದಿದ್ದು, ಮನೆಗೆ ಸರಿಯಾಗಿ ಬರುತ್ತಿರಲಿಲ್ಲ. ಸೆ 10ರಂದು ಮನೆಯಿಂದ ಹೊರಹೋದ ಅವರನ್ನು ನಂತರ ಯಾರೂ ನೋಡಿಲ್ಲ. ಸೆ 12ರಂದು ಪಕ್ಕದ ಮನೆಯ ತೆರದ ಬಾವಿಯಲ್ಲಿ ಅವರ ಶವ ಕಾಣಿಸಿದೆ. ಕಾಲು ಜಾರಿ ಬಾವಿಗೆ ಬಿದ್ದು ಸಾವನಪ್ಪಿರುವ ಶಂಕೆಯಿರುವುದಾಗಿ ಅವರ ತಮ್ಮ ಗಣೇಶ ಮಂಜುನಾಥ ಹೆಗಡೆ ಪೊಲೀಸರಿಗೆ ತಿಳಿಸಿದ್ದಾರೆ.

Advertisement. Scroll to continue reading.
Advertisement. Scroll to continue reading.

ಮೆರವಣಿಗೆಯಲ್ಲಿ ಮರಣವಾದ ಮಾರುತಿ

ಭಟ್ಕಳ: ಗಣೇಶ ಮೂರ್ತಿ ವಿರ್ಸಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದ ಮಾರುತಿ ಚೌಡಯ್ಯ ದೇವಾಡಿಗ (62) ಎಂಬಾತರು ಸಾವನಪ್ಪಿದ್ದಾರೆ.

ಮಾರುತಿ ಜನತಾ ಪತ್ತಿನ ಸಹಕಾರಿ ಸಂಘದ ನಿವೃತ್ತ ನೌಕರರಾಗಿದ್ದರು. ಬೇಂಗ್ರೆ ಮಾವಿನಕಟ್ಟಾದವರಾದ ಅವರು ಬುಧವಾರ ರಾತ್ರಿ ಗಣಪತಿ ವಿಸರ್ಜನಾ ಮೆರವಣಿಗೆಯಲ್ಲಿ ಭಾಗವಹಿಸಿದ್ದರು. ಹೂವಿನಮಾರುಕಟ್ಟೆಯ ಗುಡಿಗಾರರ ಮನೆ ಸಮೀಪ ಮೆರವಣಿಗೆ ಸಾಗುತ್ತಿದ್ದಾಗ ಏಕಾಏಕಿ ಕುಸಿದು ಬಿದ್ದು ಸಾವನಪ್ಪಿದ್ದಾರೆ. ಪ್ರತಿ ವರ್ಷ ವಿಶ್ವ ಹಿಂದೂ ಪರಿಷತ್ ಸ್ಥಾಪಿಸುವ ಗಣಪತಿ ವಿಗ್ರಹದ ಮೇಲ್ವಿಚಾರಣೆಯನ್ನು ಅವರು ನೋಡಿಕೊಳ್ಳುತ್ತಿದ್ದರು.

 

ShareSendTweetShare
ADVERTISEMENT
Previous Post

ಶಿಕ್ಷಣ ಸಂಸ್ಥೆ ಮೇಲೆ ದುಷ್ಟರ ಕಣ್ಣು!

Next Post

ಕಸ ಸಹ ಸಂಪನ್ಮೂಲ: ಸ್ವಚ್ಛತೆಯ ಪಾಠ ಮಾಡಿದ ಸಂಸದ ಕಾಗೇರಿ

Next Post

ಕಸ ಸಹ ಸಂಪನ್ಮೂಲ: ಸ್ವಚ್ಛತೆಯ ಪಾಠ ಮಾಡಿದ ಸಂಸದ ಕಾಗೇರಿ

ಗಾಂಧೀಜಿ ಮಹಾತ್ಮೆ ಸಾರಿದ ವಾರ್ತಾ ಇಲಾಖೆ: ಸ್ಪರ್ಧಾ ವಿಜೇತರ ಯಾದಿ ಬಿಡುಗಡೆ

ಶಿರಸಿಯ ಮಾನ ಕಳೆದ ಬಸ್ ಕ್ಯಾಂಟಿನ್!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.