6
  • Latest

ಯಕ್ಷಶ್ರೀ: ಭಟ್ಟರ ಕಲಾಸೇವೆಗೆ ಧಾರ್ಮಿಕ ಮನೆಯೇ ವೇದಿಕೆ!

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಮಾರತಹಳ್ಳಿಯಲ್ಲಿ “ಜಿಸ್ಮತ್ ಜೈಲ್ ಮಂಡಿ” ಉದ್ಘಾಟನೆ

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ: ಭಟ್ಟರ ಕಲಾಸೇವೆಗೆ ಧಾರ್ಮಿಕ ಮನೆಯೇ ವೇದಿಕೆ!

AchyutKumar by AchyutKumar
September 13, 2024
in ಲೇಖನ
advt advt advt
ADVERTISEMENT

ಪೌರೋಹಿತ್ಯ ಬದುಕಿನ ಬಿಡುವಿಲ್ಲದ ವೇಳೆಯಲ್ಲಿಯೂ ಬಿಡುವು ಮಾಡಿಕೊಂಡ ಗಣಪತಿ ಭಟ್ಟರು ಕಳೆದ ಐದು ದಶಕಗಳಿಂದ ತಾಳಮದ್ದಲೆ ಅರ್ಥದಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ.

ಯಲ್ಲಾಪುರ ತಾಲೂಕಿನ ಮಾಗೋಡಿನವರಾದ ಗಣಪತಿ ಭಟ್ಟರು ಓದಿದ್ದು 7ನೇ ತರಗತಿ. ಆದರೂ ಸಂಸ್ಕೃತ, ಜ್ಯೋತಿಷ್ಯ ಹಾಗೂ ವೇದಭ್ಯಾಸ ಅಧ್ಯಯನ ಅಪಾರ. ಸ್ವರ್ಣವಲ್ಲಿ ಮಠ ಅವರ ಮೊದಲ ಪಾಠಶಾಲೆ. ಅಲ್ಲಿಂದ ಊರಿಗೆ ಮರಳಿದ ನಂತರ ವಿವಿಧ ಧಾರ್ಮಿಕ ಕಾರ್ಯಕ್ರಮಗಳಿಗೆ ಹೋಗುತ್ತಿದ್ದರು. ಆ ಕಾಲದಲ್ಲಿ ವೈದಿಕರು ಅರ್ಥಧಾರಿಗಳಾಗಿದ್ದರೆ ಅಂಥವರಿಗೆ ಹೆಚ್ಚಿನ ಮನ್ನಣೆ. ಹೀಗಾಗಿ ಅವರು ಹೋದ ಕಡೆಗಳೆಲ್ಲ ಅಲ್ಲಿದ್ದವರು ತಾಳಮದ್ದಲೆ ಅರ್ಥ ಹೇಳುವಂತೆ ಒತ್ತಾಯಿಸುತ್ತಿದ್ದರು. ಧಾರ್ಮಿಕ ಕಾರ್ಯಕ್ರಮ ಮುಗಿದ ನಂತರ ಒಂದಷ್ಟು ಪದ್ಯದೊಂದಿಗೆ ಅದರ ವಿವರಣೆ ನೀಡಿ ಬರುವುದು ಭಟ್ಟರ ಹವ್ಯಾಸವಾಗಿತ್ತು.

ADVERTISEMENT
ADVERTISEMENT

ತಮ್ಮ 20 ನೇ ವಯಸ್ಸಿನಲ್ಲಿ ಗಣಪತಿ ಭಟ್ಟರು ಅರ್ಥಗಾರಿಕೆಯನ್ನು ಆರಂಭಿಸಿದರು. ವ್ರತಗಳ ಉದ್ಯಾಪನೆ, ವೈಕುಂಠ ಸಮಾರಾಧನೆ, ತಿಥಿಗಳಿಗೆ ತೆರಳಿದಾಗ ಸಹ ಅವರ ಮಾತಿಗೆ ಜನ ತಲೆದೂಗುತ್ತಿದ್ದರು. ತಾರೀಮಕ್ಕಿ ರಾಮಚಂದ್ರ ಭಟ್ರು, ಬೆಳಖಂಡ ದೇವ ಭಟ್ರು ಮೊದಲಾದ ಹಿರಿಯರ ಪ್ರೋತ್ಸಾಹ ಹಾಗೂ ಮಾರ್ಗದರ್ಶನದಲ್ಲಿ ಅವರು ಪಳಗಿದ್ದರು. ಈ ವೇಳೆ ಗಣಪತಿ ಭಟ್ಟರ ಜೊತೆಯಲ್ಲಿ ಮಾಗೋಡ ರಾಮಕೃಷ್ಣ ಭಟ್ಟ, ಮೊಟ್ಟೆಗದ್ದೆ ನಾರಾಯಣ ಭಟ್ಟ, ಬಾಲೀಗದ್ದೆಯ ತಿಮ್ಮಣ್ಣ ಭಟ್ಟ ಮೊದಲಾದ ವೈದಿಕರು ಅರ್ಥ ಹೇಳಲು ಶುರು ಮಾಡಿ, ವೈದಿಕ ಅರ್ಥದಾರಿಗಳ ತಂಡವೇ ಮಾಗೋಡು ಊರಿನಲ್ಲಿ ಸಿದ್ಧವಾಗಿತ್ತು!

Advertisement. Scroll to continue reading.
Advertisement. Scroll to continue reading.

ಕೃಷ್ಣ, ವಿದುರ, ಕರ್ಣ, ಧರ್ಮರಾಯ, ದೇವೇಂದ್ರ, ಅಂಬೆ, ಸಾವಿತ್ರಿ ಸೇರಿದಂತೆ ಎಲ್ಲ ಬಗೆಯ ಪಾತ್ರಗಳನ್ನೂ ಗಣಪತಿ ಭಟ್ಟರು ನಿರ್ವಹಿಸಿದ್ದಾರೆ. ಭಕ್ತಿ, ದುಃಖ, ಭಾವನಾತ್ಮಕ ಪಾತ್ರಗಳಿಂದ ಹೆಸರು ಪಡೆದಿದ್ದಾರೆ. ಮಾಗೋಡ, ಚಂದಗುಳಿ, ಅಣಲಗಾರ, ನಂದೊಳ್ಳಿ, ಕವಡಿಕೆರೆ, ಮಲವಳ್ಳಿ, ಹೆಗ್ಗಾರ ಮುಂತಾದ ಭಾಗಗಳಲ್ಲಿ ಹೆಚ್ಚಿನ ತಾಳಮದ್ದಲೆಗಳನ್ನು ನಡೆಸಿದ್ದಾರೆ. ತ್ರಿವೇದಿ, ನಿಸ್ರಾಣಿ, ಪ್ರಭಾಕರ ಜೋಶಿ, ಅನಂತ ವೈದ್ಯ ಮುಂತಾದ ಪ್ರಸಿದ್ಧ ಕಲಾವಿದರ ಜೊತೆ ಸೇರಿ ಅರ್ಥ ಹೇಳಿದ್ದಾರೆ. ಗಣಪತಿ ಭಟ್ಟರ ಸೇವೆ ಗಮನಿಸಿ ಅನೇಕ ಸನ್ಮಾನಗಳು ದೊರೆತಿವೆ. ಅಖಿಲ ಹವ್ಯಕ ಮಹಾಸಭಾದಿಂದ `ಹವ್ಯಕ ಸಾಧಕ’ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ.

* ಕರ್ನಾಟಕ ಕಲಾ ಸನ್ನಿಧಿ, ತೇಲಂಗಾರ

ShareSendTweetShare
ADVERTISEMENT
Previous Post

ಶಿರಸಿಯ ಮಾನ ಕಳೆದ ಬಸ್ ಕ್ಯಾಂಟಿನ್!

Next Post

ಸರ್ಕಾರದ ಬಳಿ ಪೌಷ್ಠಿಕ ಆಹಾರಕ್ಕೂ ಕಾಸಿಲ್ಲ: ಚಿಣ್ಣರಿಗೆ ಊಟದ ಬದಲು ಖಾರದ ಉಪ್ಪಿಟ್ಟು!

Next Post

ಸರ್ಕಾರದ ಬಳಿ ಪೌಷ್ಠಿಕ ಆಹಾರಕ್ಕೂ ಕಾಸಿಲ್ಲ: ಚಿಣ್ಣರಿಗೆ ಊಟದ ಬದಲು ಖಾರದ ಉಪ್ಪಿಟ್ಟು!

ರೈತರಿಗೆ ನೆರವಾದ ಸವಣಗೇರಿ ಹಾಲು ಉತ್ಪಾದಕ ಸಂಘ

ಪ್ರಾಣಿಪ್ರಿಯ ಪೊಲೀಸರಿಗೆ ಗೋ ಪ್ರೇಮಿಗಳ ಜೈಕಾರ: ಅಕ್ರಮ ಸಾಗಾಟದ ಸುಳಿವು ನೀಡಿದ ಸಗಣಿ ವಾಸನೆ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.