ಹೊನ್ನಾವರ: ಮಂಕಿಯಲ್ಲಿನ ಕೃಷಿ ಮಾರಾಟ ಮಳಿಗೆಗೆ ನುಗ್ಗಿ ಕಳ್ಳತನ ಮಾಡಿದ್ದ ಇಬ್ಬರನ್ನು ಪೊಲೀಸರು ಬಂಧಿಸಿದ್ದಾರೆ.
ಸೆ 19ರಂದು ಕಳ್ಳತನ ನಡೆದ ಬಗ್ಗೆ ಶ್ರೀಪಾದ ಮಂಜುನಾಥ ನಾಯ್ಕ ಎಂಬಾತರು ದೂರು ನೀಡಿದ್ದರು. ಕೃಷಿ ಮಳಿಗೆ ಕಳ್ಳತನದ ನಂತರ ಅಂಗಡಿ ಮುಂದಿದ್ದ ವಾಹನದ ಬ್ಯಾಟರಿಯನ್ನು ಅವರು ಕದ್ದಿದ್ದರು. ಕಳ್ಳತನ ಮಾಡಿದ ಭಟ್ಕಳದ ಮೊಹಮದ್ ರಾಹಿಕ್ ಮಹಮದ್ ಗೌಸ್ ಹಾಗೂ ಕುಂದಾಪುರದ ಶಪಾದ್ ಮಹಮದ್ ಗೌಸ್ ಬೈಂದೂರು ಬಳಿ ಹುಡುಗಿ ಚುಡಾಯಿಸಿ ಸಿಕ್ಕಿಬಿದ್ದಿದ್ದಾರೆ. ಸಾರ್ವಜನಿಕರೇ ಅವರನ್ನು ಹಿಡಿದು ಪೊಲೀಸರಿಗೆ ಒಪ್ಪಿಸಿದ್ದಾರೆ. ಕಳ್ಳತನಕ್ಕೆ ಬಳಸಿದ್ದ ಕಾರನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಇದನ್ನೂ ಓದಿ: ಕೃಷಿ ಮಳಿಗೆ ಮೇಲೆ ಕಳ್ಳರ ಕಣ್ಣು




