6
  • Latest

ಯಕ್ಷಶ್ರೀ | ನಾಟಕದ ಜೊತೆ ಯಕ್ಷನೃತ್ಯ: ಎಲ್ಲಾ ರಂಗದಲ್ಲಿಯೂ ಹೆಸರುವಾಸಿ ಈ ಹೆಗಡೆರು!

ಬೆಂಗಳೂರು ಜವಾನ್ಸ್ ಚಾಂಪಿಯನ್

ಬೆಂಗಳೂರು ಜವಾನ್ಸ್ ಚಾಂಪಿಯನ್

ಮಾಗೋಡ ಆಲೆಮನೆ ಹಬ್ಬ ಇಂದು

ಮಾಗೋಡ ಆಲೆಮನೆ ಹಬ್ಬ ಇಂದು

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ಮಂಚಿಕೇರಿ‌ ಬಳಿ ಖಾಸಗಿ ಬಸ್ ಪಲ್ಟಿ

ADVERTISEMENT
  • Home
Wednesday, February 11, 2026
  • Login
Srinews
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
No Result
View All Result
Srinews
No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ
Home ಲೇಖನ

ಯಕ್ಷಶ್ರೀ | ನಾಟಕದ ಜೊತೆ ಯಕ್ಷನೃತ್ಯ: ಎಲ್ಲಾ ರಂಗದಲ್ಲಿಯೂ ಹೆಸರುವಾಸಿ ಈ ಹೆಗಡೆರು!

AchyutKumar by AchyutKumar
September 18, 2024
in ಲೇಖನ
advt advt advt
ADVERTISEMENT

ಜಂಬೇಸಾಲಿನ ಆರ್ ಎಸ್ ಹೆಗಡೆ ಅವರು ಯಕ್ಷಗಾನದ ಹಿಮ್ಮೇಳ, ಮುಮ್ಮೇಳಗಳ ಜೊತೆ ಸಂಗೀತ, ನಾಟಕ ಹಾಗೂ ಸಾಹಿತ್ಯ ಕೃಷಿಯನ್ನು ನಡೆಸಿದ್ದಾರೆ.

ಹುತ್ಕಂಡ ಶಾಲೆಯಲ್ಲಿ ಕಲಿತ ಅವರು ಶಾಲೆಗೆ ಹೋಗುವ ಅವಧಿಯಲ್ಲಿಯೇ ಸಹೋದರ ಸುಬ್ರಾಯ ಭಟ್ಟ ಅವರಲ್ಲಿ ತಾಳ-ಮೇಳದ ಅಭ್ಯಾಸ ನಡೆಸಿದರು. ದೇಸಾಯಿಮನೆಯ ನಾರಾಯಣ ದೇಸಾಯಿ ಹಾಗೂ ವಿಶ್ವನಾಥ ಹೆಗಡೆ ಅವರಿಂದ ಹಾರ್ಮೋನಿಯಂ ಹಾಗೂ ಸಂಗೀತ ಜ್ಞಾನ ಬೆಳಸಿಕೊಂಡರು.

ADVERTISEMENT
ADVERTISEMENT

ಬಲೆಕಣಿಯಲ್ಲಿ ನಡೆದ ಅಣಲಗಾರ ಮೇಳದ ಯಕ್ಷಗಾನದ ಮೂಲಕ ರಂಗ ಪ್ರವೇಶ ಮಾಡಿದರು. ನಂತರ ಅಣಲಗಾರ ಮೇಳದಲ್ಲಿ ಮಹಿಳಾ ವೇಷಧಾರಿಯಾಗಿ ಮುಂದುವರಿದರು. ಆಗ ಮೇಳದಲ್ಲಿದ್ದ ಸಣ್ಣಣ್ಣ ಭಾಗ್ವತ, ಗೋಳಿಗದ್ದೆ ಸುಬ್ರಾಯ ಭಟ್ಟ, ನರಸಿಂಹ ಭಟ್ಟ ಜವಳೆಕೆರೆ, ರಾಮಚಂದ್ರ ಭಾಗ್ವತ ಕವಾಳೆ, ನಾಗೇಶ ಭಟ್ಟ ಬಾಲಿಗದ್ದೆ ಹಾಗೂ ಅತಿಥಿ ಕಲಾವಿದರಾಗಿದ್ದ ಕುಮಟಾದ ಗೋವಿಂದ ನಾಯ್ಕ, ಉತ್ತಮ ನಾಯ್ಕ ಹಾಗೂ ಮೂರೂರಿನ ಕೃಷ್ಣ ಹೆಗಡೆ ಅವರು ಆರ್ ಎಸ್ ಹೆಗಡೆ ಅವರನ್ನು ಪ್ರೋತ್ಸಾಹಿಸಿದರು.

ಯಲ್ಲಾಪುರದ ಹಲವು ಭಾಗಗಳಲ್ಲಿ ಅವರು ಯಕ್ಷವೇಷ ಧರಿಸಿದ್ದಾರೆ. ಶಿರಸಿಯ ಹುಲೇಕಲ್, ವಾನಳ್ಳಿ, ಜಡ್ಡಿಗದ್ದೆ ಮುಂತಾದ ಭಾಗಗಳಲ್ಲಿಯೂ ಹಲವು ಆಟಗಳಲ್ಲಿ ವೇಷ ಮಾಡಿದ್ದಾರೆ. ಅಂಬೆ, ಮೋಹಿನಿ, ದಾಕ್ಷಾಯಿಣಿ, ವಿಷಯೆ ಸೇರಿದಂತೆ ಮುಖ್ಯ ಮಹಿಳಾ ವೇಷಗಳಲ್ಲಿ ಹೆಸರುಗಳಿಸಿದ ಆರ್.ಎಸ್.ಹೆಗಡೆ ಆ ಕಾಲದಲ್ಲಿಯೇ ಬಹುಬೇಡಿಕೆಯ ವೇಷಧಾರಿ!

ಮೂರು ದಶಕದ ಹಿಂದೆಯೇ ಒಂದೇ ರಾತ್ರಿಯಲ್ಲಿ 3 ಕಡೆ ಆಟ ಕುಣಿದವರು ಆರ್ ಎಸ್ ಹೆಗಡೆಯವರು. ಹುತ್ಕಂಡದಲ್ಲಿ ಒಂದು ವೇಷ ಮಾಡಿ, ನಂತರ ಚಕ್ಕಡಿಗಾಡಿ ಏರಿ ಬಳಗಾರಿಗೆ ಹೋಗಿ ಇನ್ನೊಂದು ಆಟ ಮಾಡಿದ್ದು ಅವರ ಬೇಡಿಕೆಗೆ ಸಾಕ್ಷಿ. ಒಂದು ಆಟ ಮುಗಿಸಿ ಇನ್ನೊಂದು ಯಕ್ಷ ವೇದಿಕೆಗೆ ಹೋಗುವಾಗ ವಾಹನ ಸಿಗದಿದ್ದರೆ ನಡದೇ ಹೋಗುವುದಕ್ಕೆ ಸಹ ಅವರು ಬೇಸರಿಸುತ್ತಿರಲಿಲ್ಲ.

Advertisement. Scroll to continue reading.

ಆಕಾಶವಾಣಿಯಲ್ಲಿ ಒಂದು ತಾಳಮದ್ದಲೆಯ ಕಾರ್ಯಕ್ರಮ ನೀಡಲು ಹೋದಾಗ ಅಲ್ಲಿ ಭಾಗವತಿಕೆ ಮಾಡುವವರು ಬಂದಿರಲಿಲ್ಲ. ಸಂಗೀತ ಜ್ಞಾನ ಹೊಂದಿದ್ದ ಹೆಗಡೆಯವರೇ ಭಾಗವತಿಕೆಯನ್ನು ಮಾಡಿದರು. ನಂತರ 15 ವರ್ಷಗಳ ಕಾಲ ಆಕಾಶವಾಣಿಯಲ್ಲಿ ಬಗೆ ಬಗೆಯ ಕಾರ್ಯಕ್ರಮ ನಡೆಸಿಕೊಟ್ಟರು. ಕಲೆಯೊಳಗಿನ ಸೆಳೆತ ಅವರನ್ನು ಭಾಗವತಿಕೆಯಲ್ಲಿ ಮುಂದುವರೆಸಿತು. ಜಡ್ಡಿಗದ್ದೆ, ವಾನಳ್ಳಿ, ಬಿಸಗೋಡ, ಕುಚಗಾಂವ ಸೇರಿ ಅನೇಕ ಕಡೆ ಅವರು ಯಕ್ಷಗಾನ ತರಬೇತಿ ನೀಡಿದ್ದಾರೆ.

Advertisement. Scroll to continue reading.

ರಾಮಕೃಷ್ಣ ಭಟ್ಟ ಕೆಳಗಿನಪಾಲ, ಈಶ್ವರದಾಸ ಕೊಪ್ಪೆಸರ ಅವರ ಹರಿಕಿರ್ತನೆಗಳಿಗೆ ಹಾರ್ಮೋನಿಯಂ ನುಡಿಸುತ್ತಿದ್ದರು. ಈ ನಡುವೆ ಮಂಚಿಕೇರಿಯ ಕಂಪನಿಯೊ0ದರಲ್ಲಿ ಅವರಿಗೆ ಹಾರ್ಮೋನಿಯಂ ನುಡಿಸುವ ಅವಕಾಶ ದೊರೆಯಿತು. ಅದನ್ನು ಸಮರ್ಥವಾಗಿ ಬಳಸಿಕೊಂಡರು. ಗ್ರಾಮೀಣ ಭಾಗಗಳಲ್ಲಿ ಹಲವರಿಗೆ ಹಾರ್ಮೋನಿಯಂ ಹಾಗೂ ಸಂಗೀತದ ತರಬೇತಿ ನೀಡಿದ ಅವರು ಮಕ್ಕಳಿಗೆ ಪೌರಾಣಿಕ ನಾಟಕದ ನಿರ್ದೇಶನ ಮಾಡಿದ್ದಾರೆ. ಆರೋಗ್ಯ ಜಾಗೃತಿಗಾಗಿ ಸಹ ಅವರು ಕಾರ್ಯಕ್ರಮ ನಡೆಸಿಕೊಟ್ಟಿದ್ದಾರೆ.

74ರ ಇಳಿ ವಯಸ್ಸಿನಲ್ಲಿಯೂ ಯಕ್ಷಪದ್ಯಗಳನ್ನು ಹಾಡುವ ಆರ್ ಎಸ್ ಹೆಗಡೆ ಅವರು ಯಲ್ಲಾಪುರದ ಕಾಳಮ್ಮನಗರದಲ್ಲಿ ಮಾತಿಗೆ ಸಿಗುತ್ತಾರೆ. ಬಿಡುವಾದಾಗಲೆಲ್ಲ ಮನೆಯಲ್ಲಿ ಹಾರ್ಮೋನಿಯಂ ಹಿಡಿದು ಸಂಗೀತದ ಅಭ್ಯಾಸ ನಡೆಸುತ್ತಾರೆ.

– ಕರ್ನಾಟಕ ಕಲಾ ಸನ್ನಿಧಿ

ShareSendTweetShare
ADVERTISEMENT
Previous Post

ನೀವು SBI ಗ್ರಾಹಕರಾ? ಸರಿಯಾದ ಸೇವೆ ಸಿಗುತ್ತಿಲ್ಲವಾ? ಹಾಗಾದರೆ ನೀವು ಹೀಗೆ ಮಾಡಿ..!

Next Post

ಕೋವಿಡ್’ಗಿಂತ ಅಪಾಯಕಾರಿಯಾಗಿ ಕಾಡುವ ಎಲೆಚುಕ್ಕಿ ರೋಗ!

Next Post

ಕೋವಿಡ್'ಗಿಂತ ಅಪಾಯಕಾರಿಯಾಗಿ ಕಾಡುವ ಎಲೆಚುಕ್ಕಿ ರೋಗ!

ARM ಸಿನಿಮಾ 50 ಕೋಟಿ ಕಲೆಕ್ಷನ್ ; ಪ್ಯಾನ್ ಇಂಡಿಯಾ ಸ್ಟಾರ್ ದ ಟೋವಿನೋ ಥಾಮಸ್!

ಮನುಷ್ಯರನ್ನು ಬಿಟ್ಟಿಲ್ಲ ಭಯಾನಕ ರೋಗ: ಹುಚ್ಚು ನಾಯಿಗಳಿವೆ ಎಚ್ಚರ!

ADVERTISEMENT
Srinews

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.

Navigate Site

  • ಹೋಮ್
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

Follow Us

Welcome Back!

Login to your account below

Forgotten Password?

Retrieve your password

Please enter your username or email address to reset your password.

Log In

Add New Playlist

You cannot copy content of this page

No Result
View All Result
  • ಲೇಖನ
  • ವಾಣಿಜ್ಯ
  • ಸ್ಥಳೀಯ
  • ರಾಜ್ಯ
  • ದೇಶ – ವಿದೇಶ
  • ರಾಜಕೀಯ
  • ಸಿನೆಮಾ
  • ವಿಡಿಯೋ

ಶ್ರೀ ನ್ಯೂಸ್ ವೆಬ್‌ಪೋರ್ಟಲ್ ಭಾರತ ಸರ್ಕಾರದ ಕಿರು ಮತ್ತು ಉದ್ದಿಮೆ ಸಚಿವಾಲಯದ ನೊಂದಾಯಿತ ಸಂಸ್ಥೆ. ಅನುಭವಿ ಪತ್ರಕರ್ತರ ತಂಡ ಮುನ್ನಡೆಸುತ್ತಿರುವ ಶ್ರೀ ನ್ಯೂಸ್ ಡಿಜಿಟಲ್'ಗೆ ಇದೀಗ ವರ್ಷದ ಸಂಭ್ರಮ.